"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 3 April 2016

☀️ 2014ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ :

☀️ 2014ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ :
━━━━━━━━━━━━━━━━━━━━━━━━━━━━━━━━━━━━━━━━━━━━━━━

ಚಿಂತಕ ಡಾ.ಜಿ.ರಾಮಕೃಷ್ಣ, ಹಿರಿಯ ಸಂಶೋಧಕ ಷ.ಶೆಟ್ಟರ್, ಹಿರಿಯ ಕವಿ ಸುಬ್ಯಾಯ ಚೊಕ್ಕಾಡಿ, ಕವಯತ್ರಿಯವರಾದ ಶಿವಮೊಗ್ಗದ ಸವಿತಾ ನಾಗಭೂಷಣ ಮತ್ತು ಧಾರವಾಡದ ಪ್ರೊ.ಸುಕನ್ಯಾ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2014ನೇ ಸಾಲಿನ ಗೌರವ ಪ್ರಶಸ್ತಿಗಳನ್ನು ಘೋಷಿಸಿದೆ ಇದರ ಜತೆಗೆ 2013ನೇ ಸಾಲಿನ ಪುಸ್ತಕ ಪ್ರಶಸ್ತಿ ಮತ್ತು 6 ದತ್ತಿನಿಧಿ ಪ್ರಶಸ್ತಿಗಳನ್ನೂ ಪ್ರಕಟಿಸಲಾಗಿದೆ. ಎಂದು ಅಕಾಡೆಮಿಯ ಅಧ್ಯಕ್ಷೆ ಪ್ರೋ. ಮಾಲತಿ ಪಟ್ಟಣಶೆಟ್ಟಿ ತಿಳಿಸಿದ್ದಾರೆ. ( 30-03-2016)

ಗೌರವ ಪ್ರಶಸ್ತಿಯು ತಲಾ 10 ಸಾವಿರ ರೂ. ನಗದನ್ನು ಒಳಗೊಂಡಿದ್ದರೆ ಪುಸ್ತಕ ಪ್ರಶಸ್ತಿ ಮತ್ತು ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ರೂ.ನಗದನ್ನು ಒಳಗೊಂಡಿದೆ. ಈ ಎಲ್ಲ ಪ್ರಶಸ್ತಿಗಳನ್ನು ಏಪ್ರಿಲ್ 29ರಂದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಪ್ರಧಾನ ಮಾಡಲಾಗುವುದು.


☀️2013ರ ದತ್ತಿನಿಧಿ ಬಹುಮಾನ

ಅನಾವರಣ: ಸಿ.ಆರ್.ಪಾರ್ಥಸಾರಥಿ (ಕಾದಂಬರಿ ಪ್ರಕಾರ, ಚದುರಂಗ ದತ್ತಿನಿಧಿ)

ನೆಲದೊಡಲ ಚಿಗುರು: ಎನ್.ಎಲ್.ಆನಂದ್-ಗುಂಡಪ್ಪ ದೇವಿಕೇರಿ(ಜೀವನಚರಿತ್ರೆ, ಸಿಂಪಿಲಿಂಗಣ್ಣ ದತ್ತಿನಿಧಿ)

ಸಾಹಿತ್ಯ ಸಿಂಚನ: ಬಸವರಾಜ ಸಬರದ (ಸಾಹಿತ್ಯ ವಿಮರ್ಶೆ, ಪಿ.ಶ್ರೀನಿವಾಸರಾವ್ ದತ್ತಿನಿಧಿ)

ಕುರಿಂಜಿ ಜೇನು: ಡಾ.ಅಶೋಕ್‍ಕುಮಾರ್ (ಅನುವಾದ ಎಲ್ ಗುಂಡಪ್ಪ – ಶಾರದಮ್ಮ ದತ್ತಿನಿಧಿ)

ಅಮೃತಕ್ಕೆ ಹಾರಿದ ಗರುಡ: ರಮೇಶ ಮ.ಕಲ್ಲನಗೌಡರ(ಲೇಖಕರ ಮೊದಲ ಕೃತಿ, ಮಧುರಚೆನ್ನ ದತ್ತಿನಿಧಿ)

ಹಂಟ್ ಬ್ಯಾಂಗಲ್ ಕೆಮಿಲಿಯನ್: ದೀಪಾ ಗಣೇಶ್ (ಕನ್ನಡದಿಂದ ಇಂಗ್ಲೀಷ್‍ಗೆ ಅನುವಾದ, ಅಮೆರಿಕನ್ನರ ದತ್ತಿನಿಧಿ)


☀️2013ರ ಪುಸ್ತಕ ಬಹುಮಾನ

• ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ: ಸುಬ್ಬು ಹೊಲೆಯಾರ್ (ಕಾವ್ಯ)
• ಆತ್ಮವೃತ್ತಾಂತ: ರಜನಿ ನರಹಳ್ಳಿ (ಕಾದಂಬರಿ)
• ಸಲ್ಮಾನ್ ಖಾನನ ಡಿಫಿಕಲ್ಟೀಸು: ಎಂ.ಎಸ್. ಶ್ರೀರಾಮ್ (ಸಣ್ಣಕತೆ)
• ಅನಭಿಜ್ಞ ಶಾಕುಂತಲ: ಕೆ.ವೈ. ನಾರಾಯಣಸ್ವಾಮಿ (ನಾಟಕ)
• ಮಹಾಮಾತೆ ಮಲ್ಲಕ್ಕ ಮತ್ತು ಇತರ ಪ್ರಬಂಧಗಳು:ಎಂ.ಡಿ. ಗೋಗೇರಿ (ಲಲಿತ ಪ್ರಬಂಧ)
• ಅಂಡಮಾನ್ ಕಂಡಹಾಗೆ : ಎಚ್.ಎಸ್.ಅನುಪಮಾ (ಪ್ರವಾಸ ಸಾಹಿತ್ಯ)
• ಅಲೆಮಾರಿಯ ಅಂತರಂಗ: ಕುಪ್ಪೆ ನಾಗರಾಜ (ಆತ್ಮಕತೆ)
• ಹಾರದಿರಲಿ ಪ್ರಾಣಪಕ್ಷಿ: ಹ.ಸ.ಬ್ಯಾಕೋಡ (ಮಕ್ಕಳ ಸಾಹಿತ್ಯ)
• ಕಾಡು ಕಲಿಸುವ ಪಾಠ: ಟಿ.ಎಸ್.ಗೋಪಾಲ್ (ವಿಜ್ಞಾನ ಸಾಹಿತ್ಯ)
• ಎಂದೂ ಮುಗಿಯದ ಯುದ್ದ: ಎನ್.ಜಗದೀಶ್ ಕೊಪ್ಪ (ಮಾನವಿಕ)
• ಮೈಯೇ ಸೂರು ಮನವೇ ಮಾತು: ಬಸವರಾಜ ಕಲ್ಗುಡಿ(ಸಂಶೋಧನೆ)
• ಬೇಗುದಿ: ಆರ್.ಲಕ್ಷ್ಮಿ ನಾರಾಯಣ(ಸೃಜನಶೀಲ ಅನುವಾದ)
• ತೆಲಂಗಾಣ ಹೋರಾಟ: ಬಿ.ಸುಜ್ಞಾನಮೂರ್ತಿ (ಸೃಜನೇತರ ಅನುವಾದ)
• ಬೆಟ್ಟ ಮಹಮದನ ಬಾಳಿಗೆ ಬಾರದಿದ್ದರೆ : ಲಕ್ಷ್ಮೀಶ ತೋಳ್ಪಾಡಿ (ಸಂಕೀರ್ಣ)
• ಬದುಕಿನ ದಿಕ್ಕು ಬದಲಿಸಿದ ಆಸ್ಟಿಯೊ ಸರ್ಕೋಮಾ: ಬಿ.ಎಸ್.ಶೃತಿ (ಲೇಖಕರ ಮೊದಲ ಕೃತಿ)

(Courtesy : Universal Coaching Centre Bangalore) 

No comments:

Post a Comment