"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 18 June 2016

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು- 2015-16 3. ಯೋಜನೆ: ಜನಧನ ಯೋಜನೆ (Jan Dhan Yojana)

☀️ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು- 2015-16

3. ಯೋಜನೆ:  ಜನಧನ ಯೋಜನೆ
(Jan Dhan Yojana) 
•─━━━━━═══════════━━━━━─••─━━━━━═══════════━━━━━─•

★ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು
(Schemes of central government of India)


💢 ಪರಿಕಲ್ಪನೆ: 

ದೇಶದ ಪ್ರತಿ ಕುಟುಂಬವೂ ಬ್ಯಾಂಕ್ ಖಾತೆ ಹೊಂದಿರಬೇಕು ಎಂಬ ಮಹತ್ವಾಕಾಂಕ್ಷಿ ಯೋಜನೆಯಿದು. ಲೇವಾದೇವಿದಾರರಿಂದ ಬಡವರನ್ನು ರಕ್ಷಿಸುವ ಮತ್ತು ಪ್ರತಿಯೊಬ್ಬರನ್ನೂ ಅರ್ಥಿಕ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದೇ ಹೇಳಬಹುದು.

 2014ರ ಆಗಸ್ಟ್ 15ರಂದು ಸ್ವಾತಂತ್ರ್ಯೊತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಘೊಷಿಸಿದ ಯೋಜನೆ.

ಕಳೆದ 68 ವರ್ಷಗಳಲ್ಲಿ ವರ್ಷಕ್ಕೆ ತರೆಯಲ್ಪಡುತ್ತಿದ್ದ ಬ್ಯಾಂಕ್ ಖಾತೆಗಳ ಸಂಖ್ಯೆ ಬರೀ ಒಂದು ಕೋಟಿ. ಆದರೆ, ಈ ಯೋಜನೆಯಲ್ಲಿ ಉದ್ಘಾಟನೆಗೊಂಡ ದಿನವೇ 1.5 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಇದು ಭಾರತದ ಬ್ಯಾಂಕಿಂಗ್ ಇತಿಹಾಸದಲ್ಲೇ ಒಂದು ದಾಖಲೆ.

ಈ ಖಾತೆಯ ಫಲಾನುಭವಿಗೆ ಒಂದು ಲಕ್ಷ ರೂ. ಅಪಘಾತ ವಿಮೆ, 30 ಸಾವಿರ ರೂ. ಜೀವ ವಿಮೆ, ರುಪೇ ಡೆಬಿಟ್ ಕಾರ್ಡ್ ಹಾಗೂ 5000ರೂ. ಓವರ್​ಡ್ರಾಫ್ಟ್ ಸೌಲಭ್ಯ ಒದಗಿಸಲಾಗಿದೆ. ದೇಶಾದ್ಯಂತ ಯಾವುದೇ ಬ್ಯಾಂಕ್_ಖಾತೆಗೆ ಹಣವನ್ನು ವರ್ಗಾಯಿಸಬಹುದು.


💢ಪರಿಣಾಮ: 

ಬ್ಯಾಂಕಿಂಗ್_ಸೇವೆಯಿಂದ ವಂಚಿತರಾಗಿದ್ದ ಶೇಕಡ 48 ಗ್ರಾಮೀಣ ಭಾಗದ ಬಡಜನರಿಗೆ ಬ್ಯಾಂಕ್ ಖಾತೆ ತೆರೆಯಲು ಅವಕಾಶ ಒದಗಿಸಿದೆ. ಈ ನಿಟ್ಟಿನಲ್ಲಿ ಯೋಜನೆ ದೇಶದ #ಅರ್ಥವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಹೆಜ್ಜೆ. ಆದರೆ, ಈ ಯೋಜನೆಯಡಿಯಲ್ಲಿ ತೆರೆದ ಬಹುತೇಕ ಖಾತೆಗಳು ಚಲಾವಣೆಯಲ್ಲಿ ಇಲ್ಲ ಎಂಬ ಆರೋಪವೂ ಕೇಳಿಬಂದಿದೆ.


💢ಫಲಾನುಭವಿಗಳು: 

2016ರ ಮೇ ತಿಂಗಳ ಲೆಕ್ಕಾಚಾರ ಪ್ರಕಾರ ಒಟ್ಟು 21.7 ಕೋಟಿ ಫಲಾನುಭವಿಗಳು ಈ ಖಾತೆ ತೆರೆದಿದ್ದಾರೆ. ಇವರ ಪೈಕಿ ಶೇಕಡ 61.4ರಷ್ಟು ಗ್ರಾಮೀಣರೂ, ಶೇಕಡ 38.6ರಷ್ಟು ನಗರವಾಸಿಗಳೂ ಆಗಿದ್ದಾರೆ.

ಇವರ ಖಾತೆಯಲ್ಲಿ ಒಟ್ಟು 37,445.1 ಕೋಟಿ ರೂಪಾಯಿ ಜಮೆ ಆಗಿ ಉಳಿತಾಯವಾಗಿದೆ.

 ಶೂನ್ಯ ಠೇವಣಿ ಖಾತೆ ಪ್ರಮಾಣ ವರ್ಷದ ಹಿಂದಿದ್ದ ಶೇಕಡ 53.6ರಿಂದ ಶೇಕಡ 26.4ಕ್ಕೆ ಕುಸಿತ ಕಂಡಿದೆ.
(Courtesy : Vijayavani) 

No comments:

Post a Comment