"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 30 April 2014

★ ಸಾಮಾನ್ಯ ಜ್ಞಾನ — ಭಾಗ 4 : (General Knowledge - PART 4)

★ ಸಾಮಾನ್ಯ ಜ್ಞಾನ — ಭಾಗ 4 : (General Knowledge - PART 4)

━━━━━━━━━━━━━━━━━━━━━━━━━━━━━━━━━━━━━━━━━━━━━


 ★ ಅಂಡಮಾನ್ ಮತ್ತು ನಿಕೋಬಾರ್ ದ್ವೀಪವೃಂದಗಳನ್ನು ಬೇರ್ಪಡಿಸುವ ಕಾಲುವೆಯ ಹೆಸರೇನು ?
— ಟೆನ್ ಡಿಗ್ರಿ ಕಾಲುವೆ.


 ★ ವಿಕಿ ಲೀಕ್ಸ್ (wiki leaks) ನ ಪ್ರಧಾನ ಸಂಪಾದಕರ ಹೆಸರೇನು ?
— ಜೂಲಿಯನ್ ಅಸಾಂಜೆ.


 ★ ಮಾಳ್ವ ಪ್ರಸ್ಥಭೂಮಿಯಲ್ಲಿ ಉಗಮಗೊಳ್ಳುವ ಗಂಗಾನದಿಯ ಎರಡು ಉಪನದಿಗಳು ಯಾವುವು ?
— ಚಂಪಲ್ ಮತ್ತು ಚೆತ್ವಾ.


 ★ ಕರ್ನಾಟಕದಲ್ಲಿ ಅಣು ವಿದ್ಯುತ್ ಸ್ಥಾವರಗಳು ಎಷ್ಟಿವೆ ?
— ಒಂದು.


 ★ ವಿಶ್ವದ ಶೇಕಡಾವಾರು ಎಷ್ಟರ ಪ್ರಮಾಣದ ನೀರು ಹಿಂದೂ ಮಹಾಸಾಗರದಲ್ಲಿದೆ ?
— ಶೇ.20 ರಷ್ಟು.


 ★ 'ಏಳು ಕಣಿವೆಗಳು' ಎಂಬ ಗ್ರಂಥವು ಯಾವ ಧರ್ಮದ ಗ್ರಂಥ ?
 — ಬಹಾಯಿಯವರು.


 ★ ಹವಾಮಾನ ಒತ್ತಡವು ಭೂಮಿಯ ಮೇಲಿನ ಗಾಳಿಯ ಒತ್ತಡವನ್ನು ಅವಲಂಬಿಸಿರುತ್ತದೆ. ಹಾಗಾದರೆ ನಿರ್ದಿಷ್ಟ ಸಮುದ್ರ ಮಟ್ಟದ ಒತ್ತಡವೆಷ್ಟು ?
— 1 ಎಟಿಯಂ.


 ★ ಮಹಾತ್ಮಾ ಗಾಂಧಿಯವರ ಬರವಣಿಗೆಗಳ ಮುದ್ರಣ ಹಕ್ಕು ಇವರಲ್ಲಿದೆ.
 — ನವಜೀವನ ನಿಕ್ಷೇಪ.


 ★ ಒಂದು ಚದರ ಕಿ.ಮೀ ಗೆ ಎಷ್ಟು ಹೆಕ್ಟೇರ್ ಆಗುತ್ತದೆ ?
 —100 ಹೆಕ್ಟೇರ್.


 ★ 'ಕದಳಿಗರ್ಭಶಾಮಂ' ಎಂದು ತನ್ನ ಬಗ್ಗೆ ಹೇಳಿಕೊಂಡ ಕವಿ ಯಾರು ?
— ಪಂಪ.

 ★ ಯಾವುದರ ಉತ್ತತ್ತಿಯಿಂದ ಎಲೆಗಳ ಬಣ್ಣ ಹಸಿರು ಆಗುವುದಕ್ಕೆ ಕಾರಣ ?
— ಕ್ಲೋರೋಫಿಲ್.


 ★ ನೀಲಗಿರಿ ಮರವನ್ನು ಭಾರತದಲ್ಲಿ ಪ್ರಪ್ರಥಮ ಬಾರಿಗೆ ಪರಿಚಯಿಸಿದವರು ಯಾರು ?
— ಟಿಪ್ಪು ಸುಲ್ತಾನ.


 ★ ಸ್ಟಾಕ್ ಮಾರುಕಟ್ಟೆಯ ಸಂಧರ್ಭದಲ್ಲಿ IPO ಏನನ್ನು ಸೂಚಿಸುತ್ತದೆ ?
— Initial Public Offering.


 ★ ಯಾವ ಏಷ್ಯಾದ ಭಾಷೆಗಳು ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಾಗಿವೆ?
— ಚೈನೀಸ್ ಮತ್ತು ಅರೆಬಿಕ್.


 ★ 'ಐ, ಔ' ಗಳಿಗೆ ವ್ಯಾಕರಣದಲ್ಲಿ ಏನೆಂದು ಕರೆಯುತ್ತಾರೆ ?
— ಸಂಧ್ಯಕ್ಷರಗಳು.


 ★ ಅಂತರ್ರಾಷ್ಟ್ರೀಯ ಡೆಡ್ ಲೈನ್ (Deadline) ಯಾವ ಸ್ಥಳದಲ್ಲಿದೆ ?
— ಪೆಸಿಫಿಕ್ ಸಾಗರ.


 ★ ಸೌರವ್ಯೂಹದಲ್ಲಿ ಅತ್ಯಂತ ಸಾಂದ್ರವಾದ ಗ್ರಹ ಯಾವುದು ?
— ಭೂಮಿ.


 ★ "RDX"( ಆರ್ ಡಿ ಎಕ್ಸ್) ನ ರಾಸಾಯನಿಕ ನಾಮವೇನು ?
— ಸೈಕ್ಲೋಟ್ರೈಮೆತಿಲೀನ್ ಟ್ರೈನೈಟ್ರಮೀನ್.


★ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮ (NREGA) ವನ್ನು ಮೊತ್ತ ಮೊದಲಿಗೆ ಜಾರಿಗೆ ತಂದ ಸಮ್ಮಿಶ್ರ ಸರ್ಕಾರ ಯಾವುದು ?
— ಯುನೈಟೆಡ್ ಪ್ರೊಗ್ರೆಸೀವ್ ಮೈತ್ರಿಕೂಟ (UPA) - 2004 -2009.


 ★ ಅಪಾಯದ ಅಂಚಿನಲ್ಲಿರುವ ಏಷ್ಯಾದ ಸಿಂಹಗಳನ್ನು ಹೊಂದಿರುವ ಭಾರತದ ಏಕೈಕ ಅಭಯಾರಣ್ಯ ಎಲ್ಲಿದೆ ?
— ಗುಜರಾತ್.


 ★ ಮೊಸರಿಗೆ ಹುಳಿ ರುಚಿಯನ್ನು ತಂದುಕೊಡುವುದಕ್ಕೆ ಕಾರಣವಾದ ಜೀವಾಣು ಯಾವುದು ?
— Lactobacillus bulagaricus.


 ★ 2011ರ ಹುಲಿಗಳ ಸಂಖ್ಯಾಗಣತಿಯ ಪ್ರಕಾರ ಹುಲಿಗಳ ಸಂಖ್ಯೆ ಅತ್ಯಂತ ಹೆಚ್ಚಾಗಿರುವ ರಾಜ್ಯ ಯಾವುದು ?
— ಕರ್ನಾಟಕ.


 ★ ಇತ್ತೀಚೆಗೆ ಕೇಂದ್ರ ಮಾಹಿತಿ ಆಯುಕ್ತರಾಗಿ ನೇಮಕಗೊಂಡರವರು :
— ಸುಷ್ಮಾ ಸಿಂಗ್.


 ★ C.N ರಾಮಚಂದ್ರನ್ ಅವರ ಯಾವ ಕೃತಿಗೆ 2013 ನೇ ಸಾಲಿನ ಕೇಂದ್ರ ಅಕಾಡೆಮಿ ಪ್ರಶಸ್ತಿ ದೊರೆತಿದೆ ?
— ಆಖ್ಯಾನ - ವ್ಯಾಖ್ಯಾನ.


 ★ ನೈಸರ್ಗಿಕವಾಗಿ ತಯಾರಾಗುವ ಅತಿಗಟ್ಟಿಯಾದ ವಸ್ತು ಯಾವುದು ?
— ಸಿಲಿಕಾನ್ ಕಾರ್ಬೈಡ್.


 ★ ಇತ್ತೀಚೆಗೆ ವಿವಾದಕ್ಕೊಳಪಟ್ಟ 'The Hindus An Alternative History' ಪುಸ್ತಕದ ಲೇಖಕಿ :
— ವೆಂಡಿ ಡೋನ್ ಗಿರ್.


 ★ ನ್ಯಾನೊ (NANO) ವಿಜ್ಞಾನದಲ್ಲಿ ಎಂಟೆಕ್ (M TECH) ಆರಂಭಿಸಿದ ಕರ್ನಾಟಕದ ಮೊದಲ ವಿಶ್ವವಿದ್ಯಾಲಯ ಯಾವುದು ?
— ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ.


★ ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಯಾವ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿತು ?
— ಒರಿಯಾ (ಓರಿಸ್ಸಾ)


 ★ ಒಂದು ಮೆಗಾಬೈಟ್ (Megabyte) ಕೆಳಗಿನ ಯಾವುದಕ್ಕೆ ಸಮ ?
— 1024 ಬೈಟ್ ಗಳು (Bytes).


 ★ ಕರ್ನಾಟಕದಲ್ಲಿ ವಾರ್ಡ್ ಸಭೆಯು ಕನಿಷ್ಠ ಎಷ್ಟು ತಿಂಗಳಿಗೊಮ್ಮೆ ಕರೆಯಲಾಗುತ್ತದೆ ?
— 6 ತಿಂಗಳು.


 ★ ಇತ್ತೀಚೆಗೆ 9ನೇ WTO ಶೃಂಗಸಭೆ ನಡೆದದ್ದು ಎಲ್ಲಿ ?
 — ಇಂಡೋನೇಷ್ಯಾ.


 ★ 'ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡು' ಎಂಬ ನುಡಿಗಟ್ಟಿನ ಅರ್ಥ ?
— ಸ್ಪಷ್ಟವಾಗಿ ನೋಡು.


 ★ ವಿಶ್ವದಲ್ಲೇ ಮೊದಲ ಬಾರಿಗೆ ಅಂಧರ ಸ್ಮಾರ್ಟ್ ಫೋನ್ ತಯಾರಿಸಿದ ದೇಶ ಯಾವುದು ?
— ಭಾರತ.


 ★ Email Address ಗಳು ಮತ್ತು ದೂರವಾಣಿ ಸಂಖ್ಯೆಗಳನ್ನು Microsoft Outlook ಎಲ್ಲಿ ಸಂಗ್ರಹಿಸುತ್ತದೆ ?
— ಕಾಂಟ್ರ್ಯಾಕ್ಟ್ ಫೋಲ್ಡರ್.


 ★ ಇತ್ತೀಚೆಗೆ 3ನೇ ಬಾರಿ ಜರ್ಮನಿಯ ಚಾನ್ಸಲರ್ ಅಗಿ ಆಯ್ಕೆಗೊಂಡವರು :
— ಏಂಜೆಲಾ ಮಾರ್ಕೆಲ್.


 ★ ಯಾವುದನ್ನು 'ಪ್ರಾಚೀನ ಭಾರತದಹೆಟೆರೋಡಾಕ್ಸ್ (Heterodox) ಚಿಂತನೆ' ಎಂದು ಉದಾಹರಿಸಬಹುದು ?
— ಲೋಕಾಯುತ.


 ★ ಮಾನವ ಸಂತತಿಗಳ ಅನುವಂಶಿಕ ಗುಣಗಳನ್ನು ಉತ್ತಮಪಡಿಸುವ ವಿಜ್ಞಾನವನ್ನು ಹೀಗೆ ಕರೆಯುತ್ತಾರೆ..
— ಯೂಜೆನಿಕ್ಸ್.


 ★ ಸಲೀಂ ಅಲಿ ಪಕ್ಷಿಧಾಮವು ಯಾವ ರಾಜ್ಯದಲ್ಲಿದೆ ?
— ಕೇರಳ.


 ★ 'ಅರ್ಕೈವ್'(ಪತ್ರಗಾರ)(Archive) ಅಂದರೆ ?
 — ಕಂಪ್ಯೂಟರಿನ ಹಳೆಯ ಕಡತಗಳ ಉಗ್ರಾಣ.


 ★ ಪೊಲೀಸರು ಬಳಸುವ ಆಲ್ಕೋಮೀಟರ್ ನ ಕಾರ್ಯವೇನು ?
— ಉಸಿರಾಟ ವಿಶ್ಲೇಷಣಕ್ಕೆ.


 ★ ಸತತ 3ನೇ ಬಾರಿ ಮಹಿಳಾ ವಿಶ್ವಕಪ್ ಕಬಡ್ಡಿ ಪಂದ್ಯವನ್ನು ಗೆದ್ದ ದೇಶ :
— ಭಾರತ. (ನ್ಯೂಜಿಲೆಂಡ್ ದೇಶದ ವಿರುದ್ದ)


★ ದೇಶದ ಮೊದಲ ISI (Indian Statistical Institute) ಮೆಡಿಕಲ್ ಹಬ್ ಲೋಕಾರ್ಪಣೆ ಮಾಡಿದವರು :
— ಸೊನಿಯಾ ಗಾಂಧಿ.


 ★ ಇತ್ತೀಚೆಗೆ 1962ರಲ್ಲಿ ಸಂಭವಿಸಿದ ಭಾರತ-ಚೀನಾ ಸಮರದ ಕುರಿತ ರಹಸ್ಯ ಮಾಹಿತಿ ಹೊಂದಿದ ವರದಿ :
— ಹೆಂಡರ್ ಸನ್ ಬ್ರೂಕ್ಸ್ - ಭಗತ್ ವರದಿ.


★ ಇತ್ತೀಚೆಗೆ 1962ರಲ್ಲಿ ಸಂಭವಿಸಿದ ಭಾರತ-ಚೀನಾ ಸಮರದ ಕುರಿತ ರಹಸ್ಯ ಮಾಹಿತಿಯ ವರದಿಯಾದ 'ಹೆಂಡರ್ ಸನ್ ಬ್ರೂಕ್ಸ್ - ಭಗತ್ ವರದಿ' ಯನ್ನು ಬಹಿರಂಗ ಪಡಿಸಿದವರು :
— ಆಸ್ಟ್ರೇಲಿಯಾ ಮೂಲದ ಪತ್ರಕರ್ತ ನೆವಿಲ್ ಮ್ಯಾಕ್ಸ್ ವೆಲ್.


 ★ 'ಸೇವಾಗ್ರಾಮ' ಎಂಬುದು ಯಾರೊಂದಿಗೆ ಸಂಭಂದಿಸಿದೆ?
 — ಮಹಾತ್ಮಾ ಗಾಂಧಿ.


 ★ ಕೇಂದ್ರ ಸರ್ಕಾರದ 'ರೋಶನಿ ಯೋಜನೆ' ಸಂಬಂಧಿಸಿದ್ದುದು ?
— ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಿ ಉದ್ಯೋಗ ಕಲ್ಪಿಸುವುದು.


 ★ ಎತ್ತರದ ತೆಂಗಿನ ಮರದ ತುದಿಯನ್ನು ನೀರು ತಲುಪುವುದು- ಇದಕ್ಕೆ ಕಾರಣ.
— ನೀರಿನ ಮೇಲೆ ತುಯ್ತ (Surface tension)


 ★ ಅಧ್ಯಾತ್ಮಿಕ ನಾಯಕ 'ಸತ್ಯ ಸಾಯಿಬಾಬಾ' ರವರ ಮೂಲ ಹೆಸರೇನು ? — ಸತ್ಯ ನಾರಾಯಣ ರಾಜು.


 ★ ಆಧಾರ್ (Unique Identification (UID)ಯೋಜನೆಯನ್ನು ದೇಶದಲ್ಲೇ ಪ್ರಥಮ ಬಾರಿಗೆ ಮಹಾರಾಷ್ಟ್ರದ ತೆಂಬ್ಲಿ ಎಂಬಲ್ಲಿ ಸೆಪ್ಟಂಬರ್ 29, 2010 ರಲ್ಲಿ ಉದ್ಘಾಟನೆಗೊಂಡಿತ್ತು.

 * ತಂಬ್ಲಿ ಗ್ರಾಮದ ರಂಜನ್ ಸೊನಾವನೆ ಆಧಾರ್ ಕಾರ್ಡ್ ಪಡೆದೆ ಪ್ರಥಮ ಪ್ರಜೆಯಾಗಿದ್ದಾರೆ.

No comments:

Post a Comment