"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 14 April 2014

★ “ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (National Urban Livelihoods Mission)” : (ಟಿಪ್ಪಣಿ ಬರಹ)

★ “ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್
 (National Urban Livelihoods Mission)” :
(ಟಿಪ್ಪಣಿ ಬರಹ)

*  ನಗರದಲ್ಲಿ ವಾಸಿಸುವ ಬಡ ಜನರ ಜೀವನಮಟ್ಟವನ್ನು ಸುಧಾರಿಸುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನ ಸಚಿವಾಲಯ ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಅನ್ನು 12 ನೇ ಪಂಚವಾರ್ಷಿಕ ಯೋಜನೆಯಲ್ಲಿ ಜಾರಿಗೆ ತರಲು ಪ್ರಸ್ತಾಪಿಸಿದೆ.


★ ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ನ ಕೆಲವು ಪ್ರಮುಖ ಅಂಶಗಳು :

 *.ಈ ಉದ್ದೇಶಿತ ಯೋಜನೆಯು ಪ್ರಸ್ತುತ ಜಾರಿಯಲ್ಲಿರುವ “ಸ್ವರ್ಣ ಜಯತಿ ರೋಜಗಾರ್ ಯೋಜನೆ” ಯ ಬದಲಿಗೆ ಜಾರಿಗೊಳ್ಳಲಿದೆ.

 *.ನಗರ ಬಡತನವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದ್ದು, ಕೌಶಲ್ಯ ಅಭಿವೃದ್ದಿ,ಮಾರುಕಟ್ಟೆ ಆಧಾರಿತ ಉದ್ಯೋಗಗಳು ಮತ್ತು ಸ್ವ ಉದ್ಯೋಗಗಳನ್ನು ಸೃಷ್ಟಿಸಲು ಸುಲಭ ಸಾಲ ವಿತರಣೆಯತ್ತ ಗಮನ ಹರಿಸಲು ಈ ಯೋಜನೆ ನೆರವಾಗಲಿದೆ.

 *.ಅಗತ್ಯ ಮೂಲ ಸೌಕರ್ಯಗಳೊಂದಿಗೆ ನಗರ ಬಡವರಿಗೆ ಹಂತ ಹಂತವಾಗಿ ವಸತಿಯೋಜನೆಯನ್ನು ಈ ಯೋಜನೆಯಡಿ ಕಲ್ಪಿಸಲಾಗುವುದು. ಇದಲ್ಲದೇ ನಗರದಲ್ಲಿ ಬೀದಿ ವ್ಯಾಪಾರಿಗಳ ಜೀವನೋಪಾಯ ಆಧಾರಗಳಿಗೆ ಸ್ಪಂದಿಸುವ ಗುರಿಯನ್ನು ಸಹ ಈ ಯೋಜನೆ ಹೊಂದಿದೆ.

 *.ಒಟ್ಟಾರೆಯಾಗಿ ನಗರದಲ್ಲಿ ವಾಸಿಸುತ್ತಿರುವ ಬಡವರು, ಕೊಳೆಗೇರಿ ವಾಸಿಗಳು ಮತ್ತು ಬೀದಿ ವ್ಯಾಪಾರಿಗಳ ಹಿತದೃಷ್ಟಿ ಕಾಯುವ ದೂರದೃಷ್ಟಿಯನ್ನು ಈ ಯೋಜನೆ ಹೊಂದಿದೆ.

No comments:

Post a Comment