"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 1 December 2013

ಭಾರತದ 14ನೇ ಹಣಕಾಸು ಆಯೋಗ:

ಭಾರತದ 14ನೇ ಹಣಕಾಸು ಆಯೋಗ: -
2014 ಅ.31ರ ನಿಗದಿತ ಅವಧಿಯವರೆಗೆ ರಚನೆಗೊಂಡಿರುವ 14ನೇ ಹಣಕಾಸು ಆಯೋಗವನ್ನು ರಿಸರ್ವ್ ಬ್ಯಾಂಕಿನ ನಿವೃತ್ತ ಗವರ್ನರ್ ಡಾ. Y.V.ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ 2013 ಜ.2 ರಂದು ರಚಿಸಲಾಯಿತು. ಅಜಯ್ ನಾರಾಯಣ್ ಝಾ ರವರು ಈ ಆಯೋಗದ ಕಾರ್ಯದರ್ಶಿ ಗಳಾಗಿರುವರು.

--ಆಯೋಗದ ಕಾರ್ಯಗಳು:
* ಕೇಂದ್ರ ಮತ್ತು ರಾಜ್ಯಗಳ ನಡುವಿನ ಹಣಕಾಸು ಸಂಗತಿಗಳ ಅಧ್ಯಯನ.
* ವಿತ್ತೀಯ ಸಂಗ್ರಹಣೆ, ನಿರ್ವಹಣೆ ಮತ್ತು ವಿತರಣೆ.
* ಸಹಾಯ ಧನ, ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನದ ಜವಾಬ್ದಾರಿ.
* 13ನೇ ಹಣಕಾಸು ಆಯೋಗ ಮಾಡಿರುವ ಶಿಫಾರಸುಗಳ ಅನುಷ್ಟಾನದಲ್ಲಿ ಉಂಟಾಗಿರಬಹುದಾದ ಸುಧಾರಣೆ ಅಥವಾ ನ್ಯೂನತೆಗಳನ್ನು ಸರಿದೂಗಿಸಿ, 2015ರ ಏಪ್ರೀಲ್ನಿಂದ 2020ರವರೆಗೆ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಂತಹ ಶಿಫಾರಸುಗಳನ್ನು ಸಿದ್ಧ ಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದು ಈ ಆಯೋಗದ ಪ್ರಮುಖ ಕಾರ್ಯ.

No comments:

Post a Comment