"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label ಕರ್ನಾಟಕದ ವರದಿಗಳು. Show all posts
Showing posts with label ಕರ್ನಾಟಕದ ವರದಿಗಳು. Show all posts

Thursday, 31 December 2015

☀ಕರ್ನಾಟಕ ಸರ್ಕಾರದ ಪ್ರಮುಖ ಆಯೋಗಗಳು / ವರದಿಗಳು : (Karnataka Government major commissions and Reports)

☀ಕರ್ನಾಟಕ ಸರ್ಕಾರದ ಪ್ರಮುಖ ಆಯೋಗಗಳು / ವರದಿಗಳು :
(Karnataka Government major commissions and Reports)
 ━━━━━━━━━━━━━━━━━━━━━━━━━━━━━━━━━━━━━━━━━━
★ ಕರ್ನಾಟಕದ ಆರ್ಥಿಕತೆ
(Karnataka Economics)


— ಕರ್ನಾಟಕ ರಾಜ್ಯವು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ರಾಜ್ಯ ಸರ್ಕಾರವು ಹಲವು ಸಮಿತಿ / ಆಯೋಗಗಳನ್ನು ರಚಿಸಿದೆ. ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಮರುಕಳಿಸಬಾರದೆಂಬ ಆಲೋಚನೆ ಈ ಸಮಿತಿ / ಆಯೋಗಗಳಿಗಿರುತ್ತದೆ.ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಕುರಿತಾಗಿ ಹಲವು ಪ್ರಶ್ನೆಗಳು ಬಂದಿವೆ. 'ಸ್ಪರ್ಧಾಲೋಕ 'ವು ಈ ನಿಟ್ಟಿನಲ್ಲಿ ಸ್ಪರ್ಧಾಳುಗಳಿಗೆ ಉಪ
ಯುಕ್ತವಾಗಬಲ್ಲದೆಂಬ ಆಶಯದೊಂದಿಗೆ ಗೆಳೆಯರ ಸಹಾಯದಿಂದ ಕೆಲವೊಂದು ಪ್ರಮುಖ ಸಮಿತಿ / ಆಯೋಗಗಳನ್ನು ಇಲ್ಲಿ ವಿವರಿಸಲು ಪ್ರಯತ್ನಿಸಲಾಗಿದೆ.


★ಪ್ರಮುಖ ಆಯೋಗಗಳು / ವರದಿಗಳು :
━━━━━━━━━━━━━━━━━━━━━━

■. ಆಯೋಗ : ••┈┈┈┈• ಗೋಕಾಕ್ ವರದಿ
■. ಉದ್ದೇಶ : ••┈┈┈┈• ಶಾಲಾ ಶಿಕ್ಷಣದಲ್ಲಿ ಕನ್ನಡದ ಸ್ಥಾನಮಾನ
■. ಅಧ್ಯಕ್ಷರು  ••┈┈┈┈• ವಿ.ಕೃ.ಗೋಕಾಕ್


■. ಆಯೋಗ : ••┈┈┈┈• ಎಚ್ಚೆನ್(AHN) ವರದಿ
■. ಉದ್ದೇಶ : ••┈┈┈┈• ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯ
■. ಅಧ್ಯಕ್ಷರು  ••┈┈┈┈• ಎಚ್.ನರಸಿಂಹಯ್ಯ


■. ಆಯೋಗ : ••┈┈┈┈• ನಾರಾಯಣಸ್ವಾಮಿ ವರದಿ
■. ಉದ್ದೇಶ : ••┈┈┈┈• ಆಡಳಿತದಲ್ಲಿ ಕನ್ನಡ ಅನುಷ್ಠಾನ ರೀತಿ


■. ಆಯೋಗ : ••┈┈┈┈• ಮಹಿಷಿ ವರದಿ
■. ಉದ್ದೇಶ : ••┈┈┈┈• ಕನ್ನಡಿಗರಿಗೆ ಉದ್ಯೋಗಾವಕಾಶ
■. ಅಧ್ಯಕ್ಷರು  ••┈┈┈┈• ಸರೋಜಿನಿ ಮಹಿಷಿ


■. ಆಯೋಗ : ••┈┈┈┈• ಉದ್ಯೋಗ ಸಮಿತಿ ವರದಿ
■. ಉದ್ದೇಶ : ••┈┈┈┈• ಮಹಿಷಿ ವರದಿ ಪರಿಷ್ಕರಣೆ


■. ಆಯೋಗ : ••┈┈┈┈• ಒಡೆಯರ್ ವರದಿ
■. ಉದ್ದೇಶ : ••┈┈┈┈• ಕನ್ನಡ ವಿ.ವಿ. ಸ್ವರೂಪ ನಿರ್ಧಾರ


■. ಆಯೋಗ : ••┈┈┈┈• ಅಹುಜಾ ಸಮಿತಿ
■. ಉದ್ದೇಶ : ••┈┈┈┈• ಕಾವೇರಿ ನದಿ ನೀರಿನ ಬಳಕೆ


■. ಆಯೋಗ : ••┈┈┈┈• ಬಚಾವತ್ ವರದಿ
■. ಉದ್ದೇಶ : ••┈┈┈┈• ಕೃಷ್ಣಾ ನದಿ ನೀರಿನ ಹಂಚಿಕೆ


■. ಆಯೋಗ : ••┈┈┈┈• ನಂಜುಂಡಪ್ಪ ವರದಿ
■. ಉದ್ದೇಶ : ••┈┈┈┈• ಪ್ರಾದೇಶಿಕ ಅಸಮಾನತೆ ನಿವಾರಣೆ


■. ಆಯೋಗ : ••┈┈┈┈• ವೀರಪ್ಪ ಮೊಯಿಲಿ ವರದಿ
■. ಉದ್ದೇಶ : ••┈┈┈┈• ಕರ್ನಾಟಕರಾಜ್ಯ ತೆರಿಗೆ ಸುಧಾರಣೆ
■. ಅಧ್ಯಕ್ಷರು  ••┈┈┈┈• ವೀರಪ್ಪ ಮೊಯಿಲಿ


■. ಆಯೋಗ : ••┈┈┈┈• ನಾರಾಯಣಮೂರ್ತಿ ವರದಿ
■. ಉದ್ದೇಶ : ••┈┈┈┈• ಮಾಹಿತಿ ತಂತ್ರಜ್ಞಾನ ಕಾರ್ಯಪಡೆ
■. ಅಧ್ಯಕ್ಷರು  ••┈┈┈┈• ನಾರಾಯಣ ಮೂರ್ತಿ


■. ಆಯೋಗ : ••┈┈┈┈• ಕಿರಣ್ ಮಜುಂದಾರ್ ವರದಿ
■. ಉದ್ದೇಶ : ••┈┈┈┈• ಜೈವಿಕ ತಂತ್ರಜ್ಞಾನ ಕಾರ್ಯಪಡೆ
■. ಅಧ್ಯಕ್ಷರು  ••┈┈┈┈• ಕಿರಣ್ ಮಜುಂದಾರ್ ಷಾ


■. ಆಯೋಗ : ••┈┈┈┈• ಹಾರನಹಳ್ಳಿರಾಮಸ್ವಾಮಿ ವರದಿ
■. ಉದ್ದೇಶ : ••┈┈┈┈• ರಾಜ್ಯ ಆಡಳಿತ ಸುಧಾರಣೆ
■. ಅಧ್ಯಕ್ಷರು  ••┈┈┈┈• ಹಾರನಹಳ್ಳಿ ರಾಮಸ್ವಾಮಿ


■. ಆಯೋಗ : ••┈┈┈┈• L.G.ಹಾವನೂರು ವರದಿ
■. ಉದ್ದೇಶ : ••┈┈┈┈• ಹಿಂದುಳಿದ ವರ್ಗ ಅಭಿವೃದ್ಧಿ
■. ಅಧ್ಯಕ್ಷರು  ••┈┈┈┈• L.G.ಹಾವನೂರು


■. ಆಯೋಗ : ••┈┈┈┈• ವೆಂಕಟಸ್ವಾಮಿ ಆಯೋಗ (1985)
■. ಉದ್ದೇಶ : ••┈┈┈┈• ಹಿಂದುಳಿದ ವರ್ಗ ಪಟ್ಟಿ ಪುನರ್ ಪರಿಶೀಲನೆ


■. ಆಯೋಗ : ••┈┈┈┈• ಕರ್ನಾಟಕ ಭೂಸುಧಾರಣಾ ಆಯೋಗ
■. ಅಧ್ಯಕ್ಷರು : ••┈┈┈┈• ಬಿ.ಡಿ.ಜತ್ತಿ


■. ಆಯೋಗ : ••┈┈┈┈• ಲೆಸ್ಲಿ ಮಿಲ್ಲರ್ ಆಯೋಗ (1918)
■. ಉದ್ದೇಶ : ••┈┈┈┈• ಹಿಂದುಳಿದವರಿಗೆ ಮೀಸಲಾತಿ
■. ಅಧ್ಯಕ್ಷರು : ••┈┈┈┈• ಲೆಸ್ಲಿ ಮಿಲ್ಲರ್


■. ಆಯೋಗ : ••┈┈┈┈• ಚನ್ನಪ್ಪ ರೆಡ್ಡಿ ಆಯೋಗ (1990)
■. ಉದ್ದೇಶ : ••┈┈┈┈• ಹಿಂದುಳಿದವರಿಗೆ ಮೀಸಲಾತಿ
■. ಅಧ್ಯಕ್ಷರು  ••┈┈┈┈• ಚನ್ನಪ್ಪ ರೆಡ್ಡಿ


■. ಆಯೋಗ : ••┈┈┈┈• R.ನಾಗಣ್ಣ ಆಯೋಗ (1961)
■. ಉದ್ದೇಶ : ••┈┈┈┈• ಹಿಂದುಳಿದವರಿಗೆ ಮೀಸಲಾತಿ
■. ಅಧ್ಯಕ್ಷರು  ••┈┈┈┈• R.ನಾಗಣ್ಣ


■. ಆಯೋಗ : ••┈┈┈┈• A.D.ಗೊರವಾಲ ಸಮಿತಿ
■. ಉದ್ದೇಶ : ••┈┈┈┈• ಆಡಳಿತ ಸುಧಾರಣೆ.

— ಮತ್ತಿನ್ನೇನಾದರೂ ಇವುಗಳಲ್ಲಿ ಸೇರ್ಪಡೆಗೆ ತಾವುಗಳು ಇಚ್ಛಿಸಿದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂಬ ವಿನಂತಿ.