"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 23 February 2016

■.ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳ ತಯಾರಿ :— ಭಾಗ-II (UPSC, KPSC Examination Preparation :— PART-II)

■.ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳ ತಯಾರಿ :— ಭಾಗ-II
(UPSC, KPSC Examination Preparation :— PART-II)
━━━━━━━━━━━━━━━━━━━━━━━━━━━━━━━━━━━━━━━
ಈಗಾಗಲೇ ಭಾಗ-Iರಲ್ಲಿ
ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗೆಗಳ ತಯಾರಿಗಾಗಿ ಅವಶ್ಯವೆನಿಸಿದ ಪ್ರಮುಖ ಅಂಶಗಳನ್ನು ನಿಮ್ಮ ಮುಂದಿರಿಸಿದ್ದೇನೆ, ಅದರಂತೆ ಮತ್ತಷ್ಟು ನನ್ನ ಜ್ಞಾನ ಪರಿಮಿತಿಯಲ್ಲಿ ಗಮನಕ್ಕೆ ಬಂದ ಸಂದರ್ಶನಕ್ಕೆ ಬಹುಮಟ್ಟಿಗೆ ಸಹಕಾರಿಯಾಗಬಹುದಾದ ಕೆಲವು ಮಹತ್ವದ ಪ್ರಚಲಿತ ಘಟನೆಗಳನ್ನಾಧರಿಸಿದ ಅಂಶಗಳನ್ನು ನಾನು ಈ 'ಸ್ಪರ್ಧಾಲೋಕ'ದಲ್ಲಿ ತಕ್ಕಮಟ್ಟಿಗೆ ಭಾಗಗಳಲ್ಲಿ ವಿಂಗಡಿಸಿ ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇನೆ.

ಇದರ ಹೊರತು 'ಸ್ಪರ್ಧಾಲೋಕ'ದಲ್ಲಿ ಇನ್ನೂ ಅತ್ಯುತ್ತಮ ಮಾಹಿತಿಯನ್ನು ಸೇರ್ಪಡೆಗೊಳ್ಳಬೇಕು ಎಂದೆನಿಸಿದ್ದಲ್ಲಿ, ನಿಮ್ಮ ಹತ್ತಿರವಿರುವ ಮಾಹಿತಿಯನ್ನು ಹಂಚಿಕೊಳ್ಳಿ. ಅಭ್ಯರ್ಥಿಗಳಿಗೆ ಅವರ ಗುರಿ ತಲುಪುವಲ್ಲಿ ಕೈಜೋಡಿಸಿ.


■.ಭಾಗ-II.■
━━━━━━━━

16) ಗ್ಲೋಬಲ್ ವಾರ್ಮಿಂಗ್, ಕ್ಲೈಮೇಟ್ ಚೇಂಜ್, ಸಿಓಪಿ21 ಕಾನ್ಫರನ್ಸ್ (COP 21). ಹವಾಮಾನ ವೈಪರೀತ್ಯ ಕುರಿತಂತೆ ಪ್ಯಾರಿಸಿನ ಒಪ್ಪಂದ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಬಲ್ಲದು?

•► ವಿಶೇಷವಾಗಿ ಹವಾಗುಣ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ (ಭಾರತ), ಸ್ಥಳೀಯ (ಕರ್ನಾಟಕ) ಹವಾಗುಣ ಬದಲಾವಣೆಗಳು,

•► ‘ಕಾರ್ಬನ್‌ ಬಜೆಟ್‌’,

•► ‘ರಾಷ್ಟ್ರೀಯವಾಗಿ ನಿಶ್ಚಯಿಸಿರುವ ಉದ್ದೇಶಿತ ಇಂಗಾಲ ಕಡಿತ ದೇಣಿಗೆ’ (Intended Nationally Determined Contributions- INDCs )

•► ‘ಭೂ ಮೇಲ್ಮೈ  ತಾಪಮಾನ’  (Land surface temperature - LST).

•► ಸೃಜನಾತ್ಮಕ ಬರ ಪರಿಹಾರ ಕ್ರಮಗಳು.

•► ಹವಾಮಾನ ಬದಲಾವಣೆ & ಸುಸ್ಥಿರ ಅಭಿವೃದ್ಧಿ. ಪರಿಸರ ಸುಸ್ಥಿರತೆ.

•► ಹವಾಮಾನ ಬದಲಾವಣೆ & ಸುಸ್ಥಿರ ಅಭಿವೃದ್ಧಿ ಗುರಿಗಳು (SDG's)
.
--------------------------------------------------------------------------------------------------------------

17) ''ಡಿಸಾಸ್ಟರ್ ಮ್ಯಾನೇಜ್ಮೆಂಟ್''ನ ಕಾರ್ಯವೈಖರಿ.

•► ಪ್ರಕೋಪ ನಿರ್ವಹಣೆಗಾಗಿ ರಾಷ್ಟ್ರೀಯ ನೀತಿ.

•► ಪ್ರಕೋಪ ನಿರ್ವಹಣೆಗಾಗಿ ಅಳವಡಿಸಿಕೊಳ್ಳುಬೇಕಾದ ದಿಟ್ಟ ಕ್ರಮಗಳು.

•► ನವೀಕರಿಸಬಹುದಾದ ಇಂಧನದ (Renewable Energy) ಸುಸ್ಥಿರ ಬಳಕೆ.


18) ಚೆನೈನಲ್ಲಿ ಸಂಭವಿಸಿದ ಜಲವಿಪ್ಲವಕ್ಕೆ ಕಾರಣಗಳು. ಭವಿಷ್ಯತ್ತಿನಲ್ಲಿ ಇಂತಹ ಅವಘಡ ಸಂಭವಿಸಿದಂತೆ ಕೈಗೊಳ್ಳಬಹುದಾದ ಧೀರ್ಘಾವಧಿಯ ಕ್ರಮಗಳು.


19) ಎಲ್‌ನಿನೋ ಮತ್ತು ಭಾರತ.

•► ಭಾರತದಲ್ಲಿ ಕೃಷಿರಂಗದ ಮೇಲೆ ಎಲ್‌ನಿನೋದ ಪ್ರಭಾವ.

•► ಎಲ್‌ನಿನೋ ಮತ್ತು ಭಾರತದ ಸಾಮಾಜಿಕ ವ್ಯವಸ್ಥೆಯ ವೈಪರೀತ್ಯ.


20).ಹಿಮಾಲಯ ಪ್ರದೇಶದಲ್ಲಿ ಪದೇ ಪದೇ ಭೂಕಂಪ ಉಂಟಾಗಲು ಕಾರಣಗಳು ಏನು? (ನೇಪಾಳದಲ್ಲಿ ಹಾಗೂ ಭಾರತದಲ್ಲೂ ಇತ್ತೀಚೆಗೆ ಸಂಭವಿಸಿದ ಭೂಕಂಪಗಳನ್ನು ಗಮನದಲ್ಲಿಟ್ಟುಕೊಂಡು)

•► ಕರ್ನಾಟಕದಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಗಳು ಇವೆಯೇ?

•► ಭೂಕಂಪದ ಹಾನಿ ಕಡಿಮೆ ಮಾಡಲು ತಂತ್ರಜ್ಞಾನಗಳಿವೆಯೇ? ಯಾವವು?

•► ಭಾರತದ ಯಾವ ಪ್ರದೇಶಗಳು ಭೂಕಂಪದ ಅಪಾಯ ಎದುರಿಸುತ್ತಿವೆ? ಏಕೆ?

•► ಜಲಾಶಯಗಳೂ ಭೂಕಂಪಕ್ಕೆ ಕಾರಣವಾಗುತ್ತವೆ ಎನ್ನುತ್ತಾರೆ, ನಿಜವೇ? ಪ್ರಮುಖ ಕಾರಣಗಳಾವವು?


21) ಭಾರತದ ಕೃಷಿರಂಗದ ಮೇಲೆ ಹವಾಮಾನ ವೈಪರೀತ್ಯದ ಪ್ರಭಾವ. ಪರಿಹಾರ ಕ್ರಮಗಳು.

•► ಭಾರತದ ಆರ್ಥಿಕತೆಯ ಬೆಳವಣಿಗೆಯಲ್ಲಿ ಕೃಷಿರಂಗದ ಪ್ರಸ್ತುತ ಕೊಡುಗೆ.

•► ಭಾರತದ ಕೃಷಿರಂಗದ ಯಾಂತ್ರಿಕರಣ & ಜಾಗತೀಕರಣ.

•► ಸುಸ್ಥಿರ ಕೃಷಿ ಅಭಿವೃದ್ಧಿ.
.
--------------------------------------------------------------------------------------------------------------

22) ಕೊಲಿಜಿಯಂ Vs ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ.

•► ಕೊಲಿಜಿಯಂ ಯಾಕೆ ಪ್ರಸ್ತುತ?

•► ಕೊಲಿಜಿಯಂ ರದ್ದತಿಗೆ ಕಾರಣೀಭೂತವಾದ ಬೆಳವಣಿಗೆಗಳು.

•► ಕೊಲಿಜಿಯಂ & ರಾಜಕೀಯ ಪ್ರಭಾವ.

•► ಭಾರತದ ನ್ಯಾಯಾಂಗ ಎಷ್ಟು ಸ್ವತಂತ್ರ?

•► NJAC ರದ್ದತಿ ಸೂಕ್ತವೇ?


23) ನ್ಯಾಷನಲ್ ಹೆರಾಲ್ಡ್ ಖರೀದಿ ಪ್ರಕರಣ.


24) ಮಾಹಿತಿ ಹಕ್ಕು ಕಾಯ್ದೆ(ಆರ್​ಟಿಐ). ಸವಾಲುಗಳು.

•► ದುರ್ಬಲವಾಗುತ್ತಿದೆಯೇ ಆರ್‌ಟಿಐ?


25) ‘ವ್ಯಾಪಂ’ ಹಗರಣ.

•► ಅತ್ಯಂತ ಗಂಭೀರವಾದ ವ್ಯಾಪಂ ಹಗರಣ ಕುರಿತು ಸಿಬಿಐ ಅಥವಾ ಸ್ವತಂತ್ರ ತನಿಖೆ ಏಕಿಲ್ಲ?

•► ಶಿಕ್ಷಣ & ರಾಜಕಾರಣ.  
.
--------------------------------------------------------------------------------------------------------------

26) ವಿಶೇಷವಾಗಿ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗಾಗಿ...

•► ಹವಾಮಾನ ಬದಲಾವಣೆಯನ್ನು ತಡೆಗಟ್ಟಲು ಕರ್ನಾಟಕದ ಪ್ರಯತ್ನ.

•► “ಜಾಗತೀಕರಣದ ಹಿನ್ನೆಲೆಯಲ್ಲಿ ಕನ್ನಡಕ್ಕಿರುವ ಸವಾಲುಗಳು”

•► ಭಾರತೀಯ ಸಂವಿಧಾನಕ್ಕೆ ಕನ್ನಡಿಗರ ಕೊಡುಗೆ ಏನು?

•► ಕರ್ನಾಟಕದಲ್ಲಿ ಮಾಹಿತಿ -ತಂತ್ರಜ್ಞಾನದ ಬೆಳವಣಿಗೆ. ಜಾಗತಿಕ ಮಟ್ಟದಲ್ಲಿ ವಿಸ್ತರಿಸುವಲ್ಲಿ ಎದುರಿಸುತ್ತಿರುವ ಸವಾಲುಗಳು. ಪರಿಹಾರ ಕ್ರಮಗಳು.

•► ‘ಕರ್ನಾಟಕ ಕೃಷಿ, ವಾಣಿಜ್ಯ ಹಾಗೂ ಆಹಾರ ಸಂಸ್ಕರಣೆ ನೀತಿ-2015’.

•► ತುಮಕೂರು ಮೆಗಾಫುಡ್ ಪಾರ್ಕ್ ನ ವಿಶೇಷತೆ ಏನು? ಸವಾಲುಗಳು.

•► ಬರ ಸಂಭಾವ್ಯ ಪ್ರದೇಶದಲ್ಲಿ ದೇಶದಲ್ಲೇ ಎರಡನೇ ಸ್ಥಾನ ಕರ್ನಾಟಕಕ್ಕಿದೆ. ನೀವು ಕೈಗೊಳ್ಳಬಹುದಾದ ಬರ ನಿರ್ವಹಣೆಯ ಸೂಕ್ತ ಕ್ರಮಗಳು ಯಾವವು?
.
--------------------------------------------------------------------------------------------------------------

27) ವಿಶ್ವ ವ್ಯಾಪಾರ ಸಂಸ್ಥೆ(ಡಬ್ಲ್ಯುಟಿಸಿ) ಮತ್ತು ಭಾರತದ ಆಹಾರ ಭದ್ರತೆ.(ವಿಶೇಷವಾಗಿ ಕೃಷಿ - ಆಹಾರ ಸಬ್ಸಿಡಿಗಳು).. ಇತ್ತೀಚಿನ ಬೆಳವಣಿಗೆಗಳು.

•► ವಿಶ್ವ ವ್ಯಾಪಾರ ಸಂಘಟನೆಯ ವ್ಯಾಪಾರ ಸೌಲಭ್ಯ ಒಪ್ಪಂದದ ಸವಾಲು ಮತ್ತು ಸಾರ್ಕ್‌ ರಾಷ್ಟ್ರಗಳ ಮೇಲೆ ಇದರ ಪರಿಣಾಮ - ಪರಿಹಾರ.


28) ವಿಶ್ವ ವಾಣಿಜ್ಯ ಸಂಘಟನೆಯ ಜಾಗತೀಕರಣ. ಭಾರತ
.
--------------------------------------------------------------------------------------------------------------

29) ಪರಿಷೃತ ಬಾಲಾಪರಾಧಿ ಕಾನೂನು.. ನಿಮ್ಮ ಅನಿಸಿಕೆಗಳು.

•► ಈ ಕಾನೂನು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಬಲ್ಲದು?

•► ಬಾಲಾಪರಾಧ ವಯಸ್ಸಿನ ಮಿತಿ ಇಳಿಕೆ ಸಮಂಜಸವೇ?

•► ಅಪರಾಧಿ ಮನೋಭಾವ ಹೆಚ್ಚಾಗಲು ಸಂವಹನ ಮಾಧ್ಯಮಗಳ ಕೊಡುಗೆ.
.
--------------------------------------------------------------------------------------------------------------

30) Terrorism as a Global Threat.

•► ಮಧ್ಯೆ ಏಷ್ಯಾದಲ್ಲಿ ಭಯೋತ್ಪಾದನೆ. ಅದರ ವಿಸ್ತರಣೆಗೆ ಕಾರಣಗಳು.

•► ISISI ಕಡೆಗೆ ಭಾರತೀಯ ಯುವಕರ ಆಕರ್ಷಣೆಗೆ ಕಾರಣಗಳು & ತಡೆಯುವ ಕ್ರಮಗಳು.        

•► ಇರಾಕ್‌ ಮತ್ತು ಸಿರಿಯಾ ದೇಶಗಳು ಕುಸಿಯುವುದನ್ನು ತಡೆಯುವುದರ ಕುರಿತು ನಿಮ್ಮ ಅಭಿಪ್ರಾಯಗಳೇನು?

•► ಅಂತಾರಾಷ್ಟ್ರೀಯ ಶಾಂತಿ-ಭದ್ರತೆಗಾಗಿ 'ಹಿಂಸಾತ್ಮಕ ತೀವ್ರವಾದವನ್ನು ತಡೆಯುವಲ್ಲಿ ನಿಮ್ಮ ಕ್ರಿಯಾ ಯೋಜನೆ'.

•► ಬ್ರಿಟನ್‌: ನೂತನ ವಲಸೆ ನೀತಿ- ಭಾರತದ ಮೇಲಾಗಿ ಪರಿಣಾಮ.

.....ಮುಂದುವರಿಯುವುದು.

No comments:

Post a Comment