"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label ಕರ್ನಾಟಕ ರಾಜ್ಯ ಯುವ ನೀತಿ (Karnataka State Youth Policy) :. Show all posts
Showing posts with label ಕರ್ನಾಟಕ ರಾಜ್ಯ ಯುವ ನೀತಿ (Karnataka State Youth Policy) :. Show all posts

Tuesday, 18 March 2014

★ ಕರ್ನಾಟಕ ರಾಜ್ಯ ಯುವ ನೀತಿ (Karnataka State Youth Policy) :

★ ಕರ್ನಾಟಕ ರಾಜ್ಯ ಯುವ ನೀತಿ (Karnataka State Youth Policy) :

 ಕರ್ನಾಟಕ ರಾಜ್ಯದ ಸುಮಾರು 6.11 ಕೋಟಿ ಜನಸಂಖ್ಯೆಯ ಪೈಕಿ 1.9 ಕೋಟೆ ಮಂದಿ ಯುವಕರಿದ್ದು ಇವರೆಲ್ಲರ ಬೆಳವಣಿಗೆ ಮತ್ತು ಪ್ರಗತಿಯನ್ನಾಧರಿಸಿ ಯುವ ನೀತಿಯನ್ನು ಪ್ರಕಟಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.

- ಯುವ ನೀತಿಯ ಪ್ರಕಾರ 16-30 ವಯೋಮಾನದ ಯುವ ಸಮುದಾಯವನ್ನು ಯುವಕರೆಂದು ಗುರುತಿಸಲಾಗಿದೆ.

 * ಈ ನೀತಿಯನ್ನು ಸಾಧಿಸಲು ಕರ್ನಾಟಕ ಸರ್ಕಾರದ ಮುಂದೆಹಲವಾರು ಸವಾಲುಗಳಿದ್ದು ಅವುಗಳಲ್ಲಿ ಪ್ರಮುಖವಾಗಿ ರಾಜ್ಯದ ಕಾಲುಭಾಗದಷ್ಟು ಯುವಕರು ಅನಕ್ಷರಸ್ಥರಾಗಿದ್ದಾರೆ. ಯುವತಿಯರಲ್ಲಿ ಅರ್ಧದಷ್ಟು ಮಂದಿಯ ವಿದ್ಯಾಭ್ಯಾಸ 10ನೇ ತರಗತಿಯನ್ನು ದಾಟಿಲ್ಲ. ಇಂಥ ಸನ್ನಿವೇಶದ ನಡುವೆ ಕರ್ನಾಟಕ ಜ್ಞಾನ ಆಯೋಗ ಮತ್ತು ರಾಜ್ಯ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ರಾಜ್ಯ ಯುವ ನೀತಿಯ ಕರಡು ರೂಪಿಸಿವೆ.

 * ರಾಜ್ಯ ಯುವ ನೀತಿಯ ಗುರಿಗಳು :
- ಕರ್ನಾಟಕದಲ್ಲಿರುವ ಸಕಲ ಯುವಕರನ್ನು ತಲುಪುವುದು.
- ರಾಜ್ಯದ ಯುವ ಜನರ ಆಶೋತ್ತರಗಳು ಮತ್ತು ಗುರಿಗಳನ್ನು ಕಾರ್ಯಾನುಷ್ಠಾನಗೊಳಿಸುವುದು ಮತ್ತು ಅಕ್ಷರ ರೂಪಕ್ಕೆ ತರುವುದು.
- ಯುವ ಸಮುದಾಯದ ಆಂತರಿಕ ಸತ್ವವನ್ನು ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ಸದೃಢಗೊಳಿಸುವುದು.
- ಎಲ್ಲ ಕ್ಷೇತ್ರಗಳಲ್ಲಿಯೂ ಯುವಶಕ್ತಿಯನ್ನು ಪರಿಗಣಿಸಿ ಯುವಕರ ಮತ್ತು ರಾಜ್ಯದ ಬೆಳವಣಿಗೆಗೆ ಸಹಾಯಕವಾಗಿ ಯುವಶಕ್ತಿಯನ್ನುಬೆಳೆಸುವುದು.
- ಉದ್ದೇಶಿತ ಗುರಿ ಸಾಧನೆಗೆ ಕ್ರಿಯಾ ಯೋಜನೆಗಳನ್ನು ವಿನ್ಯಾಸಗೊಳಿಸಿ ಯುವ ನೀತಿ ಅನುಷ್ಟಾನ ಗೊಳ್ಳುವಂತೆ ನೋಡಿಕೊಳ್ಳುವುದು.

 * ಯುವ ನೀತಿಯ ಕಾರ್ಯತಂತ್ರ : ಕರ್ನಾಟಕ ರಾಜ್ಯ ಯುವ ನೀತಿಯ ಕಾರ್ಯತಂತ್ರಐದು ಹಂತಗಳಲ್ಲಿದೆ.
1) ತಲುಪುವಿಕೆ
2) ತೊಡಗಿಸುವಿಕೆ
3) ಸಬಲೀಕರಣ
4) ಕಾಣಿಕೆ
5) ಪ್ರಗತಿ
ಈ ಕರಡು ನೀತಿಯ ಬಗ್ಗೆ ಈಗ ಸಾರ್ವಜನಿಕ ಚರ್ಚೆ ನಡೆಯುತ್ತಿದೆ.