"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 18 August 2015

☀ ಸಾಮಾನ್ಯ ಜ್ಞಾನ (ಭಾಗ - 19) (ಎಸ್ ಡಿ ಎ ಮತ್ತು ಎಫ್ ಡಿ ಎ ನೋಟ್ಸ್)  (General knowledge on Constitution of India (Part-19))  ☆.. ಭಾರತ ಸಂವಿಧಾನದ ವಿಶೇಷಾಂಕ. ...

☀ ಸಾಮಾನ್ಯ ಜ್ಞಾನ (ಭಾಗ - 19) (ಎಸ್ ಡಿ ಎ ಮತ್ತು ಎಫ್ ಡಿ ಎ ನೋಟ್ಸ್)
(General knowledge on Constitution of India (Part-19))
☆.. ಭಾರತ ಸಂವಿಧಾನದ ವಿಶೇಷಾಂಕ. ...
━━━━━━━━━━━━━━━━━━━━━━━━━━━━━━━━━━━━━━━━━━━━━

★ ಭಾರತ ಸಂವಿಧಾನ.
(Constitution of India)

★ (ಎಸ್ ಡಿ ಎ ಮತ್ತು ಎಫ್ ಡಿ ಎ ವಿಶೇಷಾಂಕ)
(SDA and FDA special)


751. ಸಂವಿಧಾನದ ಯಾವ ವಿಧಿಯು 'ಚುನಾವಣಾ ಆಯೋಗ ' (Election commission) ದ ಸ್ಥಾಪನೆಗೆ ಸಂಬಂಧಿಸಿದೆ ?

● ಉತ್ತರ: 324ನೇ ವಿಧಿ.


752. ಲೋಕಸಭೆಯ ಸಭಾಪತಿ ಯಾರಿಂದ ಆಯ್ಕೆ ಗೋಳ್ಳುತ್ತಾನೆ?

● ಉತ್ತರ: ಲೋಕಸಭಾ ಸದಸ್ಯರಿಂದ.


753. ಲೋಕಸಭೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪರಶಿಷ್ಠ (ST) ಜನಾಂಗಕ್ಕೆ ಮಿಸಲಿಟ್ಟ ರಾಜ್ಯ ಯಾವುದು?

● ಉತ್ತರ: ಮಧ್ಯಪ್ರದೇಶ


754. ಸಂಸತ್ತಿನ ಜಂಟಿ ಅಧಿವೇಶನದ ಅಧ್ಯಕ್ಷತೆ ಯಾರು ವಹಿಸುತ್ತಾರೆ?

● ಉತ್ತರ: ಲೋಕಸಭಾ ಸ್ಪೀಕರ್


755.ಲೋಕಸಭೆಯ ಸದಸ್ಯರ ಅಧಿಕಾರ ಅವಧಿ 5 ವರ್ಷ ದಿಂದ 6 ವರ್ಷ ಕ್ಕೆ ಹೆಚ್ಚಳ ಮಾಡಿದ ತಿದ್ದುಪಡಿ ಯಾವುದು?

● ಉತ್ತರ: 1976 ರಲ್ಲಿ 42 ನೇ ತಿದ್ದುಪಡಿ (ಇಂದಿರಾಗಾಂಧಿಯವರು ಪ್ರಧಾನಿ ಅಗಿದ್ದರು)


756.ತೀರ್ಪು ಗಳ ಪುನರಾವಲೋಕನ ಕುರಿತು ತಿಳಿಸುವ ಕಲಂ ಯಾವುದು?

● ಉತ್ತರ: 137 ಕಲಂ.


757.ಲೋಕಸಭೆಯ ಸದಸ್ಯರ ಅಧಿಕಾರ ಅವಧಿ 6 ವರ್ಷ ದಿಂದ 5ವರ್ಷ ಕ್ಕೆ ಕಡಿಮೆ ಮಾಡಿದ್ದು ಎಷ್ಟನೆ ತಿದ್ದುಪಡಿ ಯಾವುದು ?

● ಉತ್ತರ: 44ನೇ ತಿದ್ದುಪಡಿ


758. ಯಾರು ಪ್ರಧಾನಮಂತ್ರಿಯಾಗಿದ್ದಾಗ ಮತದಾನದ ವಯಸ್ಸನ್ನು 21ರಿಂದ 18ವರ್ಷಕ್ಕೆ ಇಳಿಸಲಾಯಿತು?

● ಉತ್ತರ: ರಾಜೀವ್ ಗಾಂಧಿ


759. ಕರ್ನಾಟಕದಲ್ಲಿ ಮೊಟ್ಟಮೊದಲಿಗೆ ಕಾಂಗ್ರೆಸೆತರ ಸರ್ಕಾರ ಯಾವಾಗ ಅಸ್ತಿತ್ವಕ್ಕೆ ಬಂತು?

● ಉತ್ತರ: 1983 (ಜನರ ಪಕ್ಷಾ, ರಾಮಕೃಷ್ಣ ಹೆಗಡೆ)


760. 1979 ರ ಕ್ಕೆಂತ ಮಂಚೆ ಯಾವ ರಾಜ್ಯದಲ್ಲಿ ಪಕ್ಷಾಂತರ ಕಾಯ್ದೆಯು ಅಸ್ತಿತ್ವದಲ್ಲಿ ಇತ್ತು?

● ಉತ್ತರ: ಜಮ್ಮು ಮತ್ತು ಕಾಶ್ಮೀರ


761.ಭಾರತದಲ್ಲಿ ಜನಗಣತಿಯನ್ನು ಯಾವ ವಿಧಿಯ ಅನುಸಾರವಾಗಿ ನಡೆಸುತ್ತಾರೆ ?

● ಉತ್ತರ: 246 ನೇ ವಿಧಿ.


762. ಯಾವ ಸದನದಲ್ಲಿ ಸದಸ್ಯರಲ್ಲದ ವ್ಯಕ್ತಿ ಅಧ್ಯಕ್ಷ ಸ್ಥಾನ ಅಲಂಕರಿಸುತ್ತಾರೆ ?

● ಉತ್ತರ: ರಾಜ್ಯಸಭೆ


763. ಯಾವ ವರ್ಷ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳ ಸ್ಥಾನಗಳು ಏಕಕಾಲದಲ್ಲಿ ತೆರವಾಗಿದ್ದವು?

● ಉತ್ತರ: 1969 ರಲ್ಲಿ


764.ಸಂಸತ್ತಿನ ವಿರಾಮಕಾಲದಲ್ಲಿ ರಾಷ್ಟ್ರಪತಿಗಳು ಸುಗ್ರೀವಾಜ್ಝ್ನೆ ಹೊರಡಿಸುವ ಬಗ್ಗೆ ತಿಳಿಸುವ ವಿಧಿ ಯಾವುದು?

● ಉತ್ತರ: 123ನೇ ವಿಧಿ.


765.1975 ರಲ್ಲಿ ಇಂದಿರಾಗಾಂಧಿ ರಾಷ್ಟ್ರೀಯತುರ್ತು ಪರಿಸ್ಥಿತಿ ಘೋಷಿಸಿದಾಗ ಅಂದಿನರಾಷ್ಟ್ರಪತಿ ಯಾರಾಗಿದ್ದರು?

● ಉತ್ತರ: ಫಕ್ರುದ್ದೀನ್ ಅಲಿ ಅಹ್ಮದ್.


766.ಭಾರತದ ಲೋಕಸಭೆಯ ಮೊದಲ ಅಧ್ಯಕ್ಷರು ಯಾರು?

● ಉತ್ತರ: ಜಿ.ವಿ. ಮಾಳವಂಕರ್


767.ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರನ್ನು ನೇಮಿಸುವವರು ಯಾರು?

● ಉತ್ತರ: ರಾಷ್ಟ್ರಪತಿ


768.ಭಾರತದ ಸಂವಿಧಾನದಲ್ಲಿ ರಾಷ್ಟ್ರಪತಿಯವರಿಗೆ ಸಹಿ ಕೊಡುವ ಅಧಿಕಾರದ ಬಗ್ಗೆ ತಿಳಿಸುವ ಕಲಂ ಯಾವುದು?

● ಉತ್ತರ: 111ನೇ ವಿಧಿ


769. ಭಾರತದಲ್ಲಿ ರಾಜ್ಯದ ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು?

● ಉತ್ತರ: ರಾಷ್ಟಾಧ್ಯಕ್ಷರು


770.ಕರ್ನಾಟಕದ ವಿಧಾನ ಪರಿಷತ್ತಿನ ಇರುವ ಸದಸ್ಯರ ಸಂಖ್ಯೆ ಎಷ್ಟು?

● ಉತ್ತರ: 75 ಸದಸ್ಯರು.


771.ಭಾರತೀಯ ಸಂವಿಧಾನದಲ್ಲಿ, ಪರಿಚ್ಛೇದ 352 ರ ನಿಬಂಧನೆಗಳೇನು?

● ಉತ್ತರ: ತುರ್ತುಸ್ಥಿತಿಯ ಘೋಷಣೆ


772. ಕೇಂದ್ರದ ಆಜ್ಞೆ ಗಳನ್ನು ಪಾಲಿಸಲು ರಾಜ್ಯ ಸರ್ಕಾರಗಳು ವಿಫಲವಾದರೆ ಯಾವ ಕಲಂ ಪ್ರಕಾರ ತುರ್ತು ಪರಿಸ್ಥಿತಿ ಹೇರುತ್ತಾರೆ?

● ಉತ್ತರ: 365ನೇ ವಿಧಿ.


773. ಯಾವ ರಾಜ್ಯದ ವಿಧಾನಸಭಾ ಸದಸ್ಯರು 6 ವರ್ಷ ಅಧಿಕಾರವಧಿಯನ್ನು ಹೊಂದಿದ್ದಾರೆ?

● ಉತ್ತರ: ಜಮ್ಮು& ಕಾಶ್ಮೀರ.


774. ವಿತ್ತ ಆಯೋಗದ ರಚನೆಯನ್ನು ಸಂವಿಧಾನದ ಕೆಳಕಂಡ ಯಾವ ಪರಿಚ್ಛೇದದಲ್ಲಿ ತಿಳಿಸಲಾಗಿದೆ?

● ಉತ್ತರ: ಪರಿಚ್ಛೇದ 180.


775. ಸಂವಿಧಾನದ ಎಷ್ಟನೇ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಕಾಣಬಹುದಾಗಿದೆ?

● ಉತ್ತರ: 3 ನೇ ಭಾಗದಲ್ಲಿ.


776. ಯಾರು ಕರ್ನಾಟಕ ವಿಧಾನಸಭೆಯ ಮೊದಲ ಸ್ಪೀಕರ್ ಆಗಿದ್ದರು?

● ಉತ್ತರ: ಎ. ವೆಂಕಟಪ್ಪ


777. ರಾಜ್ಯಪಾಲರಿಗೆ ಆಂಗ್ಲೋ ಇಂಡಿಯನ್ನ್ ಸಮೂದಾಯಕ್ಕೆ ಸೇರಿದ ಒಬ್ಬ ವ್ಯಕ್ತಿಯನ್ನು ವಿದಾನ ಸಬೆಗೆ ನಾಮಕರಣ ಮಾಡುವ ಅಧಿಕಾರ ನೀಡುವ ಪರಿಚ್ಛೇದ ಯಾವುದು?

● ಉತ್ತರ: 333ನೇ ಪರಿಚ್ಛೇದ.


778. ‘ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನಿಸಿದ ಸ್ಥಳದ ಆಧಾರದಲ್ಲಿ ತಾರತಮ್ಯ ಎಸಗುವುದು ನಿಷಿದ್ಧ. ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನಿಸಿದ ಸ್ಥಳದ ಆಧಾರದಲ್ಲಿ ಸರ್ಕಾರಗಳು ಯಾವುದೇ ತಾರತಮ್ಯ ಮಾಡುವಂತಿಲ್ಲ’ ಎಂದು ಹೇಳುವ ದೇಶದ ಸಂವಿಧಾನದ ವಿಧಿಗಳು?

● ಉತ್ತರ: 14 ಮತ್ತು 15ನೇ ವಿಧಿಗಳು.


779.ಯಾವ ದೇಶದ ಸಂವಿಧಾನದಿಂದ 'ರಾಷ್ಟ್ರಪತಿ ದೋಷಾರೋಪಣ ಪದ್ದತಿ'ಯನ್ನು ಭಾರತದ ಸಂವಿಧಾನವು ಎರವಲು ಪಡೆದುಕೊಂಡಿದೆ ?

● ಉತ್ತರ: ಐರ್ಲೆಂಡ್ ಸಂವಿಧಾನ


780. ಯಾವ ಅನುಚ್ಚೇದದ ಪ್ರಕಾರ ಸಂಸತ್ತು ವಿದಾನ ಪರಿಷತ್ ನ್ನು ರಚಿಸಬಹುದು ಅಥವಾ ರದ್ದುಪಡಿಸಬಹುದು?

● ಉತ್ತರ: 169ನೇ ಪರಿಚ್ಛೇದ.

To be continued ...

1 comment: