"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 30 March 2017

☀.ಐಎಎಸ್ ಪ್ರಶ್ನೆಪತ್ರಿಕೆ 2016 (ಕನ್ನಡ ಭಾಷಾಂತರ).. (66 ರಿಂದ 100 ಪ್ರಶ್ನೆಗಳು) (IAS GENERAL STUDIES PAPER I 2016)

☀.ಐಎಎಸ್ ಪ್ರಶ್ನೆಪತ್ರಿಕೆ 2016 (ಕನ್ನಡ ಭಾಷಾಂತರ).. (66 ರಿಂದ 100 ಪ್ರಶ್ನೆಗಳು)
(IAS GENERAL STUDIES PAPER I 2016)
•─━━━━━═══════════━━━━━─••─━━━━━═══════════━━━━━─•

★ ಐಎಎಸ್ ಪ್ರಶ್ನೆಪತ್ರಿಕೆ 2016
(IAS Question Paper I 2016))


2016 ನೇ ಸಾಲಿನ ಯು.ಪಿ.ಎಸ್.ಸಿ. ನಡೆಸಿದ ಸಿವಿಲ್ ಸರ್ವಿಸ್ ಪರೀಕ್ಷೆ (ಐಎಎಸ್) ಯ ಪತ್ರಿಕೆ -1 ನ್ನು ಉತ್ತರಗಳೊಂದಿಗೆ ಕನ್ನಡಕ್ಕೆ ಭಾಷಾಂತರ ಮಾಡಿದ್ದು,  ಸ್ಪರ್ಧಾರ್ಥಿಗಳಿಗೆ ಸಹಾಯವಾಗಬಹುದೆಂಬ ನಂಬಿಕೆ ನನ್ನದು.


...ಮುಂದುವರೆದ ಭಾಗ.


67. ಭಾರತ ರಾಷ್ಟ್ರೀಯ ಕಾಂಗ್ರೆಸ್ 1907ರಲ್ಲಿ ವಿಭಜನೆಯಾಗಲು ಮುಖ್ಯ ಕಾರಣ ಏನು?
ಎ. ಲಾರ್ಡ್ ಮಿಂಟೊ ಭಾರತದ ರಾಜಕೀಯದಲ್ಲಿ ಕೋಮುವಾದ ಆರಂಭಿಸಿದ್ದು
ಬಿ. ಮಂದಗಾಮಿಗಳ ವಿಧಾನಗಳ ಬಗ್ಗೆ ತೀವ್ರವಾದಿಗಳಿಗೆ ಅಸಮಾಧಾನ
ಸಿ. ಮುಸ್ಲಿಂ ಲೀಗ್‍ನ ಹುಟ್ಟು
ಡಿ. ಅರವಿಂದೋ ಘೋಷ್ ಅವರು ಐಎನ್‍ಸಿ ಅಧ್ಯಕ್ಷರಾಗಿ ಆಯ್ಕೆಯಾದದ್ದು

ಉ: ಬಿ


68. ಎರಡನೇ ಮಹಾಯುದ್ಧದ ಬಳಿಕ ಸರ್ ಸ್ಟಫರ್ಡ್ ಕ್ರಿಪ್ಲರ್‍ನ ಯೋಜನೆಗಳು ಹೇಗೆ ರೂಪುಗೊಂಡವು?
ಎ. ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು.
ಬಿ. ಸ್ವಾತಂತ್ರ್ಯ ನೀಡುವ ಮುನ್ನ ಭಾರತವನ್ನು ವಿಭಜಿಸಬೇಕು
ಸಿ. ಕಾಮನ್ವೆಲ್ತ್ ಸೇರುವ ಷರತ್ತಿನ ಅನ್ವಯ ಸ್ವಾತಂತ್ರ್ಯ ನೀಡಬೇಕು
ಡಿ. ಅರೆ ಸ್ವತಂತ್ರ್ಯ ದೇಶವಾಗಿ ಭಾರತ ರೂಪುಗೊಳ್ಳಬೇಕು.

ಉ: ಡಿ


69. ಈ ಕೆಳಗಿನ ಜೋಡಿಯಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ?
1. ಬುದ್ಧಗಯಾ: ಭಗೇಲ್‍ಖಂಡ
2. ಖುಜರಾಹೊ: ಬುಂಡೇಲ್‍ಖಂಢ
3. ಶಿರಡಿ: ವಿದರ್ಭ
4. ನಾಶಿಕ್: ಮಾಳವ
5. ತಿರುಪತಿ: ರಾಯಲ್‍ಸೀಮಾ
ಎ. ಕೇವಲ 1, 2 ಮತ್ತು 4
ಬಿ. 2, 3, 4 ಮತ್ತು 5
ಸಿ. 2 ಮತ್ತು 5
ಡಿ. 1,3,4 ಮತ್ತು 5

ಉ: ಸಿ


70. ದೇಶದ ಹಿತಾಸಕ್ತಿಯಿಂದ ಯಾವುದೇ ರಾಜ್ಯ ವಿಷಯಗಳ ಶಾಸನ ರೂಪಿಸಲು ಸಂಸತ್ತಿಗೆ ಅಧಿಕಾರ ನೀಡಲು ಈ ಕೆಳಗಿನ ಯಾವ ನಿರ್ಣಯ ಅಗತ್ಯವಾಗುತ್ತದೆ?
ಎ. ಲೋಕಸಭೆಯಲ್ಲಿ ಸರಳ ಬಹುಮತದಿಂದ ಕೈಗೊಂಡ ನಿರ್ಣಯ
ಬಿ. ಲೋಕಸಭೆಯಲ್ಲಿ ಮೂರನೇ ಎರಡು ಬಹುಮತದಿಂದ ಕೈಗೊಂಡ ನಿರ್ಣಯ
ಸಿ. ರಾಜ್ಯಸಭೆಯಲ್ಲಿ ಸರಳ ಬಹುಮತದಿಂದ ಕೈಗೊಂಡ ನಿರ್ಣಯ
ಡಿ. ರಾಜ್ಯಸಭೆಯಲ್ಲಿ ಮೂರನೇ ಎರಡು ಬಹುಮತದಿಂದ ಕೈಗೊಂಡ ನಿರ್ಣಯ

ಉ: ಡಿ


71. ಇತ್ತೀಚೆಗೆ ಯಾವ ರಾಜ್ಯ ಕೃತಕ ಒಳನಾಡು ಬಂದರನ್ನು ಉದ್ದ ಕಾಲುವೆ ಮೂಲಕ ಸಮುದ್ರಕ್ಕೆ ಸಂಪರ್ಕಿಸಿದೆ?
ಎ. ಆಂಧ್ರಪ್ರದೇಶ
ಬಿ. ಛತ್ತೀಸ್‍ಗಢ
ಸಿ. ಕರ್ನಾಟಕ
ಡಿ. ರಾಜಸ್ಥಾನ

ಉ: ಡಿ


72. ಪ್ಯಾರೀಸ್‍ನಲ್ಲಿ 2015ರಲ್ಲಿ ನಡೆದ ಯುಎನ್‍ಎಫ್‍ಸಿಸಿಸಿ ಸಭೆಯ ಒಪ್ಪಂದಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ?
1. ಈ ಒಪ್ಪಂದಕ್ಕೆ ವಿಶ್ವಸಂಸ್ಥೆಯ ಎಲ್ಲ ಸದಸ್ಯದೇಶಗಳು ಸಹಿ ಮಾಡಿದ್ದು 2017ರಲ್ಲಿ ಇದು ಜಾರಿಗೆ ಬರಲಿದೆ.
2. ಇದು ಹಸಿರುಮನೆ ಪರಿಣಾಮ ನಿಯಂತ್ರಿಸಲು ಮಾಡಿಕೊಂಡ ಒಪ್ಪಂದವಾಗಿದೆ.
3. ಜಾಗತಿಕ ತಾಪಮಾನದಲ್ಲಿ ಅಭಿವೃದ್ಧಿಹೊಂದಿದ ದೇಶಗಳು ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡು 1000 ಶತಕೋಟಿ ಡಾಲರ್ ವಾರ್ಷಿಕ ನೆರವು ನೀಡುತ್ತವೆ.
ಎ. ಕೇವಲ 1 ಮತ್ತು 3
ಬಿ. 2 ಮಾತ್ರ
ಸಿ. 2 ಮತ್ತು 3
ಡಿ. 1,2 ಮತ್ತು 3

ಉ: ಬಿ


73. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
1. ಸುಸ್ಥಿರ ಅಭಿವೃದ್ಧಿ ಗುರಿಯನ್ನು 1972ರಲ್ಲಿ ಮೊಟ್ಟಮೊದಲ ಬಾರಿಗೆ ಕ್ಲಬ್ ಆಫ್ ರೋಮ್ ಮುಂದಿಟ್ಟಿತು.
2. ಸುಸ್ಥಿರ ಅಭಿವೃದ್ಧಿ ಗುರಿಯನ್ನು 2030ರೊಳಗೆ ತಲುಪಬೇಕು.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಬಿ


74. ಇತ್ತೀಚೆಗೆ ಬಿಡುಗಡೆಯಾದ ದ ಮ್ಯಾನ್ ಹೂ ನೋಸ್ ಇನ್‍ಫಿನಿಟಿ ಯಾರಿಗೆ ಸಂಬಂಧಿಸಿದ ಚಿತ್ರ?
ಎ. ಎಸ್,ರಾಮಾನುಜಂ
ಬಿ. ಎಸ್.ಚಂದ್ರಶೇಖರ್
ಸಿ. ಎಸ್.ಎನ್.ಬೋಸ್
ಡಿ. ಸಿ.ವಿ.ರಾಮನ್

ಉ: ಎ


75. ಕೆಳಗಿನ ಸರಿ ಹೇಳಿಕೆ ಗುರುತಿಸಿ.
1. ಪಂಚಾಯ್ತಿ ಸದಸ್ಯರಾಗಲು ಕನಿಷ್ಠ ವಯಸ್ಸು 25
2. ಅವಧಿಪೂರ್ವ ವಿಜರ್ಸನೆಯಾದ ಪಂಚಾಯ್ತಿಯನ್ನು ಪುನರ್ ರೂಪಿಸಿದಾಗ ಉಳಿದ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. 1 ಅಥವಾ 2

ಉ:ಬಿ


76. ಈ ಕೆಳಗಿನ ಯಾವ ಹೇಳಿಕೆ ಸರಿ?
1. ಲೋಕಸಭೆ ಅವಧಿ ಮುಕ್ತಾಯದ ವೇಳೆಗೆ ಅಲ್ಲಿ ಬಾಕಿ ಇದ್ದ ಮಸೂದೆ ಅನೂರ್ಜಿತಗೊಳ್ಳುತ್ತದೆ.
2. ಲೋಕಸಭೆಯಲ್ಲಿ ಆಂಗೀಕಾರವಾದ ಮಸೂದೆ ರಾಜ್ಯಸಭೆಯಲ್ಲಿ ಬಾಕಿ ಇದ್ದರೆ, ಲೋಕಸಭೆ ವಿಸರ್ಜನೆ ಬಳಿಕವೂ ಊರ್ಜಿತದಲ್ಲಿರುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಬಿ


77. ಜಾಗತಿಕ ಹಸಿವು ಸೂಚ್ಯಂಕ ವರದಿ ಸಿದ್ಧಪಡಿಸಲು ಯಾವ ಐಎಫ್‍ಪಿಆರ್‍ಐ ಬಳಸಲಾಗುತ್ತದೆ?
1. ನಿರುದ್ಯೋಗ
2. ಮಕ್ಕಳ ಕುಬ್ಜತೆ
3. ಮಕ್ಕಳ ಸಾವು
ಎ. ಕೇವಲ 1
ಬಿ. 2 ಮತ್ತು 3 ಮಾತ್ರ
ಸಿ. 1, 2 ಮತ್ತು 3
ಡಿ. 1 ಮತ್ತು 2

ಉ: ಸಿ


78. ವಿತ್ತೀಯ ಕೊರತೆ ಕಡಿಮೆ ಮಾಡಲು ಸರ್ಕಾರ ಈ ಕೆಳಗಿನ ಯಾವ ಕ್ರಮ ಕೈಗೊಳ್ಳಬಹುದು?
1. ಸರ್ಕಾರಿ ವೆಚ್ಚ ಕಡಿತ
2. ಹೊಸ ಕಲ್ಯಾಣ ಯೋಜನೆ ಆರಂಭ
3. ಸಬ್ಸಿಡಿಗಳನ್ನು ತಾರ್ಕಿಕಗೊಳಿಸುವುದು
4. ಆಮದು ಸುಂಕ ಕಡಿತ ಮಾಡುವುದು
ಎ. ಕೇವಲ 1
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3
ಡಿ. 1,2 ಮತ್ತು 3

ಉ: ಸಿ


79. ಪೇಮೆಂಟ್ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಸರಿ ಹೇಳಿಕೆ ಯಾವುದು?
1. ಭಾರತೀಯ ಮೂಲದ ಮೊಬೈಲ್ ಕಂಪನಿಗಳು ಪೇಮೆಂಟ್ ಬ್ಯಾಂಕ್ ಪವರ್ತಕರಾಗಬಹುದು.
2. ಪೇಮೆಂಟ್‍ಬ್ಯಾಂಕ್ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಬಿಡುಗಡೆ ಮಾಡಬಹುದು.
3. ಪೇಮೆಂಟ್ ಬ್ಯಾಂಕ್ ಸಾಲ ಚಟುವಟಿಕೆ ಕೈಗೊಳ್ಳುವಂತಿಲ್ಲ
ಎ. ಕೇವಲ 1 ಮತ್ತು 2
ಬಿ. 1 ಮತ್ತು 3 ಮಾತ್ರ
ಸಿ. 2 ಮಾತ್ರ
ಡಿ. 1,2 ಮತ್ತು 3

ಉ: ಬಿ


80. ಲೈ ಫೈಗೆ ಸಂಬಂಧಿಸಿದಂತೆ ಸರಿ ಹೇಳಿಕೆ ಯಾವುದು?
1. ಇದು ಹೈಸ್ಪೀಡ್ ಡಾಟಾ ವರ್ಗಾವಣೆಗೆ ಬೆಳಕನ್ನು ಮಾಧ್ಯಮವಾಗಿ ಬಳಸಿಕೊಳ್ಳುತ್ತದೆ.
2. ಇದು ನಿಸ್ತಂತು ತಂತ್ರಜ್ಞಾಣವಾಗಿದ್ದು, ವೈ ಫೈ ಗಿಂತ ಹೆಚ್ಚು ವೇಗ ಹೊಂದಿದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಸಿ


81. ಇಂಟೆಂಡೆಡ್ ನ್ಯಾಷನಲಿ ಡಿಟರ್ಮೈನ್ಡ್ ಕಾಂಟ್ರಿಬ್ಯೂಷನ್ಸ್ ಎನ್ನುವುದು ಯಾವುದಕ್ಕೆ ಸಂಬಂಧಿಸಿದ್ದು?
ಎ. ಯುದ್ಧಪೀಡಿತ ಮಧ್ಯಪ್ರಾಚ್ಯ ದೇಶಗಳ ನಿರಾಶ್ರಿತರ ಪುನರ್ವಸತಿಗೆ ಯೂರೋಪಿಯನ್ ದೇಶಗಳು ಕೈಗೊಂಡ ಪ್ರತಿಜ್ಞೆ
ಬಿ. ಹವಾಮಾನ ಬದಲಾವಣೆ ತಡೆಗೆ ವಿಶ್ವದ ದೇಶಗಳ ಕೈಗೊಂಡ ಕ್ರಿಯಾಯೋಜನೆ
ಸಿ. ಏಷ್ಯನ್ ಹೂಡಿಕೆ ಬ್ಯಾಂಕಿನ ಸ್ಥಾಪನೆಗೆ ಸದಸ್ಯದೇಶಗಳ ಬಂಡವಾಳ ದೇಣಿಗೆ
ಡಿ. ಸುಸ್ಥಿರ ಅಭಿವೃದ್ಧಿ ಸಾಧನೆಗೆ ವಿಶ್ವದ ದೇಶಗಳು ರೂಪಿಸಿದ ಕ್ರಿಯಾಯೋಜನೆ

ಉ: ಬಿ


82. ಉದಯ್ ಯೋಜನೆಯ ಉದ್ದೇಶ ಏನು?
ಎ. ಸ್ಟಾರ್ಟ್ ಅಪ್ ಪುನರ್‍ಬಳಕೆ ಮೂಲದ ವಿದ್ಯುತ್ ಕಂಪನಿಗಳುಗೆ ಹಣಕಾಸು ಹಾಗೂ ತಾಂತ್ರಿಕ ನೆರವು ನೀಡುವುದು.
ಬಿ. 2018ರೊಳಗೆ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು.
ಸಿ. ಕಲ್ಲಿದ್ದಲು ಆಧರಿತ ವಿದ್ಯುತ್ ಘಟಕಗಳ ಬದಲು £ನೈಸರ್ಗಿಕ ಅನಿಲ ಆಧರಿತ ವಿದ್ಯುತ್ ಘಟಕ ಸ್ಥಾಪನೆ
ಡಿ. ವಿದ್ಯುತ್ ವಿತರಣಾ ಕಂಪನಿಗಳ ಪುನರುಜ್ಜೀವನಕ್ಕೆ ಆರ್ಥಿಕ ನೆರವು ನೀಡುವುದು.

ಉ: ಡಿ


83. ಐಎಫ್‍ಸಿ ಮಸಾಲಾ ಬಾಂಡ್‍ಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ?
1. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯು ಈ ಬಾಂಡ್ ಬಿಡುಗಡೆ ಮಾಡಿದೆ.
2. ಇದು ರೂಪಾಯಿ ಪ್ರಾಬಲ್ಯದ ಬಾಂಡ್‍ಗಳಾಗಿದ್ದು, ಸಾರ್ವಜನಿಕ ಹಾಗೂ ಖಾಸಗಿ ವಲಯದ ಉದ್ದಿಮೆಗಳಿಗೆ ಸಾಲ ಕ್ರೋಢೀಕರಿಸುವ ಸಾಧನ
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಸಿ


84. ವಿಜಯನಗರದ ಅರಸ ಕೃಷ್ಣದೇವನ ತೆರಿಗೆ ಪದ್ಧತಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಭೂಮಿಯ ಮೇಲಿನ ತೆರಿಗೆ ದರ ಭೂಮಿಯ ಗುಣಮಟ್ಟವನ್ನು ಅವಲಂಬಿಸಿರುತ್ತದೆ.
2. ಖಾಸಗಿ ಕಾರ್ಯಾಗಾರಗಳು ಕೈಗಾರಿಕಾ ತೆರಿಗೆ ನೀಡಬೇಕು.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಸಿ


85. ಸುಂಗ ರಾಜಮನೆತನದ ಪ್ರೇಮಕಥೆಯನ್ನು ಒಳಗೊಂಡ ಪ್ರಾಚೀನ ಭಾರತದ ಕೃತಿ ಯಾವುದು?
ಎ. ಸ್ವಪ್ನವಾಸವದತ್ತ
ಬಿ. ಮಾಳವಿಕಾಗ್ನಿಮಿತ್ರ
ಸಿ. ಮೇಘದೂತ
ಡಿ. ರತ್ನಾವತಿ

ಉ: ಬಿ


86. ಅಂಬೆರ್ ಬಾಕ್ಸ್, ಬ್ಲೂ ಬಾಕ್ಸ್, ಹಾಗೂ ಗ್ರೀನ್ ಬಾಕ್ಸ್ ಯಾವುದಕ್ಕೆ ಸಂಬಂಧಿಸಿದ್ದು?
ಎ. ವಿಶ್ವ ವ್ಯಾಪಾರ ಸಂಸ್ಥೆ ವಹಿವಾಟು
ಬಿ. ಸಾಕ್ ವಹಿವಾಟು
ಸಿ. ಯುಎನ್‍ಎಫ್‍ಸಿಸಿಸಿ ವಹಿವಾಟು
ಡಿ. ಭಾರತ– ಯೂರೋಪಿಯನ್ ಯೂನಿಯನ್ ಒಪ್ಪಂದ

ಉ: ಎ


87. ಸರ್ಕಾರದ ಹೂಡಿಕೆ ಬಜೆಟ್‍ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ರಸ್ತೆ, ಕಟ್ಟಡ ಹಾಗೂ ಯಂತ್ರೋಪಕರಣ ಸ್ವಾಧೀನದ ಮೇಲಿನ ಖರ್ಚು ಇತ್ಯಾದಿ.
2. ವಿದೇಶಿ ಸರ್ಕಾರಗಳಿಂದ ಪಡೆದ ಸಾಲ
3. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದ ಸಾಲ ವಿವರ
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. 1, 2 ಮತ್ತು 3

ಉ: ಡಿ


88. ವಿಶ್ವಸಂಸ್ಥೆಯ ಡಿಸರ್ಟಿಫಿಕೇಶನ್ ಒಪ್ಪಂದದ ಮಹತ್ವ ಏನು?
1. ಪರಿಣಾಮಕಾರಿ ಕ್ರಿಯಾಯೋಜನೆಯನ್ನು ಉತ್ತೇಜಿಸುವ ರಾಷ್ಟ್ರೀಯ ಯೋಜನೆ ಮತ್ತು ಬೆಂಬಲಾತ್ಮಕ ಅಂತರರಾಷ್ಟ್ರೀಯ ಪಾಲುದಾರಿಕೆ
2. ಇದು ದಕ್ಷಿಣ ಏಷ್ಯಾ ಹಾಗೂ ಉತ್ತರ ಆಫ್ರಿಕಾ ಪ್ರದೇಶಗಳ ಮೇಲೆ ಗುರಿ ಇಟ್ಟುಕೊಂಡಿದ್ದು, ಈ ಭಾಗಕ್ಕೆ ದೊಡ್ಡ ಮೊತ್ತದ ಹಣಕಾಸು ನೆರವು ನೀಡುವುದು.
3. ಡಿಸರ್ಟಿಫಿಕೇಶನ್ ವಿರುದ್ಧ ಸ್ಥಳೀಯರ ಹೋರಾಟಕ್ಕೆ ಬೆಂಬಲ ನೀಡುವುದು.
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. 1, 2 ಮತ್ತು 3

ಉ: ಸಿ


89. ಇತ್ತೀಚೆಗೆ ಐಎಂಎಫ್‍ನ ಎಸ್‍ಡಿಆರ್ ಬಾಸ್ಕೆಟ್‍ಗೆ ಸೇರಿಸಲು ಯಾವ ಕರೆನ್ಸಿಯನ್ನು ಪರಿಗಣಿಸಲಾಗಿದೆ?
ಎ. ರೂಬೆಲ್
ಬಿ. ರೆಂಡ್
ಸಿ. ಭಾರತೀಯ ರೂಪಾಯಿ
ಡಿ. ರೊಮಿಂಬಿ

ಉ: ಡಿ


90. ಅಂತರರಾಷ್ಟ್ರೀಯ ವಿತ್ತೀಯ ಹಾಗೂ ಹಣಕಾಸು ಸಮಿತಿಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ?
1. ಐಎಂಎಫ್‍ಸಿ ಜಾಗತಿಕ ಆರ್ಥಿಕತೆಯ ವಿಷಯಗಳನ್ನು ಚರ್ಚಿಸುತ್ತದೆ ಮತ್ತು ಈ ಸಂಬಂಧ ಐಎಂಎಫ್‍ಗೆ ಸಲಹೆ ಮಾಡುತ್ತದೆ.
2. ಐಎಂಎಫ್‍ಸಿ ಸಭೆಗಳಲ್ಲಿ ವಿಶ್ವಬ್ಯಾಂಕ್ ವೀಕ್ಷಕನಾಗಿ ಭಾಗವಹಿಸುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಸಿ


91. ರಾಷ್ಟ್ರೀಯ ಗೃಹ ಅಭಿಯಾನ ಯಾವುದಕ್ಕೆ ಸಂಬಂಧಿಸಿದ್ದು?
ಎ. ನಿರ್ವಸತಿಗರಿಗೆ ಪುನರ್ವಸತಿ ಕಲ್ಪಿಸುವುದು.
ಬಿ. ಲೈಂಗಿಕ ಕಾರ್ಯಕರ್ತರನ್ನು ವಿಮುಕ್ತಿಗೊಳಿಸಿ ಪರ್ಯಾಯ ಜೀವನಾಧಾರ ಕಲ್ಪಿಸುವುದು.
ಸಿ. ಜಾಡಮಾಲಿ ಪದ್ಧತಿ ನಿರ್ಮೂಲನೆ
ಡಿ. ಜೀತ ಕಾರ್ಮಿಕರನ್ನು ಬಂಧಮುಕ್ತಿಗೊಳಿಸುವುದು.

ಉ: ಸಿ


92. ಮಧ್ಯಕಾಲೀನ ಭಾರತದ ಸಾಂಸ್ಕøತಿಕ ಇತಿಹಾಸಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ?
1. ತಮಿಳು ಪ್ರದೇಶದ ಸಿದ್ಧರು ಮೂರ್ತಿಪೂಜೆ ಖಂಡಿಸಿದ್ದರು.
2. ಕರ್ನಾಟಕದ ಲಿಂಗಾಯತರು ಪುನರ್ಜನ್ಮ ಸಿದ್ಧಾಂತ ಪ್ರಶ್ನಿಸಿದರು.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಡಿ


93. ಸುದ್ದಿಗಳಲ್ಲಿ ಕಾಣಿಸಿಕೊಳ್ಳುವ ಆಮದು ಸುರಕ್ಷೆ ಎಂಬ ಪದ ಯಾವುದಕ್ಕೆ ಸೂಕ್ತವಾಗಿದೆ?
ಎ. ಜಿಡಿಪಿಮತ್ತು ಆಮದು ನಡುವಿನ ಅನುಪಾತ
ಬಿ. ಒಂದು ವರ್ಷದಲ್ಲಿ ದೇಶದ ಒಟ್ಟು ಆಮದು ಮೌಲ್ಯ
ಸಿ. ಎರಡು ದೇಶಗಳ ನಡುವಿನ ರಫ್ತು ಹಾಗೂ ಆಮದು ಮೌಲ್ಯದ ಅನುಪಾತ
ಡಿ. ದೇಶದ ಅಂತರರಾಷ್ಟ್ರೀಯ ದಾಸ್ತಾನಿನಿಂದ ಎಷ್ಟು ತಿಂಗಳು ಆಮದಿಗೆ ಪಾವತಿ ಮಾಡಬಹುದು ಎಂಬ ಅಂದಾಜು.

ಉ: ಡಿ


94. ಈ ಕೆಳಗಿನ ಜೋಡಿಯಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ?
1. ಕುರ್ದ್: ಬಾಂಗ್ಲಾದೇಶ
2. ಮಧೇಲ್: ನೇಪಾಳ
3. ರೊಹಿಂಗ್ಯಾ: ಮ್ಯಾನ್ಮಾರ್
ಎ. 1 ಮತ್ತು 2 ಮಾತ್ರ
ಬಿ. 2 ಮಾತ್ರ
ಸಿ. 2 ಮತ್ತು 3 ಮಾತ್ರ
ಡಿ. 3 ಮಾತ್ರ

ಉ: ಸಿ


95. ರಾಸಾಯನಿಕ ಅಸ್ತ್ರ ತಡೆ ಸಂಘಟನೆಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿ?
1. ಇದು ನ್ಯಾಟೊ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಜತೆ ಕಾರ್ಯನಿರ್ವಹಿಸುವ ಯೂರೋಪಿಯನ್ ಒಕ್ಕೂಟದ ಒಂದು ಸಂಸ್ಥೆ.
2. ಇದು ಹೊಸ ರಾಸಾಯನಿಕ ಅಸ್ತ್ರಗಳ ತಡೆಯ ಉದ್ದೇಶ ಹೊಂದಿದೆ.
3. ಇದು ದೇಶಗಳಿಗೆ ರಾಸಾಯನಿಕ ಅಸ್ತ್ರಗಳ ಅಪಾಯದಿಂದ ಸುರಕ್ಷೆ ನೀಡುತ್ತದೆ.
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. 1, 2 ಮತ್ತು 3

ಉ: ಬಿ


96. ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆಗೆ ಸಂಬಂಧಿಸಿದಂತೆ ಸರಿ ಹೇಳಿಕೆ ಗುರುತಿಸಿ.
1. ಈ ಯೋಜನೆಯಡಿ ರೈತರು ಯಾವುದೇ ಹಂಗಾಮಿನಲ್ಲಿ ಯಾವುದೇ ಬೆಳೆ ಬೆಳೆದರೂ ಸಮಾನ ವಿಮಾಕಂತು ನೀಡಬೇಕಾಗುತ್ತದೆ.
2. ಈ ಯೋಜನೆಯು ಕೊಯ್ಲೋತ್ತರ ಅಪಾಯಗಳಿಗೂ ಸುರಕ್ಷೆ ಒದಗಿಸುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಬಿ


97. ಗ್ರೇಟ್ ಇಂಡಿಯನ್ ಹಾರ್ನ್‍ಬಿಲ್ ಭಾರತದ ಯಾವ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ?
ಎ. ಉತ್ತರ ಭಾರತದ ಸಿಂಧ್ ಪ್ರಾಂತ್ಯ
ಬಿ. ಹಿಮಾಲಯದ ಎತ್ತರ ಪ್ರದೇಶ
ಸಿ. ಪಶ್ಚಿಮ ಗುಜರಾತ್
ಡಿ. ಪಶ್ಚಿಮ ಘಟ್ಟ

ಉ: ಡಿ


98. ರಾಷ್ಟ್ರೀಯ ಗಂಗಾ ನದಿ ಪಾತ್ರ ಪ್ರಾಧಿಕಾರದ ಪ್ರಮುಖ ಲಕ್ಷಣ ಯಾವುದು?
1. ನದಿಪಾತ್ರವು ಯೋಜನೆ ಹಾಗೂ ನಿರ್ವಹಣೆಯ ಮೂಲ ಘಟಕ
2. ಇದು ರಾಷ್ಟ್ರಮಟ್ಟದಲ್ಲಿ ನದಿ ಸಂರಕ್ಷಣೆ ಪ್ರಯತ್ನವನ್ನು ಹೆಚ್ಚಿಸುತ್ತದೆ.
3. ಗಂಗಾನದಿ ಹರಿಯುವ ಒಂದು ರಾಜ್ಯದ ಮುಖ್ಯಮಂತ್ರಿ ಇದರ ಅಧ್ಯಕ್ಷರಾಗುತ್ತಾರೆ.
ಎ. 1 ಮತ್ತು 2 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. 1, 2 ಮತ್ತು 3

ಉ: ಎ


99. ಕೃಷಿಕ್ಷೇತ್ರದಲ್ಲಿ ಬೇವು ಲೇಪಿತ ಯೂರಿಯಾವನ್ನು ಭಾರತ ಸರ್ಕಾರ ಏಕೆ ಉತ್ತೇಜಿಸುತ್ತದೆ?
ಎ. ಬೇವಿನ ಎಣ್ಣೆ ಮಣ್ಣಿನಲ್ಲಿ ಬಿಡುಗಡೆಯಾಗುವುದರಿಂದ ಸಾರಜನಕ ಸರಿಯಾಗಿ ಮಣ್ಣಿನ ಕಣಗಳಿಗೆ ಸೇರಿಕೊಳ್ಳುತ್ತದೆ.
ಬಿ. ಬೇವಿನೆಣ್ಣೆ ಯೂರಿಯಾ ಮಣ್ಣಿನಲ್ಲಿ ಕರಗುವುದನ್ನು ನಿಧಾನಗೊಳಿಸುತ್ತದೆ.
ಸಿ. ನೈಟ್ರಸ್ ಆಕ್ಸೈಡ್ ಮುಕ್ತ ಹೊಲಗಳಿಂದ ಬಿಡುಗಡೆಯಾಗುವುದಿಲ್ಲ
ಡಿ. ಇದು ಕಳೆನಾಶಕ ಹಾಗೂ ಗೊಬ್ಬರವಾಗುತ್ತದೆ.

ಉ: ಡಿ


100. ಈ ಕೆಳಗಿನ ಸರಿ ಹೇಳಿಕೆಗಳನ್ನು ಗುರುತಿಸಿ.
1. ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನು ಆಯಾ ರಾಜ್ಯದ ರಾಜ್ಯಪಾಲರು ನೇಮಿಸುತ್ತಾರೆ.
2. ರಾಜ್ಯದ ಮುಖ್ಯ ಕಾರ್ಯದರ್ಶಿಯು ಸೀಮಿತ ಅಧಿಕಾರ ಅವಧಿಯ ಹೊಂದಿರುತ್ತಾರೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಡಿ

---- ಸಶೇಷ---

(courtesy :ಕನ್ನಡದಲ್ಲಿ ಐಎಎಸ್ & ಕೆಎಎಸ್ ಮುಖ್ಯ ಪರೀಕ್ಷೆ)

No comments:

Post a Comment