"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 3 March 2017

☀.ಐಎಎಸ್ ಪ್ರಶ್ನೆಪತ್ರಿಕೆ 2016 (ಕನ್ನಡ ಭಾಷಾಂತರ).. (33 ರಿಂದ 66 ಪ್ರಶ್ನೆಗಳು) (IAS GENERAL STUDIES PAPER I 2016)

☀.ಐಎಎಸ್ ಪ್ರಶ್ನೆಪತ್ರಿಕೆ 2016 (ಕನ್ನಡ ಭಾಷಾಂತರ).. (33 ರಿಂದ 66 ಪ್ರಶ್ನೆಗಳು)
(IAS GENERAL STUDIES PAPER I 2016)
•─━━━━━═══════════━━━━━─••─━━━━━═══════════━━━━━─•

★ ಐಎಎಸ್ ಪ್ರಶ್ನೆಪತ್ರಿಕೆ 2016
(IAS Question Paper I 2016))


2016 ನೇ ಸಾಲಿನ ಯು.ಪಿ.ಎಸ್.ಸಿ. ನಡೆಸಿದ ಸಿವಿಲ್ ಸರ್ವಿಸ್ ಪರೀಕ್ಷೆ (ಐಎಎಸ್) ಯ ಪತ್ರಿಕೆ -1 ನ್ನು ಉತ್ತರಗಳೊಂದಿಗೆ ಕನ್ನಡಕ್ಕೆ ಭಾಷಾಂತರ ಮಾಡಿದ್ದು,  ಸ್ಪರ್ಧಾರ್ಥಿಗಳಿಗೆ ಸಹಾಯವಾಗಬಹುದೆಂಬ ನಂಬಿಕೆ ನನ್ನದು.


...ಮುಂದುವರೆದ ಭಾಗ.


34. ವೈರಸ್ ಯಾವುದಕ್ಕೆ ಸೋಂಕು ಉಂಟುಮಾಡುತ್ತದೆ?
1. ಬ್ಯಾಕ್ಟೀರಿಯಾ
2. ಶಿಲೀಂದ್ರ
3. ಸಸ್ಯಗಳು
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 1 ಮತ್ತು 3
ಡಿ. 1, 2, 3

ಉ: ಡಿ


35. ಮೂಲ ಸವಕಳಿ ಮತ್ತು ಲಾಭ ವರ್ಗಾವಣೆ ಈಕೆಳಗಿನ ಯಾವುದಕ್ಕೆ ಸಂಬಂಧಿಸಿದ್ದು?
ಎ. ಸಂಪನ್ಮೂಲ ಭರಿತ ಆದರೆ ಹಿಂದುಳಿದ ಪ್ರದೇಶಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಗಣಿಗಾರಿಕೆ
ಬಿ. ಬಹುರಾಷ್ಟ್ರೀಯ ಕಂಪನಿಗಳ ತೆರಿಗೆಕಳ್ಳತನವನ್ನು ಕಡಿಮೆ ಮಾಡುವುದು.
ಸಿ. ಬಹುರಾಷ್ಟ್ರೀಯ ಕಂಪನಿಗಳು ವಂಶವಾಹಿ ಸಂಪನ್ಮೂಲಗಳನ್ನು ಶೋಷಿಸುವುದು.
ಡಿ. ಯೋಜನೆ ರೂಪಿಸುವ ಹಾಗೂ ಅನುಷ್ಠಾನದಲ್ಲಿ ಪರಿಸರ ವೆಚ್ಚವನ್ನು ಪರಿಗಣಿಸದಿರುವುದು.

ಉ: ಬಿ


36. ಭಾರತದ ಮೊಟ್ಟಮೊದಲ ಹೂಡಿಕೆ ಹಾಗೂ ಉತ್ಫಾಧನಾ ವಲಯ ಎಲ್ಲಿ ಸ್ಥಾಪನೆಯಾಗಲಿದೆ?
ಎ. ಆಂಧ್ರಪ್ರದೇಶ
ಬಿ. ಗುಜರಾತ್
ಸಿ. ಮಹಾರಾಷ್ಟ್ರ
ಡಿ. ಉತ್ತರಪ್ರದೇಶ

ಉ: ಡಿ


37. ಭಾರತದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನಗಳ ಉದ್ದೇಶವೇನು?
1. ಖನಿಜಭರಿತ ಜಿಲ್ಲೆಗಳಲ್ಲಿ ಖನಿಜ ಹೊರತೆಗೆಯುವುದನ್ನು ಉತ್ತೇಜಿಸುವುದು.
2. ಗಣಿ ಕಾರ್ಯಾಚರಣೆಯಿಂದ ತೊಂದರೆಗೀಡಾದ ಜನರ ಹಿತಾಸಕ್ತಿಯನ್ನು ಕಾಪಾಡುವುದು.
3. ಖನಿಜ ಹೊರತೆಗೆಯಲು ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡುವ ಅಧಿಕಾರ ನೀಡುವುದು.
ಎ. ಕೇವಲ 1 ಮತ್ತು 2
ಬಿ. 2 ಮಾತ್ರ
ಸಿ. 1 ಮತ್ತು 3
ಡಿ. 1, 2, 3

ಉ: ಬಿ


38. ಕೇಂದ್ರ ಸರ್ಕಾರದ ಸ್ವಯಂ ಯೋಜನೆಯ ಉದ್ದೇಶವೇನು?
ಎ. ಗ್ರಾಮೀಣ ಪ್ರದೇಶಗಳಲ್ಲಿ ಸ್ವಸಹಾಯ ಸಂಘಗಳಿಗೆ ಉತ್ತೇಜನ ನೀಡುವುದು.
ಬಿ. ಹೊಸ ಸ್ಟಾರ್ಟ್‍ಅಪ್ ಉದ್ಯಮಿಗಳಿಗೆ ಹಣಕಾಸು ನೆರವು ನೀಡುವುದು
ಸಿ. ಹೆಣ್ಣುಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ನೆರವಾಗುವುದು.
ಡಿ. ನಾಗರಿಕರಿಗೆ ಕೈಗೆಟುಕುವ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡುವುದು.

ಉ: ಡಿ


39. ಮಾಂಟೆಗ್ ಚೆಮ್ಸ್‍ಫೋರ್ಡ್ ಪ್ರಸ್ತಾವನೆಗಳು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿವೆ?
ಎ. ಸಾಮಾಜಿಕ ಸುಧಾರಣೆ
ಬಿ. ಶೈಕ್ಷಣಿಕ ಸುಧಾರಣೆ
ಸಿ. ಪೊಲೀಸ್ ಆಡಳಿತದಲ್ಲಿ ಸುಧಾರಣೆ
ಡಿ. ಸಂವಿಧಾನ ಸುಧಾರಣೆ

ಉ: ಡಿ


40. ಎರಡು ಐತಿಹಾಸಿಕ ಸ್ಥಳಗಳಾದ ಅಜಂತ ಮತ್ತು ಮಹಾಬಲಿಪುರಕ್ಕೆ ಇರುವ ಸಾಮ್ಯತೆಗಳು ಏನು?
1. ಎರಡೂ ಒಂದೇ ಅವಧಿಯಲ್ಲಿ ನಿರ್ಮಾಣವಾದವು.
2. ಎರಡೂ ಸಮಾನ ಧಾರ್ಮಿಕ ಪಂಥಗಳಿಗೆ ಸೇರಿದವು
3. ಎರಡೂ ಶಿಲಾಕೆತ್ತನೆಯ ಸ್ಮಾರಕಗಳು
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 1 ಮತ್ತು 3
ಡಿ. ಯಾವುದೂ ಅಲ್ಲ

ಉ: ಬಿ


41. ಬಿಟ್‍ಕಾಯಿನ್‍ಗೆ ಸಂಬಂಧಿಸಿದಂತೆ ಯಾವ ಹೇಳಿಕೆಗಳು ಸರಿ?
1. ಬಿಟ್‍ಕಾಯಿನ್‍ಗಳನ್ನು ದೇಶಗಳ ಕೇಂದ್ರೀಯ ಬ್ಯಾಂಕ್‍ಗಳು ನಿಗಾ ವಹಿಸುತ್ತವೆ.
2. ಬಿಟ್‍ಕಾಯಿನ್ ವಿಳಾಸ ಹೊಂದಿರುವ ಯಾರು ಬೇಕಾದರೂ ಬಿಟ್‍ಕಾಯಿನ್‍ಗಳು ಕಳುಹಿಸಲು ಹಾಗೂ ಪಡೆಯಲು ಅವಕಾಶವಿದೆ.
3. ಮತ್ತೊಬ್ಬರ ಗುರುತು ಇಲ್ಲದೇ ಆನ್‍ಲೈನ್ ಪಾವತಿ ಮಾಡಲು ಅವಕಾಶವಿದೆ.
ಎ. ಕೇವಲ 1 ಮತ್ತು 2
ಬಿ. 2 ಮತ್ತು 3 ಮಾತ್ರ
ಸಿ. 3 ಮಾತ್ರ
ಡಿ. 1, 2, 3

ಉ: ಬಿ


42. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
1. ಹೊಸ ಅಭಿವೃದ್ಧಿ ಬ್ಯಾಂಕನ್ನು ಎಪಿಇಸಿ ಆರಂಭಿಸಿದೆ.
2. ನ್ಯೂ ಡೆವಲಪ್‍ಮೆಂಟ್ ಬ್ಯಾಂಕ್‍ನ ಕೇಂದ್ರ ಕಚೇರಿ ಶಾಂಘೈಯಲ್ಲಿದೆ.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಬಿ


43. ಗಾಡ್ಗೀಳ್ ಸಮಿತಿ ವರದಿ ಹಾಗೂ ಕಸ್ತೂರಿರಂಗನ್ ಸಮಿತಿ ವರದಿ ಯಾವುದಕ್ಕೆ ಸಂಬಂಧಿಸಿದ್ದು?
ಎ. ಸಂವಿಧಾನ ಸುಧಾರಣೆ
ಬಿ. ಗಂಗಾಕ್ರಿಯಾಯೋಜನೆ
ಸಿ. ನದಿಗಳ ಜೋಡಣೆ
ಡಿ. ಪಶ್ಚಿಮಘಟ್ಟಗಳ ಸಂರಕ್ಷಣೆ

ಉ: ಡಿ


44. ಕೇಶವ್ ಚಂದ್ರಸೇನ್ ಈ ಕೆಳಗಿನ ಯಾವುದರ ಜತೆ ಸಂಬಂಧ ಹೊಂದಿದ್ದಾರೆ?
1. ಕಲ್ಕತ್ತ ಏಕೀಕರಣ ಸಮಿತಿ
2. ಗುಡಿಸಲು ಹಂಚಿಕೆ
3. ಭಾರತ ಸುಧಾರಣಾ ಸಂಘ
ಎ. ಕೇವಲ 1 ಮತ್ತು 3
ಬಿ. 2 ಮತ್ತು 3 ಮಾತ್ರ
ಸಿ. 3 ಮಾತ್ರ
ಡಿ. 1, 2, 3

ಉ: ಬಿ


45. ಗಲ್ಫ್ ಸಹಕಾರ ಮಂಡಳಿಯ ಸದಸ್ಯತ್ವ ಹೊಂದದ ದೇಶ ಯಾವುದು?
ಎ. ಇರಾನ್
ಬಿ. ಸೌದಿ ಅರೇಬಿಯಾ
ಸಿ. ಓಮಾನ್
ಡಿ. ಕುವೈತ್

ಉ: ಬಿ


46. ಸೊವರಿನ್ ಚಿನ್ನ ಬಾಂಡ್ ಯೋಜನೆ ಹಾಗೂ ಚಿನ್ನ ನಗದೀಕರಣ ಯೋಜನೆಯ ಉದ್ದೇಶವೇನು?
1. ಭಾರತದ ಕುಟುಂಬಗಳಲ್ಲಿ ಜಡವಾಗಿರುವ ಚಿನ್ನವನ್ನು ಆರ್ಥಿಕತೆಗೆ ತರುವುದು.
2. ಚಿನ್ನ ಹಾಗೂ ಆಭರಣ ವಲಯದಲ್ಲಿ ವಿದೇಶಿ ನೇರ ಹೂಡಿಕೆ ಉತ್ತೇಜಿಸುವುದು
3. ಚಿನ್ನ ಆಮದಿನ ಮೇಲಿನ ಭಾರತದ ಅವಲಂಬನೆ ಕಡಿಮೆ ಮಾಡುವುದು.
ಎ. ಕೇವಲ 1
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3
ಡಿ. 1, 2, 3

ಉ: ಸಿ


47. ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದ್ದು?
ಎ. ಆಫ್ರಿಕನ್ ಯೂನಿಯನ್
ಬಿ. ಬ್ರೆಜಿಲ್
ಸಿ. ಯೂರೋಪಿನ್ ಯೂನಿಯನ್
ಡಿ. ಚೀನಾ

ಉ: ಡಿ


48. ಪ್ರಧಾನಮಂತ್ರಿ ಮುದ್ರಾ ಯೋಜನೆಯು
ಎ. ಸಣ್ಣ ಉದ್ಯಮಶೀಲರನ್ನು ಔಪಚಾರಿಕ ಹಣಕಾಸು ವ್ಯವಸ್ಥೆಯಡಿ ತರುವುದು
ಬಿ. ಬಡರೈತರಿಗೆ ನಿರ್ದಿಷ್ಟ ಬೆಳೆ ಬೆಳೆಯಲು ಸಾಲ ನೀಡುವುದು
ಸಿ. ವೃದ್ಧ ಮತ್ತು ನಿರ್ಗತಿಕರಿಗೆ ಪಿಂಚಣಿ ನೀಡುವುದು
ಡಿ. ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗಾಗಿ ಸ್ವಯಂಸೇವಾ ಸಂಸ್ಥೆಗಳಿಗೆ ನೆರವಾಗುವುದು.

ಉ: ಎ


49. ಈ ಕೆಳಗಿನ ಯಾವ ಪ್ರದೇಶದಲ್ಲಿ ಶೇಲ್ ಗ್ಯಾಸ್ ಕಂಡುಬರುತ್ತದೆ?
ಎ. ಕ್ಯಾಂಬೆ ನದಿಪಾತ್ರ
ಬಿ. ಕಾವೇರಿ ನದಿಪಾತ್ರ
ಸಿ. ಕೃಷ್ಣಾ ಮತ್ತು ಗೋದಾವರಿ ನದಿಪಾತ್ರ
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 2 ಮತ್ತು 3
ಡಿ. 1, 2, 3

ಉ: ಡಿ


50. ಜಾಗತಿಕ ಹಣಕಾಸು ಸ್ಥಿರತೆ ವರದಿಯನ್ನು ಯಾವುದು ಸಿದ್ಧಪಡಿಸುತ್ತದೆ?
ಎ. ಯೂರೋಪಿಯನ್ ಕೇಂದ್ರೀಯ ಬ್ಯಾಂಕ್
ಬಿ. ಅಂತರರಾಷ್ಟ್ರೀಯ ಹಣಕಾಸು ನಿಧಿ
ಸಿ. ಅಂತರರಾಷ್ಟ್ರೀಯ ಪುನರ್ ನಿರ್ಮಾಣ ಮತ್ತು ಅಭಿವೃದ್ಧಿ ಬ್ಯಾಂಕ್
ಡಿ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ

ಉ: ಬಿ


51. ಅಟಲ್ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಇದು ಕನಿಷ್ಠ ಖಾತ್ರಿಯ ಪಿಂಚಣಿ ಯೋಜನೆಯಾಗಿದ್ದು, ಅಸಂಘಟಿತ ಕಾರ್ಮಿಕರಿಗೆ ಇರುವ ಯೋಜನೆ.
2. ಕುಟುಂಬದ ಒಬ್ಬ ಸದಸ್ಯ ಮಾತ್ರ ಇದರ ಸದಸ್ಯತ್ವ ಪಡೆಯಬಹುದು.
3. ವಿಮಾಸೌಲಭ್ಯ ಪಡೆದ ವ್ಯಕ್ತಿ ಮೃತಪಟ್ಟ ಬಳಿಕವೂ ಗಂಡ/ ಹೆಂಡತಿಗೆ ಅದೇ ಮೊತ್ತದ ಪಿಂಚಣಿ ಬರುತ್ತದೆ.
ಎ. ಕೇವಲ 1
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3
ಡಿ. 1,2,3

ಉ: ಸಿ


52. ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಯಾವ ದೇಶಗಳ ಗುಂಪಿಗೆ ಸಂಬಂಧಿಸಿದ್ದು?
ಎ. ಜಿ-20
ಬಿ. ಏಷಿಯನ್
ಸಿ. ಎಸ್‍ಸಿಓ
ಡಿ. ಸಾರ್ಕ್

ಉ: ಬಿ


53. ಬ್ಯೂರೊ ಆಫ್ ಎನರ್ಜಿ ಎಫೀಶಿಯೆನ್ಸಿ ಸ್ಟಾರ್ ಲೇಬಲ್ ಯಾವುದರ ಮೇಲೆ ಕಂಡುಬರುತ್ತದೆ?
1. ಸೀಲಿಂಗ್ ಫ್ಯಾನ್
2. ಇಲೆಕ್ಟ್ರಿಕ್ ಗೀಸರ್
3. ಟ್ಯೂಬ್ ಆಕಾರದ ಫ್ಲೋರೊಸೆಂಟ್ ದೀಪ
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 2 ಮತ್ತು 3
ಡಿ. 1, 2, 3

ಉ: ಡಿ


54. ಭಾರತವು ಸಾಂಪ್ರದಾಯಿಕ ಥರ್ಮೋನ್ಯೂಕ್ಲಿಯರ್ ಎಕ್ಸ್‍ಪರಿಮೆಂಟಲ್ ರಿಯಾಕ್ಟರ್‍ನ ಪ್ರಮುಖ ಸದಸ್ಯದೇಶವಾಗಿದೆ. ಈ ಪ್ರಯೋಗ ಯಶಸ್ವಿಯಾದರೆ ಆಗುವ ಲಾಭ ಏನು?
ಎ. ನಾವು ಯುರೇನಿಯಂ ಅನ್ನು ಸಾಂಪ್ರದಾಯಕ ಉಷ್ಣವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಬಳಸಬಹುದು.
ಬಿ. ಇದು ಉಪಗ್ರಹ ಪಥದರ್ಶಕದಲ್ಲಿ ಜಾಗತಿಕ ಪಾತ್ರವನ್ನು ನಿರ್ವಹಿಸಬಹುದು.
ಸಿ. ವಿದ್ಯುತ್ ಉತ್ಫಾದನೆಗೆ ರಿಯಾಕ್ಟರ್‍ಗಳ ಕ್ಷಮತೆಯನ್ನು ಗಣನೀಯವಾಗಿ ಹೆಚ್ಚಿಸಬಹುದು.
ಡಿ. ಇದು ಫ್ಯೂಷನ್ ರಿಯಾಕ್ಟರ್‍ಗಳನ್ನು ವಿದ್ಯುತ್ ಉತ್ಪಾದನೆಗೆ ಬಳಸಬಹುದು.

ಉ: ಡಿ


55. ಭಾರತದ ಇತಿಹಾಸದ ಹಿನ್ನೆಲೆಯಲ್ಲಿ ಈ ಕೆಳಗಿನ ಯಾವುದು ಸರಿಯಾಗಿ ಹೊಂದಾಣಿಕೆಯಾಗುತ್ತದೆ?
1. ಎರಿಪರ್ತಿ: ಗ್ರಾಮೀಣ ಬ್ಯಾಂಕ್ ಮುಖ್ಯ ಕಂದಾಯದ ಹೊರತಾಗಿ ಪಡೆಯುವ ಭೂಕಂದಾಯ.
2. ತನಿಯೂರ: ಬ್ರಾಹ್ಮಣ ಅಥವಾ ಬ್ರಾಹ್ಮಣ ಸಮುದಾಯಕ್ಕೆ ದಾನ ಮಾಡಲ್ಪಟ್ಟ ಗ್ರಾಮ
3. ಘತಿಕಾ: ದೇವಾಲಯಕ್ಕೆ ಸಂಬಂಧಿಸಿದ ಕಾಲೇಜುಗಳು
ಎ. 1 ಮತ್ತು 2
ಬಿ. 3 ಮಾತ್ರ
ಸಿ. 2 ಮತ್ತು 3
ಡಿ. 1 ಮತ್ತು 3

ಉ: ಡಿ


56. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
1. ಅಂತರರಾಷ್ಟ್ರೀಯ ಸೌರ ಮೈತ್ರಿಕೂಟವನ್ನು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ 2015ರಲ್ಲಿ ಆರಂಭಿಸಲಾಯಿತು.
2. ಈ ಮೈತ್ರಿಕೂಟವನ್ನು ವಿಶ್ವಸಂಸ್ಥೆಯ ಎಲ್ಲ ಸದಸ್ಯದೇಶಗಳು ಆರಂಭಿಸಿವೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಎ


57. ಯುರೋಪಿಯನ್ ಸ್ಟೆಬಿಲಿಟಿ ಮೆಕ್ಯಾನಿಸಂ ಎಂದರೇನು?
ಎ. ಯೂರೋಪಿಯನ್ ಒಕ್ಕೂಟದಿಂದ ಆರಂಭಿಸಲ್ಪಟ್ಟ ಸಂಸ್ಥೆಯಾಗಿದ್ದು, ಲಕ್ಷಾಂತರ ಮಂದಿಯ ವಲಸೆಯನ್ನು ನಿರ್ವಹಿಸುವುದು ಇದರ ಹೊಣೆ.
ಬಿ. ಯೂರೋಪಿಯನ್ ದೇಶಗಳ ಹಣಕಾಸು ಸುಸ್ಥಿರತೆ ಕಾಪಾಡಲು ಯೂರೋಪಿಯನ್ ಒಕ್ಕೂಟದಿಂದ ಆರಂಭಿಸಲ್ಪಟ್ಟ ಸಂಸ್ಥೆ.
ಸಿ. ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ವ್ಯಾಪಾರ ಒಪ್ಪಂದ ನಿರ್ವಹಿಸಲು ಯೂರೋಪಿಯನ್ ಒಕ್ಕೂಟದಿಂದ ಆರಂಭಿಸಲ್ಪಟ್ಟ ಸಂಸ್ಥೆ.
ಡಿ. ಸದಸ್ಯದೇಶಗಳ ಸಂಘರ್ಷ ನಿರ್ವಹಿಸಲು ಯೂರೋಪಿಯನ್ ಒಕ್ಕೂಟದಿಂದ ಆರಂಭಿಸಲ್ಪಟ್ಟ ಸಂಸ್ಥೆ.

ಉ: ಬಿ


58. ತುಂತುರು ನೀರಾವರಿಯ ಪ್ರಯೋಜನಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ಸರಿ?
1. ಕಳೆಗಳು ಕಡಿಮೆಯಾಗುತ್ತವೆ.
2. ಮಣ್ಣು ಜವಳಾಗುವುದು ಕಡಿಮೆಯಾಗುತ್ತದೆ.
3. ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ.
ಎ. 1 ಮತ್ತು 2 ಮಾತ್ರ
ಬಿ. 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. ಯಾವುದೂ ಅಲ್ಲ

ಉ: ಸಿ


59. ರೆಜಿಸ್ಟರಿಂಗ್ ಡಿಜಿಟಲ್ ಲಾಕರ್ಸ್ ಎನ್ನುವುದಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1 ಡಿಜಿಟಲ್ ಇಂಡಿಯಾ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ ಡಿಜಿಟಲ್ ಲಾಕರ್ ವ್ಯವಸ್ಥೆ
2. ಯಾವುದೇ ಪ್ರದೇಶದಿಂದಲಾದರೂ ಇದರ ಮೂಲಕ ನೀವು ಇ– ದಾಖಲೆಗಳನ್ನು ನಿರ್ವಹಿಸಬಹುದು.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ.

ಉ: ಸಿ


60. ಇತ್ತೀಚೆಗೆ ಈ ಕೆಳಗಿನ ಯಾವ ನದಿಗಳನ್ನು ಜೋಡಿಸಲಾಗಿದೆ?
ಎ. ಕಾವೇರಿ ಹಾಗೂ ತುಂಗಭದ್ರಾ
ಬಿ. ಗೋದಾವರಿ ಹಾಗೂ ಕೃಷ್ಣಾ
ಸಿ. ಮಹಾನದಿ ಹಾಗೂ ಸೋನೆ
ಡಿ. ನರ್ಮದಾ ಮತ್ತು ತಪತಿ

ಉ: ಬಿ


61. ದೇಶದ ನಗರಗಳಲ್ಲಿ ವಾಯು ಗುಣಮಟ್ಟವನ್ನು ಅಳೆಯಲು ಯಾವ ಅನಿಲವನ್ನು ಪರಿಗಣಿಸಲಾಗುತ್ತದೆ?1. ಇಂಗಾಲದ ಡೈ ಆಕ್ಸೈಡ್
2. ಇಂಗಾಲದ ಮೋನೋಕ್ಸೈಡ್
3. ಸಾರಜನಕದ ಡೈ ಆಕ್ಸೈಡ್
4. ಗಂಧಕದ ಡೈ ಆಕ್ಸೈಡ್
5. ಮಿಥೇನ್
ಎ. 1, 2 ಮತ್ತು 3
ಬಿ. 2, 3 ಮತ್ತು 4
ಸಿ. 1, 4 ಮತ್ತು 5
ಡಿ. ಮೇಲ್ಕಂಡ ಎಲ್ಲವೂ

ಉ: ಬಿ


62. ಆಸ್ಟ್ರೋ ನಟ್‍ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಅಮೆರಿಕ ಹಾಗೂ ರಷ್ಯಾ ಹೊರತುಪಡಿಸಿದರೆ ಭಾರತ ಮಾತ್ರ ಅಂಥ ವೀಕ್ಷಣಾ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ.
2. ಇದು 2000 ಕೆ.ಜಿ. ತೂಕದ ಉಪಗ್ರಹವಾಗಿದದ್ದು, ಭೂಮಿಯ ಮೇಲ್ಮೈನಿಂದ 1050 ಕಿಲೋಮೀಟರ್ ಎತ್ತರದಲ್ಲಿ ಕಕ್ಷೆಯಲ್ಲಿ ಅಳವಡಿಸಲಾಗಿದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2′
ಡಿ. ಯಾವುದೂ ಅಲ್ಲ

ಉ: ಎ


63. ಮಧ್ಯಕಾಲೀನ ಭಾರತದ ಆರ್ಥಿಕ ಇತಿಹಾಸಕ್ಕೆ ಸಂಬಂಧಿಸಿದಂತೆ ಅರಘಟ್ಟ ಎಂದರೇನು?
ಎ. ಜೀತ ಕಾರ್ಮಿಕ
ಬಿ. ಸೇನಾ ಅಧಿಕಾರಿಗಳಿಗೆ ಮಂಜೂರಾದ ಭೂಮಿ
ಸಿ. ನೀರಾವರಿಗೆ ಬಳಸುತ್ತಿದ್ದ ಚಕ್ರ
ಡಿ. ಕೃಷಿಗೆ ಪರಿವರ್ತನೆಯಾದ ಬಂಬರು ಭೂಮಿ

ಉ: ಸಿ


64. ಭಾರತದ ಸಾಂಸ್ಕøತಿಕ ಇತಿಹಾಸಕ್ಕೆ ಸಂಬಂಧಿಸಿದ, ರಾಜಮನೆತನದ ಇತಿಹಾಸಕಾರರು, ಪುರಾಣಕಥೆ ವೃತ್ತಿಯವರು ಯಾರು?
ಎ. ಶ್ರಾಮಣ
ಬಿ. ಪರಿವ್ರಾಜಕ
ಸಿ. ಅಗ್ರಹಾರಿಕ
ಡಿ. ಮಾಗಧ

ಉ: ಡಿ


65, ಇತ್ತೀಚೆಗೆ ಯಾವ ರಾಜ್ಯ ನಿರ್ದಿಷ್ಟ ಚಿಟ್ಟೆಯನ್ನು ರಾಜ್ಯದ ಚಿಟ್ಟೆ ಎಂದು ಘೋಷಿಸಿದೆ?
ಎ. ಅರುಣಾಚಲಪ್ರದೇಶ
ಬಿ. ಹಿಮಾಚಲ ಪ್ರದೇಶ
ಸಿ. ಕರ್ನಾಟಕ
ಡಿ. ಮಹಾರಾಷ್ಟ್ರ

ಉ: ಡಿ


66. ಇಸ್ರೋ ಉಡಾಯಿಸಿದ ಮಂಗಳಯಾನಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ?
1. ಇದನ್ನು ಮಾರ್ಸ್ ಆರ್ಬಿಟರ್ ಮಿಷಿನ್ ಎಂದೂ ಕರೆಯಲಾಗುತ್ತದೆ.
2. ಈ ಮೂಲಕ ಅಮೆರಿಕ ನಂತರ ಭಾರತ ಮಂಗಳಯಾನ ಕೈಗೊಂಡ ಎರಡನೇ ದೇಶ.
3. ಮೊದಲ ಪ್ರಯತ್ನದಲ್ಲೇ ಮಂಗಳಯಾನ ಯಶಸ್ವಿಯಾದ ಮೊದಲ ದೇಶ ಭಾರತ
ಎ. ಕೇವಲ 1
ಬಿ. 2 ಮತ್ತು 3
ಸಿ. 1 ಮತ್ತು 3
ಡಿ. 1,2 ಮತ್ತು 3

ಉ: ಸಿ

...ಮುಂದುವರೆಯುವುದು.
(courtesy :ಕನ್ನಡದಲ್ಲಿ ಐಎಎಸ್ & ಕೆಎಎಸ್ ಮುಖ್ಯ ಪರೀಕ್ಷೆ)

No comments:

Post a Comment