"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 17 July 2025

● ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ ಪ್ರಮುಖ ಪ್ರವಾಸಿಗರು: (Foreign Travellers visited Vijayanagar Kingdom)

● ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ ಪ್ರಮುಖ ಪ್ರವಾಸಿಗರು:
(Foreign Travellers visited Vijayanagar Kingdom)

━━━━━━━━━━━━━━━━━━━━━━━━━━━━━━━━━━

1. ಅಬು ಅಬ್ದುಲ್ಲಾ/ ಇಬ್ನ್ ಬಟುಟಾ (ಮೊರಾಕೊ ದೇಶ) 1336 – 1356ರಲ್ಲಿ 1ನೇ ಹರಿಹರ ಅರಸನ ಕಾಲದಲ್ಲಿ ಭೇಟಿ ನೀಡಿದ.

2. ನಿಕಲೋ ಕೊಂಟಿ (ಇಟಲಿ ದೇಶ) 1420 ರಲ್ಲಿ 1ನೇ ದೇವರಾಯ ಅರಸನ ಕಾಲದಲ್ಲಿ ಭೇಟಿ ನೀಡಿದ.

2. ಅಬ್ದುಲ್ ರಜಾಕ್ (ಪರ್ಶಿಯಾ ದೇಶ) 1443 ರಲ್ಲಿ 2ನೇ ದೇವರಾಯ ಅರಸನ ಕಾಲದಲ್ಲಿ ಭೇಟಿಯಾದ.

3. ಅಥಾನಾಸಿಯಸ್ ನಿಕೆಟಿನ್ ಪ್ರವಾಸಿ (ರಷ್ಯ)  1470 ರಲ್ಲಿ ವಿರೂಪಾಕ್ಷ ಅರಸನ ಕಾಲದಲ್ಲಿ ಭೇಟಿ ನೀಡಿದ.

4. ಬಾರ್ಬೋಸ (ಪೋರ್ಚುಗಲ್ ದೇಶ)  1514 – 1516 ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಭೇಟಿ ನೀಡಿದ.

5. ಡೋಮಿಂಗೋ ಪಯಾಸ್ (ಪೋರ್ಚುಗಲ್ ದೇಶ) 1520 ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಭೇಟಿ ನೀಡಿದ.

6.ನ್ಯೂನಿಜ್ (ಪೋರ್ಚುಗಲ್ ದೇಶ) 1535 ರಲ್ಲಿ ಅಚ್ಚುತ ರಾಯನ ಕಾಲದಲ್ಲಿ ಭೇಟಿ ನೀಡಿದ.


Sunday, 6 April 2025

05 ಏಪ್ರಿಲ್ 2025ರ ದೈನಂದಿನ ಪ್ರಚಲಿತ ವಿದ್ಯಮಾನಗಳು : (05 April 2025 Current Affairs)

  ➼ 05 ಏಪ್ರಿಲ್ 2025ರ ದೈನಂದಿನ ಪ್ರಚಲಿತ ವಿದ್ಯಮಾನಗಳು :

(05 April 2025 Current Affairs)

━━━━━━━━━━━━━━━━━━━━━━━━━━━━━━━━━━━━━━━━━━━━━


1.'ಏಪ್ರಿಲ್ 5' — ಗ್ರೆಗೋರಿಯನ್ ಕ್ಯಾಲೆಂಡರ್‌ನ ಪ್ರಕಾರ ವರ್ಷದ 95ನೇ ದಿನವಾಗಿದೆ (ಅಧಿಕ ವರ್ಷ(leap year)ದಲ್ಲಿ 96ನೇ ದಿನ); ವರ್ಷಾಂತ್ಯಕ್ಕೆ 270 ದಿನಗಳು ಉಳಿದಿವೆ.



2.ಏಪ್ರಿಲ್ 5  — ರಾಷ್ಟ್ರೀಯ ಕಡಲ ದಿನ (National Maritime Day).

- 1919 ರಂದು ಮುಂಬೈನಿಂದ ಲಂಡನ್‌ಗೆ ಪ್ರಯಾಣ ಬೆಳೆಸಿದ ಮೊದಲ ಭಾರತೀಯ ಒಡೆತನದ ಉಗಿ ಹಡಗು 'SS ಲಾಯಲ್ಟಿ'(S.S. Loyalty')ಯ ಐತಿಹಾಸಿಕ ಪ್ರಯಾಣವನ್ನು ಸ್ಮರಿಸುತ್ತದೆ. 

-ಈ ಮಹತ್ವದ ಘಟನೆಯು ಅಂತರರಾಷ್ಟ್ರೀಯ ಹಡಗು ಸಾಗಣೆಯಲ್ಲಿ ಭಾರತದ ಪ್ರವೇಶವನ್ನು ಗುರುತಿಸಿತು ಮತ್ತು ರಾಷ್ಟ್ರದ ಹೆಮ್ಮೆಯ ಕಡಲ ಪ್ರಯಾಣಕ್ಕೆ ಅಡಿಪಾಯ ಹಾಕಿತು



3.2025 ರ ಆರ್ಥಿಕ ವರ್ಷದಲ್ಲಿ, ಕೇಂದ್ರ ಸರ್ಕಾರವು ಒಟ್ಟು 5,614 ಕಿಮೀ ರಾಷ್ಟ್ರೀಯ ಹೆದ್ದಾರಿಗಳನ್ನು (NH) ನಿರ್ಮಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.



 4.ಇತ್ತೀಚೆಗೆ, ತೈವಾನ್ ದೇಶದ ಖಗೋಳಶಾಸ್ತ್ರಜ್ಞರು ಶನಿಯ 128 ಹೊಸ ಉಪಗ್ರಹಗಳನ್ನು ಕಂಡುಹಿಡಿದಿದ್ದಾರೆ.



 5.ಇತ್ತೀಚೆಗೆ ಎನ್. ಚಂದ್ರಶೇಖರನ್ ಅವರನ್ನು IMF ವ್ಯವಸ್ಥಾಪಕ ನಿರ್ದೇಶಕರ ಉದ್ಯಮಶೀಲತೆ ಮತ್ತು ಅಭಿವೃದ್ಧಿಯ ಸಲಹಾ ಮಂಡಳಿಗೆ ನೇಮಿಸಲಾಗಿದೆ.


 6. ಯುರೋಪಿಯನ್ ಅಂತರಿಕ್ಷ ಏಜೆನ್ಸಿಯು 'ಗಯಾ' (Gaia) ಎಂಬ  ಹೆಸರಿನ ಬಾಹ್ಯಾಕಾಶ ವೀಕ್ಷಣಾಲಯವನ್ನು ಮುಚ್ಚುವುದಾಗಿ ಘೋಷಿಸಿದೆ.


 7.ಇತ್ತೀಚೆಗೆ ಹರಿಯಾಣ ರಾಜ್ಯದಲ್ಲಿ ಮೊದಲ ಬಾರಿಗೆ MNREGA ವೇತನವು ದಿನಕ್ಕೆ ₹400 ಗೆ ತಲುಪಿದೆ.


 8. ಪ್ರತಿ ವರ್ಷ ಏಪ್ರಿಲ್ 4 ರಂದು 'ಅಂತರರಾಷ್ಟ್ರೀಯ ಗಣಿ ಜಾಗೃತಿ ದಿನ' (‘International Mine Awareness Day’ )ವನ್ನಾಗಿ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.


 9. ಇತ್ತೀಚೆಗೆ ಆಯೋಜಿಸಲಾದ "ಹಮಾರಿ ಪರಂಪರಾ ಹಮಾರಿ ವಿರಾಸತ್" (ನಮ್ಮ ಪರಂಪರೆ ನಮ್ಮ ಆನುವಂಶಿಕತೆ) ಕಾರ್ಯಕ್ರಮವು ಪರಿಶಿಷ್ಟ ಪಂಗಡಗಳ ವರ್ಗಕ್ಕೆ ಸಂಬಂಧಿಸಿದ್ದಾಗಿದೆ‌.


 10. ಇತ್ತೀಚೆಗೆ ಹಂಗೇರಿಯು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ (ICC) ಹಿಂದೆ ಸರಿಯಲು ನಿರ್ಧರಿಸಿದೆ.


 11. ಇತ್ತೀಚೆಗೆ ಭಾರತ ಮತ್ತು ಥೈಲ್ಯಾಂಡ್ ದೇಶವು ಸಾಗರ ಕರಕುಶಲ ಮತ್ತು ಕೈಮಗ್ಗ ಕ್ಷೇತ್ರಗಳು ಸೇರಿದಂತೆ ಒಟ್ಟು 06 ಒಪ್ಪಂದಗಳಿಗೆ ಸಹಿ ಹಾಕಿವೆ.


 12. ಇತ್ತೀಚೆಗೆ ಸ್ಪೇಸ್‌ಎಕ್ಸ್ ಸಂಸ್ಥೆಯು ನಾಲ್ಕು ಗಗನಯಾತ್ರಿಗಳೊಂದಿಗೆ 'Fram 2 ಮಿಷನ್' ಅನ್ನು ಪ್ರಾರಂಭಿಸಿದೆ.

 — ಸ್ಪೇಸ್‌ಎಕ್ಸ್ -'Fram 2 ಮಿಷನ್' : ಒದು ಧ್ರುವೀಯ ಕಕ್ಷೆಯಿಂದ ಭೂಮಿಯನ್ನು ಅನ್ವೇಷಿಸಲು ಮತ್ತು ಭೂಮಿಯ ಧ್ರುವ ಪ್ರದೇಶಗಳ ಮೇಲೆ ಹಾರಾಟ ಮಾಡಲು ಕೈಗೊಂಡ ಮೊದಲ ಮಾನವ ಬಾಹ್ಯಾಕಾಶ ಹಾರಾಟದ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದರು.


 13. ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೌಂಟ್ ಎವರೆಸ್ಟ್ ಮತ್ತು ಮೌಂಟ್ ಕಾಂಚನಜುಂಗಾ ಶಿಖರಗಳಲ್ಲಿ ಭಾರತೀಯ ಮತ್ತು ನೇಪಾಳಿ ಸೇನೆಯ ಜಂಟಿ ಸೇನಾ ಅಭಿಯಾನಕ್ಕೆ ಚಾಲನೆ ‌ನೀಡಿದರು‌


 14. ಇತ್ತೀಚೆಗೆ ಆರ್ಮಿ ಕಮಾಂಡರ್‌ಗಳ ಸಮ್ಮೇಳನ 2025 (Army Commanders' Conference 2025)ವು ನವದೆಹಲಿಯಲ್ಲಿ ಜರುಗಿತು.


 15.ಜಾಗತಿಕವಾಗಿ ಡ್ರೋನ್ ಆಮದುಗಳಲ್ಲಿ ಭಾರತದ ಪಾಲು 22%ರಷ್ಟು ಇದೆ.


 16.FY 2025ರವೇಳೆಗೆ ಭಾರತದ ಆರ್ಥಿಕತೆಗೆ ಸೇವಾ ವಲಯದ ಕೊಡುಗೆಯು ಸುಮಾರು 55% ಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ.


 17. ವಿಶ್ವಸಂಸ್ಥೆಯ ಅದ್ಯಯನದ ಪ್ರಕಾರ, 2047ರ ವೇಳೆಗೆ ಭಾರತದ ಜನಸಂಖ್ಯೆಯ ಶೇ.50% ಕ್ಕಿಂತ ಹೆಚ್ಚು ಜನರು ನಗರಗಳಲ್ಲಿ ವಾಸಿಸುವರಾಗಿರುತ್ತಾರೆ.


Saturday, 5 April 2025

➼ ದೇಶದಲ್ಲಿರುವ ಪ್ರಮುಖ ಬಿಸಿ ನೀರಿನ ಬುಗ್ಗೆಗಳು: (The Famous Hot water springs in india)

 ➼ ದೇಶದಲ್ಲಿರುವ ಪ್ರಮುಖ ಬಿಸಿ ನೀರಿನ ಬುಗ್ಗೆಗಳು:
(The Famous Hot water springs in india)

━━━━━━━━━━━━━━━━━━━━━━━━━━━━━━━━━━

● - ಪನಾಮಿಕ್ (Panamik): ಲಡಾಖ್ ನ ಲೇಹ್ ಪಟ್ಟಣ - ನುಬ್ರಾ ಕಣಿವೆ - ಸಿಯಾಚಿನ್ ಹಿಮನದಿಯ ಸಮೀಪ.

● - ತಟ್ಟಪಾಣಿ (Tapttapani): ಒರಿಸ್ಸಾ - ಸಟ್ಲಜ್ ನದಿಯ ದಂಡೆಯ ಮೇಲೆ.

● - ಗೌರಿಕುಂಡ್(Gaurikund): ಉತ್ತರಾಖಂಡ - ಮಂದಾಕಿನಿ ನದಿಯ ದಡ - ಪ್ರಸಿದ್ಧ ಕೇದಾರನಾಥ ದೇವಾಲಯ.

● - ರೇಶಿ(Reshi): ಸಿಕ್ಕಿಂ - ರಂಗೀತ್ ನದಿಯ ದಡ - ಅತೀಂದ್ರಿಯ ಯಕ್ಷಯಕ್ಷಿಣಿಯರ ಪವಿತ್ರ ಗುಹೆ 'ಕಾಹ್-ದೋ ಸಾಂಗ್ ಫು'.

● - ಖೀರ್ ಗಂಗಾ (Kheer Ganga): ಹಿಮಾಚಲ ಪ್ರದೇಶ - ಪಾರ್ವತಿ ಕಣಿವೆ.

● - ಮಣಿಕರಣ್ (Manikaran) - ಹಿಮಾಚಲ ಪ್ರದೇಶದ ಕುಲು ಜಿಲ್ಲೆ -ಪಾರ್ವತಿ ನದಿಯ ಪಾರ್ವತಿ ಕಣಿವೆ - ಇದು ಹಿಂದೂಗಳು ಮತ್ತು ಸಿಖ್ಖರಿಗೆ ಜನಪ್ರಿಯ ಯಾತ್ರಾ ಸ್ಥಳ. 

● - ಜ್ವಾಲಾಮುಖಿ (Jwalamukhi): ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆ- ಬಿಯಾಸ್ ನದಿಯ ದಡ.

● - ಅನ್ಹೋನಿ (Anhoni): ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆ.
 
● - ತಪ್ತ ಪಾನಿ (Tapta Pani): ಒಡಿಶಾದ ಕಿಯೋಂಜಾರ್ ಜಿಲ್ಲೆ.