"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 22 February 2016

■.ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳ ತಯರಿ :— ಭಾಗ-I (UPSC, KPSC Examination Preparation :— PART-I)

■.ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗೆಗಳ ತಯಾರಿ :— ಭಾಗ-I
(UPSC, KPSC Examination Preparation :— PART-I)
━━━━━━━━━━━━━━━━━━━━━━━━━━━━━━━━━━━━━━━


ಇತ್ತೀಚೆಗೆ ನಾಗರಿಕ ಸೇವೆಗಳ (ಐಎಎಸ್‌, ಐಎಫ್‌ಎಸ್‌, ಐಪಿಎಸ್‌) ಮುಖ್ಯ ಪರೀಕ್ಷೆ ಫಲಿತಾಂಶ  ಹೊರಬಿದ್ದಿದ್ದು, ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರ ಪಟ್ಟಿಯನ್ನು ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ www.upsc.gov.in ನಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡವರು ಮಾರ್ಚ್‌ 8 ರಂದು ನಡೆಯುವ ಸಂದರ್ಶನಕ್ಕೆ ಹಾಜರಾಗಲು ಸೂಚಿಸಿದ್ದು

ಸದ್ಯದಲ್ಲೇ ಕೆಪಿಎಸ್‌ಸಿಯು ನಡೆಸಿದ ಕೆಎಎಸ್ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಿಸುವ ಸಿದ್ಧತೆಯಲ್ಲಿರುವುದು. ಕೆಎಎಸ್ ಅಕಾಂಕ್ಷಿಗಳೂ ಕೂಡಾ ಸಂದರ್ಶನದ ತಯಾರಿಯಲ್ಲಿರಬೇಕು.

ಅಭ್ಯರ್ಥಿಗಳು ತಮ್ಮ ಅಧ್ಯಯನ ವಿಷಯಗಳನ್ನು ಅವಲೋಕಿಸಿ ತಯಾರಾಗಲು ಸಮಯ ತುಂಬಾ ಕಡಿಮೆ ಇರುವುದನ್ನು ಗಮನಿಸಬೇಕು.
ದಿನಪತ್ರಿಕೆಗಳನ್ನು ಓದಿ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಜ್ಞಾನವನ್ನು ಅವಲೋಕಿಸಿಕೊಳ್ಳುತ್ತಾ, ನೀವು ಸಂದರ್ಶನಕ್ಕೆ ಸಿದ್ಧರಾಗಿದ್ದೀರಾ ಎಂಬುದನ್ನು ನೀವೇ ಪರೀಕ್ಷಿಸಿಕೊಳ್ಳಿ.

ನನ್ನ ಜ್ಞಾನ ಪರಿಮಿತಿಯಲ್ಲಿ ಗಮನಕ್ಕೆ ಬಂದ ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗೆಗಳ ತಯಾರಿಗಾಗಿ ಬಹುಮಟ್ಟಿಗೆ ಸಹಕಾರಿಯಾಗಬಹುದಾದ ಕೆಲವು ಮಹತ್ವದ ಪ್ರಚಲಿತ ಘಟನೆಗಳನ್ನಾಧರಿಸಿದ ಅಂಶಗಳನ್ನು ನಾನು ಈ 'ಸ್ಪರ್ಧಾಲೋಕ'ದಲ್ಲಿ ತಕ್ಕಮಟ್ಟಿಗೆ ಭಾಗಗಳಲ್ಲಿ ವಿಂಗಡಿಸಿ ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇನೆ.

ಇದರ ಹೊರತು 'ಸ್ಪರ್ಧಾಲೋಕ'ದಲ್ಲಿ ಇನ್ನೂ ಅತ್ಯುತ್ತಮ ಮಾಹಿತಿಯನ್ನು ಸೇರ್ಪಡೆಗೊಳ್ಳಬೇಕು ಎಂದೆನಿಸಿದ್ದಲ್ಲಿ, ನಿಮ್ಮ ಹತ್ತಿರವಿರುವ ಮಾಹಿತಿಯನ್ನು ಹಂಚಿಕೊಳ್ಳಿ. ಅಭ್ಯರ್ಥಿಗಳಿಗೆ ಅವರ ಗುರಿ ತಲುಪುವಲ್ಲಿ ಕೈಜೋಡಿಸಿ.


■.ಭಾಗ-I.■
━━━━━━━━

1) ಸುಸ್ಥಿರ ಅಭಿವೃದ್ಧಿ ಮತ್ತು ಭಾರತದಲ್ಲಿ ಸುಸ್ಥಿರ ಅಭಿವೃದ್ಧಿ ಕುರಿತು ಇತ್ತೀಚಿನ ಬೆಳವಣಿಗೆ.

•► ಸುಸ್ಥಿರ ಅಭಿವೃದ್ಧಿ ಗುರಿಗಳು (SDG's). ಜಾಗತಿಕ ಸ್ಪಂದನೆ.

•► ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಆರೋಗ್ಯ.

•► ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಭಾರತ.


2) ಸಹಸ್ರಮಾನ ಅಭಿವೃದ್ಧಿ ಗುರಿಗಳು ( MDG's) ಮತ್ತು ಭಾರತ.

•► MDG's ಗುರಿಗಳನ್ನು ಭಾರತ ಸಂಪೂರ್ಣವಾಗಿ ಸಾಧಿಸಿದೆಯೇ?

•► MDG's ಗುರಿಗಳ ಸಾಧನೆಗೆ ಎದುರಾದ ಸವಾಲುಗಳು.

•► MDG's ಗುರಿಗಳನ್ನೇ ಸಾಧಿಸಲು ಸಾಧ್ಯವಾಗದ ಭಾರತವು SDG's ಗುರಿಗಳನ್ನು ಹೇಗೆ ತಾನೇ ಅನುಷ್ಠಾನಗೊಳಿಸುವುದು?


3) Swachh Bharath abhiyan ಬಗ್ಗೆ ಇಲ್ಲಿಯವರೆಗಿನ ಏಳು-ಬೀಳು.

•► ಸ್ವಚ್ಛ ಭಾರತ ಅಭಿಯಾನದ ಪರಿಣಾಮಕಾರಿ ಅನುಷ್ಠಾನಕ್ಕೆ ನಿಮ್ಮ ಸಲಹೆಗಳು.

•► ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛ ಭಾರತ ಅಭಿಯಾನದ ಅನುಷ್ಠಾನ. ಸವಾಲು -ಪರಿಹಾರ ಕ್ರಮಗಳು.

•► ಸ್ವಚ್ಛ ಭಾರತ ಮತ್ತು ಸೆಸ್


4) Make in India slogan ಹಾಗೂ ಜಾಗತಿಕ ಪಾಲ್ಗೊಳ್ಳುವಿಕೆ.

•► Make in Indiaದ ಭಾರತದ ರಾಜ್ಯವಾರು ಪ್ರಗತಿ.(especially Karnataka)


5) ಕೇಂದ್ರ ಸರ್ಕಾರದ ‘ಭೂಸ್ವಾಧೀನ ತಿದ್ದುಪಡಿ ಮಸೂದೆ’

•►  ‘ಭೂಸ್ವಾಧೀನ ತಿದ್ದುಪಡಿ ಮಸೂದೆ’ಯು ರೈತರ ಮೇಲೆ ಪರಿಣಾಮ ಬೀರಬಹುದು?


6) 'ಡಿಜಿಟಲ್‌ ಭಾರತ' ಕನಸಿಗೆ ಪೂರಕವಾಗಿ ದೇಶದಲ್ಲಿ ನಗದು ರಹಿತ ಆರ್ಥಿಕ ವ್ಯವಸ್ಥೆಗೆ ಜನಧನ ಯೋಜನೆಯ ಕೊಡುಗೆ.


7).ಸ್ಮಾರ್ಟ್ ಸಿಟಿ ಯೋಜನೆ-ಭವಿಷ್ಯ.

•► ಗ್ರಾಮೀಣ ಭಾರತದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನದ ವಿಮರ್ಶೆ.


8).ಹೊಸ ಪಿಂಚಣಿ ಯೋಜನೆ (New Pension Scheam; NPS)


9).ಸ್ಟಾರ್ಟ್ ಅಪ್, ಸ್ಮಾರ್ಟ್ ಅಪ್ ಯೋಜನೆಗಳು.

•► ಸ್ಟಾರ್ಟ್ ಅಪ್ ಯೋಜನೆ ಮತ್ತು ಗ್ರಾಮೀಣ ಗುಡಿ ಕೈಗಾರಿಕೆಗಳು.

10).ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ (Inclusive Growth)

11).ಇಂಪ್ರಿಂಟ್ ಇಂಡಿಯಾ-ಸವಾಲುಗಳು.

12).ಏಕ್ ಭಾರತ್ ಶ್ರೇಷ್ಠ ಭಾರತ್ ಯೋಜನೆ.

13).ಹೆಣ್ಣು ಮಕ್ಕಳ ಸುರಕ್ಷತೆ ಹಾಗೂ ಭವಿಷ್ಯ ರೂಪಿಸುವಲ್ಲಿ ‘ಬೇಟಿ ಬಚಾವೋ, ಬೇಟಿ ಪಢಾವೋ’ ಯೋಜನೆಯ ಅವಲೋಕನ.

.
--------------------------------------------------------------------------------------------------------------


14).ವಿಶೇಷವಾಗಿ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗಾಗಿ...

•► ದೇಶದ GDPಗೆ ಕರ್ನಾಟಕ ರಾಜ್ಯದ ಕೊಡುಗೆ.

•► ಕರ್ನಾಟಕದ ರಾಜ್ಯದ ಪ್ರವಾಸೋದ್ಯಮ. ಅಭಿವೃದ್ಧಿಗೆ ನಿಮ್ಮ ಸಲಹೆಗಳು.

•► ಕರ್ನಾಟಕದ ಭೌಗೋಳಿಕ ವೈಪರೀತ್ಯ (ಪ್ರಾದೇಶಿಕ ಅಸಮಾನತೆ) . (North-South)

•► ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ. -ತಡೆಯಲು ತತ್ ಕ್ಷಣದ ಪ್ರಯತ್ನಗಳು.

•► ನದಿ ನೀರಿನ ಹಂಚಿಕೆ ವಿವಾದಗಳು-ಪರಿಹಾರ.

•► ಒಂದು ಕಾಲದಲ್ಲಿ ಭ್ರಷ್ಟಾಚಾರವನ್ನು ತಡೆಯುವ ಕೆಲಸ ಮಾಡುತ್ತಾ ಲೋಕಾಯುಕ್ತ ಸಂಸ್ಥೆಗೆ ದೇಶದಲ್ಲೆಲ್ಲಾ ಮನ್ನಣೆ ತಂದುಕೊಟ್ಟ ಕರ್ನಾಟಕದ ಲೋಕಾಯುಕ್ತ, ಅದರ ಕಚೇರಿಯಲ್ಲಿಯೇ ಇಂದು ಭ್ರಷ್ಟಾಚಾರ ನಡೆದಿದೆ ಎಂಬ ಆಪಾದನೆ ಕಂಡುಬಂತು. ಯಾಕೆ?

•► ಕಳೆದ 3 ವರ್ಷಗಳಿಂದ ಅತೀ ಹೆಚ್ಚು ಡ್ರಗ್ಸ್ ವಹಿವಾಟು (ಮಾದಕ ವಸ್ತುಗಳ ಕಳ್ಳಸಾಗಣೆ ಮತ್ತು ಮಾರಾಟ) ಕರ್ನಾಟಕದಲ್ಲಿ ಬಹು ವ್ಯಾಪಕವಾಗಿ ನಡೆದಿದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣಗಳೇನು,? ಹೇಗೆ ನಿಯಂತ್ರಿಸಬಹುದು?

•► ಡ್ರಗ್ಸ್ ವಹಿವಾಟಿಗೆ ಹೆಚ್ಚಾಗಿ ಯುವತಿಯರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಯಾಕೆ?

•► ಕರ್ನಾಟಕದಲ್ಲಿ ವಿದೇಶಿಗರ ವಲಸಿಗರ ಸಮಸ್ಯೆ.

•► 'ಇನ್‌ವೆಸ್ಟ್ ಕರ್ನಾಟಕ-2016'ದ ಪ್ರಸ್ತುತತೆ ಮತ್ತು ಅದರ ಮುಂದಿನ ಸವಾಲುಗಳು.

•► ಉದ್ಯೋಗಾಧಾರಿತ ಹಾಗೂ ಕೌಶಲ್ಯಾಧಾರಿತ ಶಿಕ್ಷಣ ಕೊಡುವ ಯೋಜನೆ

•► ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸುವಲ್ಲಿ ಯಕ್ಷಗಾನ ನೃತ್ಯ ಹಾಗು ಸಾಹಿತ್ಯ.

•► ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಮಸೂದೆ–2015’

.
--------------------------------------------------------------------------------------------------------------


15) ಭಾರತದ ನೆರೆಯ ದೇಶಗಳೊಂದಿಗಿನ ಸಂಬಂಧ (specially with ಚೀನಾ, ಪಾಕಿಸ್ತಾನ, ದಕ್ಷಿಣ ಪೂರ್ವ ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರಗಳು)

•► ಪಾಕಿಸ್ತಾನ ಮತ್ತು ಶಾಂತಿ ಮಾತುಕತೆ ಕುರಿತಾದ ಕೇಂದ್ರದ ನೀತಿಯನ್ನು ಬದಲಿಸುವ ಅಗತ್ಯವಿದೆಯೇ? ಇತ್ತೀಚಿನ ಪಠಾಣಕೋಟ್ ಘಟನೆಯ ಗಂಭೀರತೆಯೊಂದಿಗೆ ನಿಮ್ಮ ಅಭಿಪ್ರಾಯ ತಿಳಿಸಿ.              

•► ಪಾಕಿಸ್ತಾನದೊಂದಿಗೆ ಭಯೋತ್ಪಾದನೆ ಹಾಗೂ ಶಾಂತಿ ಮಾತುಕತೆಯನ್ನು ಪ್ರತ್ಯೇಕ ವಿಷಯವಾಗಿಟ್ಟುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೇ?    

•► ‘ಹೊಸ ಸಿಲ್ಕ್ ರೂಟ್ ಪ್ರಾಜೆಕ್ಟ್’, ಮಾರಿಟೈಮ್​ಸಿಲ್ಕ್ ರೋಡ್’,

•► ದಕ್ಷಿಣ ಚೀನಾ ಸಾಗರದ ಮೇಲೆ ಭಾರತ-ಚೀನಾಗಳ ಒಡೆತನ ಸ್ಥಾಪಿಸುವಲ್ಲಿ ಜಟಾಪಟಿ.

•► ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಭಾರತದ ಸ್ಥಾಮಾನ. ವಿದೇಶಿ ವ್ಯಾಪಾರದ ಪಾತ್ರ.

•► ವಿಶ್ವದ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗಿರುವ ಚೀನಾದ ಆರ್ಥಿಕತೆ ಕುಸಿದಿರುವುದು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಿದೆಯೇ?

•► ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ.

•► ಭಾರತ-ಬಾಂಗ್ಲಾ  ದೇಶಗಳ ನಡುವೆ ಪರಾವೃತವಾಗಿರುವ ಭೂಮಿಯನ್ನು ವಿನಿಮಯ ಮಾಡಿಕೊಳ್ಳುವ ಮಸೂದೆ ಅಂಗೀಕಾರ.

•► ಭಾರತ-ಬಾಂಗ್ಲಾ ಭೂ ಗಡಿ ಒಪ್ಪಂದವು ಉಭಯ ದೇಶಗಳ ಬಾಂಧವ್ಯವೃದ್ಧಿಗೆ ಪೂರಕವಾಗುವುದೇ? ಅಕ್ರಮ ನುಸುಳುವಿಕೆ, ಪುನರ್ವಸತಿ, ಜನಾಂಗೀಯ ಘರ್ಷಣೆ ಮುಂತಾದವು ಪ್ರಬಲ ಸವಾಲುಗಳಾಗಲಿವೆಯೇ?
.
..ಮುಂದುವರಿಯುವುದು. 

No comments:

Post a Comment