"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 25 February 2019

•► (PART : III) "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು (KAS INTERVIEW PREPARATION - Model Questions)

•►  (PART : III) "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು
(KAS INTERVIEW PREPARATION - Model Questions)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಸಂದರ್ಶನ ತಯಾರಿ
(KAS Interview Preparation)

★ ಸಾಮಾನ್ಯ ಅಧ್ಯಯನ ತಯಾರಿ
(General Studies Preparation)


"ಕೆಎಎಸ್ ಇಂಟರ್‌ವ್ಯೂ (KAS INTERVIEW PREPARATION) ತಯಾರಿ"ಗಾಗಿ ನನ್ನ ಅಭಿಪ್ರಾಯ ಪ್ರಕಾರ ಸ್ಪರ್ಧಾರ್ಥಿಗಳು ಈ ಕೆಳಗೆ ನೀಡಲಾದ ವಿಷಯಗಳನ್ನು ಪರಿಗಣಿಸಬಹುದು. ಇವು ಪ್ರಚಲಿತ ಘಟನೆಗಳನ್ನಾಧರಿಸಿ ಆಯ್ದುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಸಂಗ್ರಹಿಸಿದ್ದು ಆದಾಗ್ಯೂ ಇವೇ ಅಂತಿಮವಲ್ಲ. ಉಳಿದ ವಿಷಯಗಳನ್ನು ಶೀಘ್ರದಲ್ಲೇ ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡುವೆ.  ಏನಾದರೂ ತಪ್ಪಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತನ್ನಿ (Gmail : yaseen7ash@gmail.com)


• ವಿಷಯವಸ್ತು :




41. ಸುಸ್ಥಿರ ಕೃಷಿ ನಿರ್ವಹಣೆಗೆ ತಾವು ಸೂಚಿಸಬಹುದಾದ ವೈಜ್ಞಾನಿಕ ಅಂಶಗಳು.

42. ಪ್ರತ್ಯೇಕ ನಾಡಧ್ವಜ —
— 'ಒಂದು ದೇಶ- ಒಂದು ಧ್ವಜ' ಸೂತ್ರದ ನಡುವೆ ರಾಜ್ಯವೊಂದರಲ್ಲಿ ಪ್ರತ್ಯೇಕ ಧ್ವಜ ಏಕೆ?
— ಸಂವಿಧಾನದಲ್ಲಿ ಪ್ರತ್ಯೇಕ ಧ್ವಜದ ಕುರಿತು ಯಾವುದೇ ಪ್ರಸ್ತಾಪವಿಲ್ಲ. ನಮ್ಮ ಗುರುತನ್ನು ಕಾಪಾಡಿಕೊಳ್ಳಲು ಪ್ರತ್ಯೇಕ ಬಾವುಟ ಇದ್ದರೆ ತಪ್ಪೇನು?

43.ಜಯಂತಿ ವಿವಾದಗಳು :— ಐತಿಹಾಸಿಕ ಘಟನೆ, ವಿದ್ಯಮಾನಗಳನ್ನು ವರ್ತಮಾನದಲ್ಲಿ ನೋಡುವುದು ಹೇಗೆ ಎನ್ನುವ ಆಳವಾದ ಪರಾಮರ್ಶೆಯ ಕೊರತೆ ಇತ್ತೀಚಿನ ಚರ್ಚೆಗಳಲ್ಲಿ ಎದ್ದು ಕಾಣುತ್ತಿದೆಯೇ?

44. ಹೊರನಾಡ ಕನ್ನಡಿಗರ ಸಮಸ್ಯೆಗಳು — ಹೊರನಾಡ ಕನ್ನಡಿಗರಿಗೆ ಶಿಕ್ಷಣ-ಉದ್ಯೋಗ ವಲಯಗಳಲ್ಲಿ ಮೀಸಲು ಮತ್ತಿತರ ಸೌಲಭ್ಯ ಒದಗಿಸಬೇಕೇ?

45. ಮೌಢ್ಯ ನಿಷೇಧ ಕಾಯಿದೆ

46. ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ದೇಶದ ಮಹಿಳೆಯರ ಭಾಗವಹಿಸುವಿಕೆ.

47. ಸಮಾನ ನಾಗರಿಕ ಸಂಹಿತೆ & ತ್ರಿವಳಿ ತಲಾಕ್‌

48. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ( ಐಪಿಪಿಬಿ)

49. ನ್ಯಾಯಾಂಗ ನಿಂದನೆ .

50.2018ರ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪುಗಳು

51.ದೇಶದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ (ಎಂಎಸ್‌ಎಂಇ) ಪ್ರಸ್ತುತ ಸ್ಥಿತಿಗತಿ - ಇವುಗಳ ಮೇಲೆ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯ ಪ್ರಭಾವ

52.ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರಗಳ ನೀತಿಯನ್ನು ಕಳೆದೆರಡು ದಶಕಗಳಿಂದ ಅವಲೋಕಿಸಿ.

53.ಪ್ರಸ್ತುತ ದೇಶದ ಆರ್ಥಿಕತೆಗೆ ಅಸಂಘಟಿತ ವಲಯದ ಕೊಡುಗೆ.

54.ದೇಶದ ಅಸಂಘಟಿತ ವಲಯದ ಮೇಲೆ ನೋಟು ಅಮಾನ್ಯೀಕರಣ & ಜಿಎಸ್‌ಟಿಯ ಪರಿಣಾಮಗಳು.

55. ನಿರುದ್ಯೋಗ ಸಮಸ್ಯೆಗೂ ಸಂಪತ್ತಿನ ಅಸಮಾನತೆಗೂ ಇರುವ ಸಂಬಂಧವನ್ನು ತಿಳಿಸಿ.

56. ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವುದು ದೇಶಕ್ಕೆ ಒಳಿತೇ?

57. ಹೆಣ್ಣುಮಕ್ಕಳ ಪ್ರವೇಶ ನಿಷೇಧ ಮಹಿಳೆಯರ ಧಾರ್ಮಿಕ ಹಕ್ಕಿನ ಉಲ್ಲಂಘನೆ ಮತ್ತು ಸಂವಿಧಾನದ ಅವಗಣನೆಯೇ?

58. ದೇಶದ ಗಣ್ಯ ತನಿಖಾ ಸಂಸ್ಥೆಯಾದ ಸಿಬಿಐನ ಸ್ವತಂತ್ರ ಕಾರ್ಯವೈಖರಿ & ಪ್ರಸ್ತುತತೆ.

59. ಆಯುಷ್ಮಾನ್ ಭಾರತ್ ಅಥವಾ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ

60. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಸ್ವಾಯತ್ತತೆ & ಕೇಂದ್ರ ಸರ್ಕಾರ
…ಮುಂದುವರೆಯುವುದು

No comments:

Post a Comment