"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 10 April 2014

★ "ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆ" (National Urban Livelihoods Mission) ( ಟಿಪ್ಪಣಿ)

★ "ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆ"
(National Urban Livelihoods Mission) :

ಕೇಂದ್ರ ಸರ್ಕಾರವು 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆಯನ್ನು ಪುನರ್ ರಚಿಸಿ ಅದನ್ನು "ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆ" (National Urban LivelihoodsMission) ಎಂದು ಪುನರ್ ನಾಮಕರಣ ಮಾಡಿ ಚಾಲನೆಯಲ್ಲಿ ತಂದಿದೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರ ರೂ 6405 ಕೋಟಿಯನ್ನು ವ್ಯಯಿಸಲಿದೆ.

 ★ ಯೋಜನೆಯ ಬಗ್ಗೆ:
*.ನಗರದಲ್ಲಿ ಬಡತನ ನಿರ್ಮೂಲನೆ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ. ಶೋಷಿತ ವರ್ಗದ ಜನರಿಗೆ ಸ್ವ-ಉದ್ಯೋಗ ಜತೆಗೆ ಕೌಶಲ್ಯ ವೃದ್ದಿಯನ್ನು ಹೆಚ್ಚಿಸಿ ಸ್ವ-ಉದ್ಯೋಗಕ್ಕೆ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರವನ್ನುವಹಿಸಲಿದೆ.

*.ನಗರ ಬಡಜನತಗೆ ವಸತಿ ಸೌಕರ್ಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಹಂತಹಂತವಾಗಿ ಒದಗಿಸಲಿದೆ.

 *.ಇದರ ಜೊತೆಗೆ ನಗರ ಬೀದಿ ವ್ಯಾಪಾರಿಗಳಿಗೂ ಈ ಯೋಜನೆಯಡಿ ಸಾಮಾಜಿಕ ಭದ್ರತೆ, ಸಾಲ ಸೌಕರ್ಯ ಮತ್ತು ಕೌಶಲ್ಯ ಅಭಿವೃದ್ದಿ ಉತ್ತೇಜಿಸಲು ಗುರಿಹೊಂದಲಾಗಿದೆ.

★ ಅನುಷ್ಠಾನ:
*.ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆಯನ್ನು ಎರಡು ಹಂತಗಳಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.ಮೊದಲನೇ ಹಂತ (2013-17) ಹಾಗೂ ಎರಡನೇ ಹಂತ (2017-22).

 *.ಮೊದಲ ಹಂತದಲ್ಲಿ ಈ ಒಂದು ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚಿರುವ ನಗರಗಳಲ್ಲಿ ಮತ್ತು ಒಂದು ಲಕ್ಷಕ್ಕಿಂತ ಕಡಿಮೆ ಇರುವ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಹಾಗೂ ಯೋಜನೆಯ ಅನುಷ್ಠಾನಕ್ಕೆ ತಗಲುವ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ 75: 25 ಅನುಪಾತದಲ್ಲಿ ಭರಿಸಲಿವೆ

 *.ಈಶಾನ್ಯ ರಾಜ್ಯ ಮತ್ತು ವಿಶೇಷ ಸ್ಥಾನಮಾನ ಹೊಂದಿರುವ ರಾಜ್ಯಗಳಲ್ಲಿ ಈ ಯೋಜನೆಯ ಅನುಷ್ಠಾನ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ 90:10 ಅನುಪಾತದಲ್ಲಿ ಭರಿಸಲಿವೆ.

1 comment: