"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 5 October 2023

•► 'UPSC/KPSC ಪ್ರಿಲೀಮ್ಸ್ -2023': ದೈನಂದಿನ (05/10/2023) 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು (Prelims 2023: Daily 10 Multiple Choice Questions)

 •► 'UPSC/KPSC ಪ್ರಿಲೀಮ್ಸ್ -2023': ದೈನಂದಿನ (05/10/2023) 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು
(Prelims 2023: Daily 10 Multiple Choice Questions)

━━━━━━━━━━━━━━━━━━━━━━━━━━━━━━

31) ಇತ್ತೀಚೆಗೆ ಸಾಮಾನ್ಯವಾಗಿ ಸುದ್ದಿಗಳಲ್ಲಿ ಕೇಳಿಬರುವ "ಲೆವಂಟ್" ಪದವು ಈ ಕೆಳಗಿನ ಯಾವ ಪ್ರದೇಶಗಳಿಗೆ ಅನುರೂಪವಾಗಿದೆ?
A) ಪೂರ್ವ ಮೆಡಿಟರೇನಿಯನ್ ತೀರದುದ್ದಕ್ಕೂ ಇರುವ ಪ್ರದೇಶ
B) ಈಜಿಪ್ಟ್‌ನಿಂದ ಮೊರಾಕೊದವರೆಗೆ ವಿಸ್ತರಿಸಿರುವ ಉತ್ತರ ಆಫ್ರಿಕಾದ ತೀರದ ಪ್ರದೇಶ
C) ಪರ್ಷಿಯನ್ ಕೊಲ್ಲಿ ಮತ್ತು ಆಫ್ರಿಕಾದ ಅಂಚಿನ ತೀರದುದ್ದಕ್ಕೂ ಹರಡಿರುವ ಪ್ರದೇಶ
D) ಮೆಡಿಟರೇನಿಯನ್ ಸಮುದ್ರದ ಸಂಪೂರ್ಣ ಕರಾವಳಿ ಪ್ರದೇಶಗಳು
ಉತ್ತರ: (A)

32) ವರ್ಷಕ್ಕೊಮ್ಮೆಯಾದರೂ ಈ ಪ್ರದೇಶದಲ್ಲಿ 'ಮಧ್ಯಾಹ್ನದ ಸೂರ್ಯನು' ನಿಖರವಾಗಿ ತಲೆಯ ಮೇಲೆ ಬರುತ್ತಾನೆ.
A) ಧ್ರುವೀಯ ಅಕ್ಷಾಂಶವನ್ನು ಹೊರತುಪಡಿಸಿ ಎಲ್ಲಾ ಅಕ್ಷಾಂಶಗಳು.
B) ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವಿನ ಎಲ್ಲಾ ಅಕ್ಷಾಂಶಗಳು.
C) ಸಮಭಾಜಕ ವೃತ್ತದಲ್ಲಿ ಮಾತ್ರ.
D) ಎರಡೂ ಉಷ್ಣವಲಯಗಳ ಆಚೆಗಿನ ಎಲ್ಲಾ ಅಕ್ಷಾಂಶಗಳು.
ಉತ್ತರ: (B)

33) ಇತ್ತೀಚೆಗೆ ಬಿಡುಗಡೆಗೊಂಡ 'ರಫ್ತು ಸಿದ್ಧತೆ ಸೂಚ್ಯಂಕ (Export Preparedness Index (EPI) Report, 2022 ಪ್ರಕಟಿಸಿದವರು,
A) ಹಣಕಾ‌ಸು ಸಚಿವಾಲಯ.
B) ನೀತಿ ಆಯೋಗ.
C) ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
D) ಅಂಕಿಅಂಶ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ
ಉತ್ತರ: (B)

34)  'ಕೌನ್ಸಿಲ್ ಆಫ್ ಯುರೋಪ್'ನ ಕುರಿತ ಸರಿಯಾದ ಹೇಳಿಕೆಗಳನ್ನು ಪರಿಗಣಿಸಿ:
1. ಇದು 2ನೇ ವಿಶ್ವ ಸಮರದ ಹಿನ್ನೆಲೆಯಲ್ಲಿ ಯುರೋಪ್‌ನಲ್ಲಿ  ಮಾನವ ಹಕ್ಕುಗಳನ್ನು ಎತ್ತಿಹಿಡಿಯಲು ಸ್ಥಾಪಿಸಲಾಯಿತು.
2. ಇದು 46 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.
3. ಇದರ ಪ್ರಧಾನ ಕಛೇರಿಯು ಫ್ರಾನ್ಸ್‌ನ ಸ್ಟ್ರಾಸ್‌ಬರ್ಗ್‌ನಲ್ಲಿದೆ.
4.ಯುರೋಪ್ ಕೌನ್ಸಿಲ್‌ನಲ್ಲಿ ರಷ್ಯಾದ ಸದಸ್ಯತ್ವವನ್ನು ಅಮಾನತುಗೊಳಿಸಲಾಗಿದೆ.
A) 1 ಮತ್ತು 2 ಮಾತ್ರ ಸರಿ.
B) 1,3 ಮತ್ತು 4 ಮಾತ್ರ ಸರಿ.
C) 1,2 ಮತ್ತು 4 ಮಾತ್ರ ಸರಿ.
D) ಎಲ್ಲವೂ ಸರಿ.
ಉತ್ತರ: (D)

35) ಇತ್ತೀಚೆಗೆ ‘ಥ್ರೀ ಪವರ್‌ ಸ್ಕ್ವೇರ್‌’ ಎಂಬ ಸ್ಥಳವು ಸುದ್ದಿಯಲ್ಲಿದ್ದುದು ಈ ದೇಶದಲ್ಲಿದೆ.
A) ಜಪಾನ್.
B) ಇಸ್ರೇಲ್.
C) ಬ್ರೆಜಿಲ್
D) ರಷ್ಯಾ
ಉತ್ತರ: (C)

36) ಸೆಂಡೈ ಚೌಕಟ್ಟು (Sendai Framework) ಇದಕ್ಕೆ ಸಂಬಂಧಿಸಿದುದಾಗಿದೆ.
A) ಜಾಗತಿಕ ಮಟ್ಟದಲ್ಲಿ ಹಸಿವನ್ನು ಹೋಗಲಾಡಿಸುವುದು.
B) ಜೀವವೈವಿಧ್ಯ ಸಂರಕ್ಷಣೆ
C) ವಿಪತ್ತಿನ ಅಪಾಯ ತಗ್ಗಿಸುವಿಕೆ.
D) ಪತ್ರಿಕಾ ಸ್ವಾತಂತ್ರ್ಯ
ಉತ್ತರ: (C)

37) ಇತ್ತೀಚೆಗೆ "ವೋಲ್ಬಾಚಿಯಾ ವಿಧಾನ' (Wolbachia method) ಎಂಬುದು ಈ ಕೆಳಗಿನ ಯಾವ ವಿಷಯವೊಂದಿಗೆ ಸುದ್ದಿಯಲ್ಲಿದೆ?
A) ಸೊಳ್ಳೆಗಳಿಂದ ಹರಡುವ ವೈರಲ್ ರೋಗಗಳನ್ನು ನಿಯಂತ್ರಿಸುವುದು
B) ಬೆಳೆ ಅವಶೇಷಗಳನ್ನು ಪ್ಯಾಕಿಂಗ್ ವಸ್ತುವಾಗಿ ಪರಿವರ್ತಿಸುವುದು
C) ಜೈವಿಕ ವಿಘಟನೀಯ ಪ್ಲಾಸ್ಟಿಕ್‌ಗಳನ್ನು ಉತ್ಪಾದಿಸುವುದು
D) ಜೈವಿಕ ದ್ರವ್ಯರಾಶಿಯ ನೇರ ಉಷ್ಣ ವಿಭಜನೆಯ ಮೂಲಕ ಬಯೋಚಾರ್ ಅನ್ನು ಉತ್ಪಾದಿಸುವುದು.
ಉತ್ತರ: (A)

38) 'ಕಾಂಗರ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ'ದ ಕುರಿತ ಸರಿಯಾದ ಹೇಳಿಕೆಗಳನ್ನು ಪರಿಗಣಿಸಿ:
1.ಅಪರೂಪದ ಭಾರತೀಯ ಇಲಿ ಜಿಂಕೆ ಅಥವಾ ಮಚ್ಚೆಯುಳ್ಳ ಚೆವ್ರೊಟೈನ್ ಇತ್ತೀಚೆಗೆ ಈ ಉದ್ಯಾನವನದಲ್ಲಿ ಕಂಡುಬಂದಿದೆ.
2.ತಿರತ್‌ಗಡ್ ಜಲಪಾತವು ಈ ಉದ್ಯಾನವನದಲ್ಲಿದೆ.
3.ಈ ಉದ್ಯಾನವನ ಭೂಗತ ಸುಣ್ಣದ ಗುಹೆಗಳ ಉಪಸ್ಥಿತಿಗೆ ಹೆಸರುವಾಸಿಯಾಗಿದೆ
A) 1 ಮತ್ತು 2 ಮಾತ್ರ ಸರಿ.
B) 2 ಮತ್ತು 3 ಮಾತ್ರ ಸರಿ.
C) 1 ಮತ್ತು 3 ಮಾತ್ರ ಸರಿ.
D) ಎಲ್ಲವೂ ಸರಿ.
ಉತ್ತರ: (D)

39) ಇತ್ತೀಚೆಗೆ 'GST Sahay' ಎಂಬ ಆ್ಯಪ್ ಆಧಾರಿತ 'ರಶೀದಿ ಹಣಕಾಸು ಸಾಲಗಳ ವೇದಿಕೆ'ಯನ್ನು ಪ್ರಾರಂಭಿಸಿದ್ದು?
A) SEBI
B) SIDBI
C) ನೀತಿ ಆಯೋಗ
D) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ.
ಉತ್ತರ: (B)

40) 'ಕೊರಿಯೊಲಿಸ್ ಪರಿಣಾಮ'(Coriolis effect)ದ ಕುರಿತ ಸರಿಯಾದ ಹೇಳಿಕೆಗಳನ್ನು ಪರಿಗಣಿಸಿ:
1.ಕೋರಿಯೊಲಿಸ್ ಪರಿಣಾಮವು ಧ್ರುವಗಳಲ್ಲಿ ಗರಿಷ್ಠವಾಗಿರುತ್ತದೆ ಮತ್ತು ಸಮಭಾಜಕದಲ್ಲಿ ಶೂನ್ಯವಾಗಿರುತ್ತದೆ.
2.ಕೋರಿಯೊಲಿಸ್ ಬಲವು ಯಾವಾಗಲೂ ಚಲಿಸುವ ವಸ್ತುವಿನ ಅಕ್ಷಕ್ಕೆ ಲಂಬವಾಗಿರುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತದೆ.
3.ಕೊರಿಯೊಲಿಸ್ ಬಲದ ಪ್ರಮಾಣವನ್ನು ಗಾಳಿಯ ವೇಗದಿಂದ ನಿರ್ಧರಿಸಲಾಗುತ್ತದೆ.
A) 1 ಮತ್ತು 2 ಮಾತ್ರ ಸರಿ.
B) 2 ಮತ್ತು 3 ಮಾತ್ರ ಸರಿ.
C) 1 ಮತ್ತು 3 ಮಾತ್ರ ಸರಿ.
D) ಎಲ್ಲವೂ ಸರಿ.

ಉತ್ತರ: (D)

 

No comments:

Post a Comment