"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 19 February 2019

•► "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು (PART : I) (KAS INTERVIEW PREPARATION)

•► "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು (PART : I)
(KAS INTERVIEW PREPARATION)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಸಂದರ್ಶನ ತಯಾರಿ
(KAS Interview Preparation)

★ ಸಾಮಾನ್ಯ ಅಧ್ಯಯನ ತಯಾರಿ
(General Studies Preparation)

"ಕೆಎಎಸ್ ಇಂಟರ್‌ವ್ಯೂ (KAS INTERVIEW PREPARATION) ತಯಾರಿ"ಗಾಗಿ ನನ್ನ ಅಭಿಪ್ರಾಯ ಪ್ರಕಾರ ಸ್ಪರ್ಧಾರ್ಥಿಗಳು ಈ ಕೆಳಗೆ ನೀಡಲಾದ ವಿಷಯಗಳನ್ನು ಪರಿಗಣಿಸಬಹುದು. ಇವು ಪ್ರಚಲಿತ ಘಟನೆಗಳನ್ನಾಧರಿಸಿ ಆಯ್ದುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಸಂಗ್ರಹಿಸಿದ್ದು ಆದಾಗ್ಯೂ ಇವೇ ಅಂತಿಮವಲ್ಲ. ಉಳಿದ ವಿಷಯಗಳನ್ನು ಶೀಘ್ರದಲ್ಲೇ ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡುವೆ.  ಏನಾದರೂ ತಪ್ಪಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತನ್ನಿ (Gmail : yaseen7ash@gmail.com)


• ವಿಷಯವಸ್ತು :

1.ನೀವು ಈ ಹುದ್ದಗೆ ಅರ್ಹರು ಎಂದು ಹೇಗೆ ಸಾಬೀತುಪಡಿಸಬಲ್ಲಿರಿ?

2.ಭಾರತದ ರೂಪಾಯಿಯು ಡಾಲರ್ ಎದುರು ಕುಸಿತಗೊಳ್ಳುತ್ತಿದ್ದು ಏಕೆ?

3.ಫಸಲ್ ವಿಮಾ ಯೋಜನೆ :

4.ಪ್ರಸ್ತುತ ದೇಶದ/ರಾಜ್ಯದ ಜಿಡಿಪಿ(GDP)ಯಲ್ಲಿ ಕೃಷಿ ವಲಯ & ಸೇವಾ ವಲಯದ ಪಾಲು.

5.ಜನ್-ಧನ್ ಯೋಜನೆಯ 4 ವರ್ಷಗಳ ಅವಲೋಕನ.

6.ದೇಶದ ವಿದೇಶಾಂಗ ನೀತಿ : ಇತ್ತೀಚಿನ ಬೆಳೆವಣಿಗೆಗಳು

7.ಇತರೇ ದೇಶಗಳಿಗೆ ಹೋಲಿಸಿದ್ದಲ್ಲಿ ಭಾರತದಲ್ಲಿ ತಲಾ ಆದಾಯವೇಕೆ ಅಲ್ಪ ಪ್ರಮಾಣದಲ್ಲಿದೆ?

8.ನೀತಿ ಆಯೋಗ : ಯೋಜನಾ ಆಯೋಗಕ್ಕಿಂತ ಹೇಗೆ ಭಿನ್ನ?

9.Eco Terrorism ಎಂದರೇನು?

10.ಮಹಿಳೆಯರ ಭದ್ರತೆಯ ವಿಷಯದಲ್ಲಿ ಭಾರತ ಸೋತಿರುವುದೇ?

11.climate change : ದೇಶದ ಮೇಲೆ ಇದರ ಪರಿಣಾಮಗಳು & ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿದ್ದ ಕ್ರಮಗಳು - ಅವಲೋಕನ.

12.ಸಾರ್ವತ್ರಿಕ ಮೂಲ ಆದಾಯ (Free Basic Income) - ಯಾಕೆ ಸರ್ಕಾರ ಇದನ್ನು ಜಾರಿಗೊಳಿಸುತ್ತಿಲ್ಲ?

13.ಅಂತರರಾಜ್ಯ ನದಿ ನೀರಿನ ವಿವಾದಗಳು. - ಕಾವೇರಿ ನದಿ ವಿವಾದದ ಬಗ್ಗೆ ನಿಮ್ಮ ಅಭಿಪ್ರಾಯ?

14.ದೇಶದಲ್ಲಿ ಕ್ರೀಡೆಗಳ ಉತ್ತೇಜನಕ್ಕಾಗಿ ತಾವು ಯಾವ್ಯಾವ ಉತ್ತೇಜನಾ ಕ್ರಮಗಳನ್ನು ಕೈಗೊಳ್ಳುವಿರಿ?

15 ಅಂತರರಾಜ್ಯ ನದಿ ಜೋಡಣೆಯ ಬಗ್ಗೆ ನಿಮ್ಮ ಅಭಿಪ್ರಾಯ

16.Brexit ಎಂದರೇನು? ಇದು ಸರಿಯೋ ತಪ್ಪೋ? ದೇಶದ ಮೇಲೆ ಇದರ ಪ್ರಭಾವ.

17.ಅಪೌಷ್ಟಿಕತೆ(malnutrition) ಸಮಸ್ಯೆ : ಯಾಕೆ ಉಲ್ಬಣಿಸುತ್ತಿದೆ?  ನೀವು ಇದರ ನಿರ್ಮೂಲನೆಯನ್ನು ಹೇಗೆ ನಿಭಾಯಿಸುವಿರಿ?

18.ಗ್ರಾಮೀಣಾಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿ ತಂದರೂ ಯಾಕೆ ಜನ ಗೂಳೆ ಹೋಗುವುದು ತಪ್ಪುತ್ತಿಲ್ಲ?

19.ಇತ್ತೀಚೆಗೆ ಪುನಃ ಉತ್ತರ ಕರ್ನಾಟಕ ಹೊಸ ರಾಜ್ಯ ರಚನೆ ಬಗ್ಗೆ ಕೂಗೆದ್ದಿತ್ತು, ಯಾಕೆ? ಉತ್ತರ & ದಕ್ಷಿಣ ಎಂಬ ತಾರತಮ್ಯ ನಿಮಗೆ ಕಾಣಿಸುತ್ತಿದೆಯೇ?

20.ಆಧಾರ್ ಕಾರ್ಡ್ ಮತ್ತು ಖಾಸಗಿತನದ ಹಕ್ಕು.
…ಮುಂದುವರೆಯುವುದು.

No comments:

Post a Comment