"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 13 August 2016

●.ಪಿಡಿಓ (PDO) ಅಧ್ಯಯನ ಸಾಮಗ್ರಿ X: ಪಂಚಾಯತ್ ರಾಜ್, 73 ನೇ ಸಂವಿಧಾನದ ತಿದ್ದುಪಡಿ (PDO Study Materials : Panchayath Raj Act- 73ed Constitutional Amendment)

●.ಪಿಡಿಓ (PDO) ಅಧ್ಯಯನ ಸಾಮಗ್ರಿ X: ಪಂಚಾಯತ್ ರಾಜ್, 73 ನೇ ಸಂವಿಧಾನದ ತಿದ್ದುಪಡಿ
(PDO Study Materials : Panchayath Raj Act- 73ed Constitutional Amendment)
•─━━━━━═══════════━━━━━─••─━━━━━═══════════━━━━━─•

★ ಪಂಚಾಯತ್ ರಾಜ್, 73 ನೇ ಸಂವಿಧಾನದ ತಿದ್ದುಪಡಿ
(Panchayath Raj Act- 73ed Constitutional Amendment)

★ಪಿಡಿಓ (PDO) ಅಧ್ಯಯನ ಸಾಮಗ್ರಿ
(PDO Study Materials)


61. ಸಾಮಾಜಿಕವಾಗಿ , ಆರ್ಥಿಕವಾಗಿ ಪ್ರಬಲರಾಗಿದ್ದವರು ಮಾತ್ರ ವಂಶಪಾರಂಪರ್ಯವಾಗಿ “ ಪಂಚ” ರಾಗಿ ಅಧಿಕಾರಿ ನಡೆಸಲು ಅವಕಾಶವಿತ್ತು.

62. 1884 ರಲ್ಲಿ ಬ್ರಿಟಿಷರು ಸ್ಥಳೀಯ ಸರ್ಕಾರಕ್ಕೆ ಆಡಳಿತಾತ್ಮಕ ರೂಪ ಕೊಡುವ ಪ್ರಯತ್ನ ಮಾಡಿದರು. ಒಂದು ಜಿಲ್ಲೆಯನ್ನು ಆಡಳಿತ ಘಟಕವಾಗಿ ರೂಪಿಸಿದರು. ಈ ವ್ಯವಸ್ಥೆಗೆ “ ಲೋಕಲ್ ಫಂಡ್ ಸಮಿತಿ ” ಎಂದು ಕರೆಯಲಾಯಿತು.

63. “ ಲೋಕಲ್ ಫಂಡ್ ಸಮಿತಿ ”ಯಲ್ಲಿ ಜಿಲ್ಲಾ ಕಮಿಷನರ್ ಅಧ್ಯಕ್ಷರಾಗಿದ್ದು ಇನಾಂದಾರರು ಮತ್ತು ಭೂಮಾಲಿಕರು ಸದಸ್ಯರಾಗಿದ್ದರು.

64. ಕರ್ನಾಟಕದಲ್ಲಿ 1903 ರಲ್ಲಿ “ ದಿ ಮೈಸೂರು ಲೋಕಲ್ ಬೋರ್ಡ್ ರೆಗ್ಯುಲೇಷನ್ ” ಕಾಯಿದೆಯನ್ನು ಜಾರಿಗೆ ತರಲಾಯಿತು.

65. “ ದಿ ಮೈಸೂರು ಲೋಕಲ್ ಬೋರ್ಡ್ ರೆಗ್ಯುಲೇಷನ್ ” ಈ ಕಾಯಿದೆಯ ಪ್ರಕಾರ ಜಿಲ್ಲಾ ಮಂಡಳಿ , ತಾಲ್ಲೂಕು ಬೋರ್ಡ್ , ಪಂಚಾಯಿತಿ ಸಂಘಟನೆ ಎಂಬ ಮೂರು ಹಂತದಲ್ಲಿ ಜಾರಿಯಾಯಿತು.

66. 1919 ರಲ್ಲಿ ಅಂದಿನ ಮೈಸೂರು ಸರ್ಕಾರ “ ದಿ ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾಯತ್ ಕಾಯಿದೆ “ ಯನ್ನು ಜಾರಿಗೆ ತಂದಿತು.

67. 1926 ರಲ್ಲಿ “ ದಿ ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾಯತ್ ಕಾಯಿದೆ “ ಯಲ್ಲಿ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಒತ್ತು ನೀಡಲಾಯಿತು. ಆದರೆ 21 ವರ್ಷ ದಾಟಿದ ಪುರಷರಿಗೆ ಮಾತ್ರ ಮತದಾನದ ಅವಕಾಶ ಕಲ್ಪಿಸಲಾಗಿತ್ತು.

68. “ ದಿ ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾಯತ್ ಕಾಯಿದೆ “ ಯಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಗಳ ಕಾರ್ಯದರ್ಶಿಗಳ ನೇಮಕಕ್ಕೆ ಅವಕಾಶ ಮಾಡಿಕೊಡಲಾಯಿತು. ಚುನಾಯಿತ ಸದಸ್ಯರೊಬ್ಬರನ್ನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗುತ್ತಿತ್ತು.

69. 1949 ಸೆಪ್ಟೆಂಬರ್ ತಿಂಗಳಲ್ಲಿ ಮೈಸೂರು ರಾಜ್ಯದ ಸ್ಥಳೀಯಾಡಳಿತ ವ್ಯವಸ್ಥೆಯಲ್ಲಿನ ಕೊರತೆಗಳ ಅಧ್ಯಯನ ನಡೆಸಲು ವೆಂಕಟಪ್ಪ ನೇತೃತ್ವದ ಸಮಿತಿಯನ್ನು ರಚಿಸಲಾಯಿತು.

70. ವೆಂಕಟಪ್ಪ ಸಮಿತಿಯು 1950 ಜೂನ್ ತಿಂಗಳಲ್ಲಿ ಸಮಿತಿಯು ವರದಿಯನ್ನು ಒಪ್ಪಿಸಿತು.

71. ವೆಂಕಟಪ್ಪ ಸಮಿತಿಯು ಗ್ರಾಮ ಮಟ್ಟದಲ್ಲಿ ಗ್ರೂಪ್ ಪಂಚಾಯಿತಿ , ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಂಡಳಿ ಇರುವ ಎರಡು ಹಂತಗಳ ಸ್ಥಳೀಯಾಡಳಿತ ವ್ಯವಸ್ಥೆ ಮಾಡಬೇಕು .

72. 1959 ರಿಂದ ಎಲ್ಲಾ ರಾಜ್ಯಗಳಲ್ಲೂ ಪಂಚಾಯಿತಿ ರಾಜ್ ಅಧಿನಿಯಮವನ್ನು ಜಾರಿಗೆ ತಂದು ಗ್ರಾಮ ಪಂಚಾಯಿತಿ. ಬ್ಲಾಕ್ ಪಂಚಾಯಿತಿ ಸಮಿತಿ ( ತಾಲ್ಲೂಕು ಬೋರ್ಡ್ ) , ಜಿಲ್ಲಾ ಪರಿಷತ್ ಎಂಬ ಮೂರು ಹಂತಗಳ ಪಂಚಾಯಿತಿ ವ್ಯವಸ್ಥೆಯನ್ನು ಜಾರಿಗೆ ತಂದಿತು.

73. ಅಶೋಕ್ ಮೆಹ್ತಾ ಸಮಿತಿಯು ಎರಡು ಹಂತದ ಪಂಚಾಯಿತಿಗಳಿಗೆ ಶಿಫಾರಸ್ಸು ಮಾಡಿತು. ( ಮಂಡಲ ಪಂಚಾಯಿತಿ , ಜಿಲ್ಲಾ ಪರಿಷತ್ ) .
74. ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ಸರ್ಕಾರಗಳು ಅಶೋಕ್ ಮೆಹ್ತಾ ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ಹುಟ್ಟು ಹಾಕಿದವು.

75. ಪಂಚಾಯಿತಿ ರಾಜ್ ಸಚಿವ ಅಬ್ದುಲ್ ನಜೀರ್ ಸಾಬ್ ರವರ ಪ್ರಯತ್ನದಿಂದ 1987 – 1992 ರ ಅವಧಿಯಲ್ಲಿ 2 ಹಂತಗಳ ವ್ಯವಸ್ಥೆ ಜಾರಿಗೆ ಬಂದಿತು.

76. ಅಶೋಕ್ ಮೆಹ್ತಾ ಸಮಿತಿಯು ಮಹಿಳೆಯರಿಗೆ ಶೇ.25 ರಷ್ಟು ಪರಿಶಿಷ್ಟರಿಗೆ ಶೇ.15 ರಷ್ಟು ರಾಜಕೀಯ ಮೀಸಲಾತಿಯನ್ನು ಒದಗಿಸಿದ ಹೆಗ್ಗಳಿಕೆ ಕೂಡ ನಜೀರ್ ಸಾಬ್ ಅವರಿಗೆ ಸಲ್ಲಬೇಕು.

77. ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿನ ವ್ಯವಸ್ಥೆಯನ್ನು ಕಂಡು ಪ್ರೇರಿತರಾದ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಡಾ.ಎಲ್.ಎಂ.ಸಿಂಘ್ವಿ ನೇತೃತ್ವದ ಸಮಿತಿಯನ್ನು ರಚಿಸಿದರು.

78. ಡಾ.ಎಲ್.ಎಂ.ಸಿಂಘ್ವಿ ನೇತೃತ್ವದ ಸಮಿತಿಯು ಇಡೀ ದೇಶಕ್ಕೆ ಏಕರೂಪದ ಪಂಚಾಯಿತಿ ರಾಜ್ ವ್ಯವಸ್ಥೆಯ ಮಾದರಿಯನ್ನು ಈ ಸಮಿತಿ ಶಿಫಾರಸ್ಸು ಮಾಡಿತು.

79. ಡಾ.ಎಲ್.ಎಂ.ಸಿಂಘ್ವಿ ನೇತೃತ್ವದ ಸಮಿತಿಯ ಫಲವಾಗಿಯೇ ಸಂವಿಧಾನದ 73 ನೇ ತಿದ್ದುಪಡಿಯನ್ನು ತರಲಾಗಿದೆ. 1993 ರ ಏಪ್ರಿಲ್ 24 ರಿಂದ ಸಂವಿಧಾನದ 73 ನೇ ತಿದ್ದುಪಡಿಯ ಆಧಾರದಲ್ಲಿ ಮೂರು ಹಂತಗಳ ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

80. 73 ನೇ ತಿದ್ದುಪಡಿಯಲ್ಲಿ ಮಹಿಳೆಯರಿಗೆ 1/3 ಭಾಗ ಮೀಸಲಾತಿ ( ಮುಂದಿನ ಚುನಾವಣೆಯಿಂದ ಮಹಳಿಯೆರಿಗೆ ಶೇ.50 ರಷ್ಟು ಮೀಸಲಾತಿ ).

...ಮುಂದುವರೆಯುವುದು.

No comments:

Post a Comment