"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 2 March 2016

■.ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗೆಗಳ ತಯಾರಿ :— ಭಾಗ-III (UPSC, KPSC Interview Preparation :— PART-III)

■.ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗೆಗಳ ತಯಾರಿ :— ಭಾಗ-III
(UPSC, KPSC Interview Preparation :— PART-III)
━━━━━━━━━━━━━━━━━━━━━━━━━━━━━━━━━━━━━━━

ಈಗಾಗಲೇ ಭಾಗ-IIರಲ್ಲಿ ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗೆಗಳ ತಯಾರಿಗಾಗಿ ಅವಶ್ಯವೆನಿಸಿದ ಪ್ರಮುಖ ಅಂಶಗಳನ್ನು ನಿಮ್ಮ ಮುಂದಿರಿಸಿದ್ದೇನೆ. ಅದರಂತೆ ಮತ್ತಷ್ಟು ನನ್ನ ಜ್ಞಾನ ಪರಿಮಿತಿಯಲ್ಲಿ ಗಮನಕ್ಕೆ ಬಂದ ಸಂದರ್ಶನಕ್ಕೆ ಬಹುಮಟ್ಟಿಗೆ ಸಹಕಾರಿಯಾಗಬಹುದಾದ ಕೆಲವು ಮಹತ್ವದ ಪ್ರಚಲಿತ ಘಟನೆಗಳನ್ನಾಧರಿಸಿದ ಅಂಶಗಳನ್ನು ನಾನು ಈ 'ಸ್ಪರ್ಧಾಲೋಕ'ದಲ್ಲಿ ತಕ್ಕಮಟ್ಟಿಗೆ ಭಾಗಗಳಲ್ಲಿ ವಿಂಗಡಿಸಿ ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇನೆ.

ಇದರ ಹೊರತು 'ಸ್ಪರ್ಧಾಲೋಕ'ದಲ್ಲಿ ಇನ್ನೂ ಅತ್ಯುತ್ತಮ ಮಾಹಿತಿಯನ್ನು ಸೇರ್ಪಡೆಗೊಳ್ಳಬೇಕು ಎಂದೆನಿಸಿದ್ದಲ್ಲಿ, ನಿಮ್ಮ ಹತ್ತಿರವಿರುವ ಮಾಹಿತಿಯನ್ನು ಹಂಚಿಕೊಳ್ಳಿ. ಅಭ್ಯರ್ಥಿಗಳಿಗೆ ಅವರ ಗುರಿ ತಲುಪುವಲ್ಲಿ ಕೈಜೋಡಿಸಿ.


■.ಭಾಗ-III.■
━━━━━━━━

31) ಸಮುದ್ರಮಟ್ಟದಲ್ಲಿ ಕಳೆದ 27 ಶತಮಾನಗಳಲ್ಲಿಯೇ ಅತಿ ವೇಗವಾದ ಏರಿಕೆ ಕಂಡುಬಂದಿದೆ. ಇದಕ್ಕೆ ಕಾರಣಗಳೇನು?

32) ಹವಾಮಾನ ಬದಲಾವಣೆಯಲ್ಲಿ ಮುಂದುವರಿದ ದೇಶಗಳ ಪಾತ್ರ.
•► ಹವಾಮಾನ ಬದಲಾವಣೆಯಲ್ಲಿ ಮುಂದುವರೆಯುತ್ತಿರುವ ದೇಶಗಳ ಪಾತ್ರ.
•► ಹವಾಮಾನ ಬದಲಾವಣೆಯ ಗಂಭೀರತೆಯ ಜವಾಬ್ದಾರಿಯನ್ನು ಜನಸಾಮಾನ್ಯರಲ್ಲಿ ಅರಿವು ಮೂಡಿಸುವಲ್ಲಿ ನೀವು ಕೈಗೊಳ್ಳಬಹುದಾದ ಕ್ರಮಗಳು ಯಾವವು?
.
-----------------------------

33) ಭಾರತದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು. ಕಾರಣಗಳು,  ಪರಿಹಾರ.
•► ಇತರೇ ರಾಜ್ಯಗಳಿಗಿಂತ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ಉತ್ತರ ಪ್ರದೇಶದಲ್ಲಿಯೇ ಯಾಕೆ ಕಂಡುಬರುತ್ತಿವೆ?
•► ಅತ್ಯಾಚಾರ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ- ತಡೆಗೆ ಸರ್ಕಾರ ಕೈಗೊಂಡ ಕ್ರಮಗಳು. ನಿಮ್ಮ ದಿಟ್ಟ ಕ್ರಮಗಳು.

34) 'ಮರ್ಯಾದಾ ಹತ್ಯೆ'. ಇದರ ನಿರ್ಮೂಲನೆಗೆ ಸರ್ಕಾರ ಕೈಗೊಂಡ ಕ್ರಮಗಳು. ನಿಮ್ಮ ಅನಿಸಿಕೆ.
.
-----------------------------  

35) AFSPA ಕಾಯಿದೆ.

•► ಈಶಾನ್ಯ ರಾಜ್ಯಗಳು ಹಾಗು ಕಾಶ್ಮೀರ ಕಣಿವೆಯಲ್ಲಿ ಸಶಸ್ತ್ರ ದಂಗೆಕೋರರನ್ನು ಹತ್ತಿಕ್ಕಲು, ಸೇನೆಗೆ ನೀಡಿರುವ ವಿಶೇಷ ಅಧಿಕಾರ AFSPA ಕಾಯಿದೆಯನ್ನು ಪ್ರಸ್ತುತ ದಿನಗಳಲ್ಲಿ ಈಗಲೂ ಮುಂದುವರೆಸುವುದು ಔಚಿತ್ಯವೇ?

•► ಮಣಿಪುರದ ಕವಯಿತ್ರಿ ಇರೋಮ್ ಶರ್ಮಿಳಾ ಚಾನು “AFSPA ಕೊನೆಗೊಳಿಸಿ” ಎಂಬ ಬೇಡಿಕೆ ಮುಂದಿಟ್ಟು ಆರಂಭಿಸಿದ ಸುಧೀರ್ಘ ಅಖಂಡ ಉಪವಾಸ ಸತ್ಯಾಗ್ರಹ ಸಮಂಜಸವೇ?

•► AFSPA ಒಂದು ಧೀರ್ಘಕಾಲದಿಂದ ಜಾರಿಯಲ್ಲಿರುವ ಅಮಾನುಷ ಕಾಯಿದೆಯಾಗಿದ್ದು, ಇದರಿಂದಾಗಿ ಮಣಿಪುರ, ಈಶಾನ್ಯ ರಾಜ್ಯಗಳ ಮತ್ತು ಕಾಶ್ಮೀರದ ಅಮಾಯಕ ಜನತೆ ನಾವ್ಯಾರು ಕೇಳರಿಯದ ದೌರ್ಜನ್ಯ ಹಾಗು ಕ್ರೌರ್ಯಗಳಿಗೆ ಶಿಕಾರಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನಿಜವೇ?

36) ಸಾಮಾಜಿಕ ಭದ್ರತೆ ಮತ್ತು ಸ್ತ್ರೀಯರ ಸಬಲೀಕರಣ.

37) ದೇಶದ ಭದ್ರತೆಯಲ್ಲಿ ಸ್ತ್ರೀಯರ ಪಾತ್ರ (ಇತ್ತೀಚೆಗೆ Militaryಯಲ್ಲಿ ನೇಮಕಾತಿ ಚಾಲನೆ ಕೊಟ್ಡಿದ್ದಾರಲ್ಲ ಅದಕ್ಕೆ).
•► ಮಿಲಿಟರಿಯಲ್ಲಿ (especially in BSF,SSB, ITBP, ವಾಯುದಳ) ಸ್ತ್ರೀಯರಿಗೆ ಪ್ರಾಶಸ್ತ್ಯ ಕೊಡುವುದು ಎಷ್ಟರಮಟ್ಟಿಗೆ ಪರಿಣಾಮಕಾರಿ?
.
-----------------------------

38) ಭಾರತದಲ್ಲಿ ಅಸಹಿಷ್ಣುತೆ ಈ ಕುರಿತು ಇದರ ಉಗಮ- ಇತ್ತೀಚಿನ ಬೆಳವಣಿಗೆ.

•► ನಿಮ್ಮ ಪ್ರಕಾರ ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆಯೇ?

•► ಅಸಹಿಷ್ಣುತೆಯ ವಿರುದ್ಧ ಜನತೆಯ ಹಾಗೂ ಬೌದ್ಧಿಕ ಪ್ರತಿಭಟನೆ.

•► ಭಾರತದಲ್ಲಿ ಅಸಹಿಷ್ಣುತೆ ಹೆಸರಿನಲ್ಲಿ ಪ್ರಶಸ್ತಿ ಹಿಂದಿರುಗಿಸುವಿಕೆ ಎಷ್ಟರಮಟ್ಟಿಗೆ ಸರಿ?
.
-----------------------------

39) ವಿಶೇಷವಾಗಿ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗಾಗಿ...

•► ಆಹಾರ ಅಭದ್ರತೆ ಹಾಗು ಹಸಿವು, ಅಪೌಷ್ಟಿಕತೆ ಸಮಸ್ಯೆಗಳನ್ನು ನಿವಾರಿಸುವಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ 'ಪರಿಷ್ಕೃತ ಪಡಿತರ ವಿತರಣಾ ವ್ಯವಸ್ಥೆ (ಅನ್ನಭಾಗ್ಯ)' ಅವಲೋಕನ. ಗುರಿ ಸಾಧಿಸುವಲ್ಲಿ ಇರುವ ಸವಾಲುಗಳು, ಅದಕ್ಕೆ ಪರಿಹಾರ ಕ್ರಮಗಳು.

•► ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ 'ಅನ್ನಭಾಗ್ಯ ಯೋಜನೆ'ಯ ಸಮರ್ಪಕ ಅನುಷ್ಠಾನಕ್ಕೆ ಎದುರಾಗುವ ಅತಿದೊಡ್ಡ ಸವಾಲು ಎಂದರೆ ಖೊಟ್ಟಿ ಮತ್ತು ಅನರ್ಹ BPL ಪಡಿತರ ಚೀಟಿಗಳನ್ನು ಪತ್ತೆಹಚ್ಚುವುದು. ತಾವು ಈ ನಿಟ್ಟಿನಲ್ಲಿ ಯಾವ್ಯಾವ ಕ್ರಮಗಳನ್ನು ಕೈಗೊಳ್ಳುವಿರಿ?

•► ಆಹಾರ ಭದ್ರತೆಗೆ ಅಗತ್ಯ ಸಾಮಥ್ರ್ಯವನ್ನು ವೃದ್ಧಿಸುವಲ್ಲಿ ಬೆಳೆವಿಜ್ಞಾನ ಕ್ಷೇತ್ರದ ಪಾತ್ರ.
.
-----------------------------

40) ನರೇಗಾ (MGNREGA) ದ ಅವಲೋಕನ. ಸಾಗಿ ಬಂದ ದಾರಿಯ ವಿಮರ್ಶೆ.

•► MGNREGA ದ ಪರಿಣಾಮಕಾರಿ ಅನುಷ್ಠಾನಕ್ಕೆ ನಿಮ್ಮ ಸಲಹೆಗಳು.

41) ರಾಜ್ಯಗಳು ಹಾಗೂ ಜಿಲ್ಲೆಗಳ ನಡುವೆ ನಿಕಟ ಸಂಬಂಧ ಏರ್ಪಡಲು ಮತ್ತು ನಿಕಟವಾಗಿ ಕೆಲಸ ಮಾಡಲು ಅಗತ್ಯವಾದ ಸೌಕರ್ಯವನ್ನು ಒದಗಿಸುವಲ್ಲಿ ಕೇಂದ್ರ ಸರ್ಕಾರದ ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಯೋಜನೆ ಎಷ್ಟರಮಟ್ಟಿಗೆ ಮಹತ್ವವಾಗಿರುವುದು.?

42) ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಸಾಕ್ಷರತೆ ಯೋಜನೆಯ ಅನುಷ್ಠಾನ.

43) ಪ್ರಧಾನಮಂತ್ರಿ ಫಸಲು ವಿಮೆ ಯೋಜನೆ.

44) ಜೆಂಡರ್ ಪಾರ್ಕ್‍ನ ವಿಶೇಷತೆ.

45) ರಾಷ್ಟ್ರೀಯ ಇ-ಕೃಷಿ ಮಾರುಕಟ್ಟೆ
.
-----------------------------

46) ಭಾರತದ ಕರಕುಶಲ ಕಲೆಗಳ ರಫ್ತು ಉತ್ತೇಜನಕ್ಕೆ ನೀವು ಕೈಗೊಳ್ಳಬಹುದಾದ ಕ್ರಮಗಳು ಯಾವವು?

47) ಅಂತಾರಾಷ್ಟ್ರೀಯ ಹಣಕಾಸು ನಿಧಿ , ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ)  ಮತ್ತು ವಿಶ್ವಬ್ಯಾಂಕ್‌ಗಳಿಗೆ ಪರ್ಯಾಯವಾಗಿ ಬ್ರಿಕ್ಸ್ ಹೊಸ ಅಭಿವೃದ್ಧಿ ಬ್ಯಾಂಕ್.

•► ಬ್ರಿಕ್ಸ್ ಬ್ಯಾಂಕಿನಿಂದ ಭಾರತಕ್ಕೆ ಲಾಭ ಹೇಗೆ?

48) ವಿಶ್ವ ಅಪರಾಧ ನ್ಯಾಯಾಲಯ (ಇಂಟರ್‌ನ್ಯಾಷನಲ್‌ ಕ್ರಿಮಿನಲ್‌ ಕೋರ್ಟ್‌) ಅಪ್ರಸ್ತುತವೇ?

49) ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವೆ ಆರ್ಥಿಕ ಸಹಕಾರ ಏರ್ಪಡಿಸಲು ಮತ್ತು ಆರ್ಥಿಕ ಸ್ಥಿರತೆಯನ್ನು ಬಲಗೊಳಿಸುವ ಸಲುವಾಗಿ ಭಾರತ ಕೈಗೊಂಡ ಇತ್ತೀಚಿನ ಕ್ರಮಗಳು.

50) ವಿಶ್ವದಲ್ಲೇ ಅತ್ಯಧಿಕ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿ ಭಾರತ ಪ್ರಸಕ್ತ ವರ್ಷವೂ ಮುಂದುವರಿದಿದೆ. ಇದು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಅವಶ್ಯಕವೇ?


.....ಮುಂದುವರಿಯುವುದು.

No comments:

Post a Comment